ಆ್ಯಪ್ನಗರ

ಚಿನ್ನದ ಆಮಿಷ: ಇಬ್ಬರು ಆರೋಪಿಗಳ ಬಂಧನ

ಕಡಿಮೆ ಬೆಲೆಗೆ ಚಿನ್ನದ ನಾಣ್ಯ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 6 ಲಕ್ಷ ರೂ. ಪಡೆದು ವಂಚಿಸಿ ಪರಾರಿ ಆಗಿದ್ದ ಆರೋಪಿಗಳಿಬ್ಬರನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ.

Vijaya Karnataka 25 Sep 2018, 4:21 pm
ಜಗಳೂರು : ಕಡಿಮೆ ಬೆಲೆಗೆ ಚಿನ್ನದ ನಾಣ್ಯ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 6 ಲಕ್ಷ ರೂ. ಪಡೆದು ವಂಚಿಸಿ ಪರಾರಿ ಆಗಿದ್ದ ಆರೋಪಿಗಳಿಬ್ಬರನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web gold loot two accused arrested
ಚಿನ್ನದ ಆಮಿಷ: ಇಬ್ಬರು ಆರೋಪಿಗಳ ಬಂಧನ


ಜಗಳೂರು ಪಟ್ಟಣದ ಎನ್‌ಜಿಓ ಬಡಾವಣೆಯ ಕೆ.ಎಚ್‌.ಹನುಮಂತಪ್ಪ ಹಾಗೂ ತಾಲೂಕಿನ ಬಸಾಪುರ ಗ್ರಾಮದ ರಘುನಾಥ್‌ ಬಂಧಿತರು.

ಕೋಲಾರ ಜಿಲ್ಲೆಯ ಹುತ್ತೂರು ಹೋಬಳಿಯ ವಿಟ್ಟಪ್ಪನಹಳ್ಳಿ ಗ್ರಾಮದ ಶ್ರೀನಿವಾಸ ಎಂಬಾತನನ್ನು ಆರೋಪಿಗಳು ನಮ್ಮ ಮನೆ ಪಾಯ ತೆಗೆಯುವಾಗ ಚಿನ್ನದ ನಾಣ್ಯಗಳು ಸಿಕ್ಕಿದ್ದು, ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಕರೆಸಿಕೊಂಡಿದ್ದಾರೆ. ನಂತರ 6 ಲಕ್ಷ ರೂ. ಪಡೆದು ಮನೆಗೆ ಹೋಗಿ ನಾಣ್ಯ ತರುತ್ತೇವೆ ಎಂದು ಪರಾರಿಯಾಗಿದ್ದರು.

ಶ್ರೀನಿವಾಸ ಸೆ.23ರಂದು ದೂರು ಸಲ್ಲಿಸಿದ್ದರು. ಡಿವೈಎಸ್‌ಪಿ ಹಾಗೂ ವೃತ್ತ ನಿರೀಕ್ಷ ಕರ ಮಾರ್ಗದರ್ಶನದಲ್ಲಿ ಪಿಎಸ್‌ಐ ಇಮ್ರಾನ್‌ಬೇಗ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ 5,80,000 ಸಾವಿರ ನಗದು ಹಣ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೇದೆಗಳಾದ ಗೋವಿಂದರಾಜ್‌, ನಾಗಭೂಷಣ್‌, ಲಿಂಗೇಶ್‌, ಪ್ರವೀಣ್‌ಪಾಟೀಲ್‌, ಮಂಜುನಾಥ್‌, ವಿನಾಯಕ, ಉಮಾಶಂಕರ್‌, ಹಾಲೇಶ್‌, ರಾಮಚಂದ್ರ ಜಾದವ್‌, ರಮೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ