ಆ್ಯಪ್ನಗರ

ವರುಣನ ಕೃಪೆಗಾಗಿ ಮಕ್ಕಳಿಂದ ಗುರ್ಜಿ ಪೂಜೆ

ಪಟ್ಟಣದ ವಾಲ್ಮೀಕಿ ನಗರದ ಹುಲ್ಲುಗರಡಿಕೇರಿಯ ಯುವಕರು, ಮಕ್ಕಳು ವರುಣನ ಕೃಪೆಗಾಗಿ ಪ್ರಾರ್ಥಿಸಿ ಸೋಮವಾರ ಗುರ್ಜಿ ಪೂಜೆ ಮಾಡಿದರು.

Vijaya Karnataka 23 Jul 2019, 5:00 am
ಹರಪನಹಳ್ಳಿ: ಪಟ್ಟಣದ ವಾಲ್ಮೀಕಿ ನಗರದ ಹುಲ್ಲುಗರಡಿಕೇರಿಯ ಯುವಕರು, ಮಕ್ಕಳು ವರುಣನ ಕೃಪೆಗಾಗಿ ಪ್ರಾರ್ಥಿಸಿ ಸೋಮವಾರ ಗುರ್ಜಿ ಪೂಜೆ ಮಾಡಿದರು.
Vijaya Karnataka Web gurji worship by children for varunas grace
ವರುಣನ ಕೃಪೆಗಾಗಿ ಮಕ್ಕಳಿಂದ ಗುರ್ಜಿ ಪೂಜೆ


ಬೆಳವಣಿಗೆ ಹಂತದಲ್ಲಿರುವ ಬೆಳೆಗಳು ಸಮೃದ್ಧವಾಗಿ ಬೆಳೆಯಲು ಪ್ರಾರ್ಥಿಸಿ ಆಕಳು ಸಗಣಿಯಿಂದ ಮಾಡಿದ ಗುರ್ಜವ್ವನ ಗೊಂಬೆಗಳನ್ನು ಮಣಿಯ ಮೇಲೆ ಇಟ್ಟು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ನಂತರ ಯುವಕನೊಬ್ಬ ಗುರ್ಜವ್ವನನ್ನು ಹೊತ್ತುಕೊಂಡು ಮನೆ ಮನೆ ಹೋಗಿ ನಿಂತಾಗ, ಮನೆಯವರು ನಿರೇರೆದು ವಿವಿಧ ಬಗೆಯ ದವಸ ಧಾನ್ಯಗಳನ್ನು ನೀಡಿದರು.

ಸಂಗ್ರಹವಾದ ದವಸ ಧಾನ್ಯಗಳನ್ನು 9 ಅಥವಾ 15 ದಿನಗಳಲ್ಲಿ ಅಡುಗೆ ತಯಾರಿಸಿಕೊಂಡು ಯುವಕರೆಲ್ಲರು ಹಳ್ಳದ ದಂಡೆ ಮೇಲೆ ತೆರಳಿ ಊಟ ಸವಿಯುತ್ತಾರೆ. ಈ ಸಂದರ್ಭದಲ್ಲಿ ಕುಡಿಯಲು ನೀರಿಲ್ಲ, ದೇವರು ಮಳೆಯ ರೂಪದಲ್ಲಿ ಬಂದು ಕೆರೆ, ಹಳ್ಳ-ಕೊಳ್ಳಗಳು ತುಂಬುತ್ತವೆ ಎಂಬ ನಂಬಿಕೆ ಇಲ್ಲಿಯ ಜನರಲ್ಲಿ ನೆಲೆಯೂರಿದೆ.

ಪೂಜೆಯಲ್ಲಿ ಎಂ.ಪ್ರಕಾಶ, ಕೆ.ಅಂಜಿನಪ್ಪ, ಕೆ.ಪರುಸಪ್ಪ, ಕೆ.ಕೆಂಚಪ್ಪ, ಜಿ.ಹನುಮಂತ, ಎ.ನಾಗರಾಜ, ಪಿ.ಮಣಿಕಂಠ ಹಾಗೂ ವಾಲ್ಮೀಕಿ ನಗರದ ಹುಲ್ಲುಗರಡಿಕೇರಿಯ ದೈವಸ್ಥರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ