ಆ್ಯಪ್ನಗರ

ಡಿಕೆಶಿ ಪದಗ್ರಹಣಕ್ಕೆ ಸರಕಾರ ಅಡ್ಡಿ ಮಾಡೋಲ್ಲ: ರೇಣುಕಾಚಾರ್ಯ

ಸರಕಾರದಲ್ಲಿ ಭಿನ್ನಮತ ಇಲ್ಲ, ಬಿಎಸ್‌ವೈ ಮಾಸ್‌ಲೀಡರ್‌ ಆಗಿದ್ದು, ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರೇ ಮೂರು ವರ್ಷ ಸಿಎಂ ಆಗುತ್ತಾರೆ. ಡಿಕೆಶಿ ರಿವರ್ಸ್‌ ಆಪರೇಷನ್‌ ನಡೆಯೋದಿಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.

Vijaya Karnataka Web 5 Jun 2020, 8:26 pm
ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಪದಗ್ರಹಣಕ್ಕೆ ಸರಕಾರ ಅಡ್ಡಿ ಮಾಡೋದಿಲ್ಲ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಶುಕ್ರವಾರ ಹೇಳಿದರು.
Vijaya Karnataka Web ರೇಣುಕಾಚಾರ್ಯ
ರೇಣುಕಾಚಾರ್ಯ


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಸಿಎಂ ಆಗುತ್ತೇನೆ ಎಂದು ಭ್ರಮಲೋಕದಲ್ಲಿ ತೇಲುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ತೊಘಲಕ್‌ ದರ್ಬಾರ್‌ ಮಾಡಿದ್ರು. ನಾವು ಆ ರೀತಿ ಮಾಡಿಲ್ಲ, ಪದಗ್ರಹಣಕ್ಕೂ ಅಡ್ಡಿ ಮಾಡೋಲ್ಲ. ಪೈಲ್ವಾನ್‌ ರೀತಿ ಎದೆಯುಬ್ಬಿಸಿ ಡಿಕೆಶಿ ಮುಂದೇ ಬರುತ್ತಿದ್ದಾರೆ. ಪದಗ್ರಹಣವನ್ನು ನಿಯಮಾನುಸಾರ ಮಾಡಿಕೊಳ್ಳಲಿ ಯಾರು ಬೇಡ ಎನ್ನುತ್ತಾರೆ. ಮೊಸರಲ್ಲಿ ಕಲ್ಲು ಹುಡುಕುವುದನ್ನು ಕಾಂಗ್ರೆಸ್‌ ಬಿಡಲಿ. ಅದ್ದೂರಿ ಕಾರ್ಯಕ್ರಮ ಬಿಟ್ಟು ಸರಳವಾಗಿ ಮಾಡಲಿ ಯಾರು ಬೇಡ ಅನ್ನಲ್ಲ ಎಂದು ಅವರು ಹೇಳಿದರು.

ಸೂಪರ್‌ ಸಿಎಂ ವಿಜಯೇಂದ್ರ ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ವಿಜಯೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಸರಕಾರದಲ್ಲಿ ಇದುವರೆಗೂ ಅವರು ಹಸ್ತಕ್ಷೇಪ ಮಾಡಿಲ್ಲ. ನಮ್ಮಲ್ಲಿ ಎರಡು ಪವರ್‌ ಸೆಂಟರ್‌ ಇಲ್ಲ. ವಿಜಯೇಂದ್ರ ಪಕ್ಷ ಸಂಘಟನೆ ಮಾಡ್ತಾ ಇದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಪುತ್ರ ಯತೀಂದ್ರ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.

ಸರಕಾರದಲ್ಲಿ ಭಿನ್ನಮತ ಇಲ್ಲ, ಬಿಎಸ್‌ವೈ ಮಾಸ್‌ಲೀಡರ್‌ ಆಗಿದ್ದು, ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರೇ ಮೂರು ವರ್ಷ ಸಿಎಂ ಆಗುತ್ತಾರೆ. ಡಿಕೆಶಿ ರಿವರ್ಸ್‌ ಆಪರೇಷನ್‌ ನಡೆಯೋದಿಲ್ಲ. ನಾವೆಲ್ಲ ಒಗ್ಗಾಟ್ಟಾಗಿ ಇದ್ದೇವೆ. ಕಾರ್ಯಕರ್ತರ ಪಡೆ ಗಟ್ಟಿಯಾಗಿದೆ. ಯಾವುದೇ ಕಾರಣಕ್ಕೂ ರಿವರ್ಸ್‌ ಆಪರೇಷನ್‌ ನಡೆಯೋಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ