ಆ್ಯಪ್ನಗರ

ಗೋ ರಕ್ಷಕ ಯುವಕನ ಸಾವಿನ ತನಿಖೆಗೆ ಆಗ್ರಹ

ಹಿಂದೂ ಯುವ ಕಾರ್ಯಕರ್ತ, ಗೋ ರಕ್ಷ ಕ ಶಿವು ಉಪ್ಪಾರ ಸಾವಿನ ಕುರಿತು ಸಿಬಿಐ ಇಲ್ಲವೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

Vijaya Karnataka 31 May 2019, 5:00 am
ದಾವಣಗೆರೆ : ಹಿಂದೂ ಯುವ ಕಾರ್ಯಕರ್ತ, ಗೋ ರಕ್ಷ ಕ ಶಿವು ಉಪ್ಪಾರ ಸಾವಿನ ಕುರಿತು ಸಿಬಿಐ ಇಲ್ಲವೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
Vijaya Karnataka Web go protector wants to investigate the death of a young man
ಗೋ ರಕ್ಷಕ ಯುವಕನ ಸಾವಿನ ತನಿಖೆಗೆ ಆಗ್ರಹ


ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು 19 ವರ್ಷದ ಯುವಕ ಶಿವು ಉಪ್ಪಾರನ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸಂಶಯ ವ್ಯಕ್ತವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಎಸಿಗೆ ಮನವಿ ಸಲ್ಲಿಸಿದರು.

ಹಿಂದೂ ಜಾಗರಣಾ ವೇದಿಕೆ ಮುಖಂಡ ಎಚ್‌.ಟಿ.ವೀರೇಶ್‌ ಮಾತನಾಡಿ, ಶಿವು ಉಪ್ಪಾರ ಹಿಂದೂ ಸಮಾಜಕ್ಕಾಗಿ ಹೋರಾಟ ಮಾಡುತ್ತಿದ್ದ. ಗೋ ರಕ್ಷ ಣೆಗೆ ಸದಾ ಮುಂದಾಗುತ್ತಿದ್ದ. ಬೆಳಗಾವಿ ಜಿಲ್ಲೆಯಲ್ಲಿ ಹಿಂದೂಗಳ ಹೋರಾಟದಲ್ಲಿ ಪಾಲ್ಗೊಳ್ಳುತ್ತಾ, ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ. ಮೇ 25ರಂದು ರಾತ್ರಿ ನಡೆದ ಧರ್ಮ ವಿಧ್ವಂಸಕರ ಕೃತ್ಯಕ್ಕೆ ಬಲಿಯಾಗಿದ್ದಾನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರಕಾರದ ಮುಸ್ಲಿಂ ತುಷ್ಟೀಕರಣದ ನೀತಿಯಿಂದ ಈಗಾಗಲೇ ಹಿಂದೂ ಧರ್ಮವು ಅನೇಕ ಹಿಂದೂ ಕಾರ್ಯಕರ್ತರನ್ನು ಕಳೆದುಕೊಂಡಿದೆ. ಸರಕಾರದ ನಿರ್ಲಕ್ಷ ್ಯ, ಕಿವುಡುತನ, ಬೇಜವಾಬ್ದಾರಿತನವನ್ನು ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಧರ್ಮ ರಕ್ಷ ಕನಂತಿದ್ದ ಶಿವು ಉಪ್ಪಾರ ಸಾವಿನ ತನಿಖೆ ನಡೆಯಬೇಕು. ಆರೋಪಿಗಳನ್ನು ಕೂಡಲೇ ಬಂಧಿಸಿ, ಅವರನ್ನು ಗಲ್ಲಿಗೇರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸತೀಶ್‌ ಪೂಜಾರಿ, ಪಿ.ಸಿ.ಶ್ರೀನಿವಾಸ್‌, ಟಿಂಕರ್‌ ಮಂಜಣ್ಣ, ಸುರೇಂದ್ರ ಮೊಯ್ಲಿ, ಗೌತಮ್‌ ಜೈನ್‌, ಶಿವನಗೌಡ ಪಾಟೀಲ್‌, ಧನುಶ್‌ರೆಡ್ಡಿ, ಮಲ್ಲಿಕಾರ್ಜುನ್‌, ರಾಕೇಶ್‌, ಚೇತನ್‌, ವಿಶ್ವನಾಥ್‌, ಮಂಜುನಾಥ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ