ಆ್ಯಪ್ನಗರ

ಜೂನ್‌ 21ಕ್ಕೆ ‘ಹಫ್ತಾ’ ಚಿತ್ರ ಬಿಡುಗಡೆ

ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕು ಎಂಬ ಕಥಾಹಂದರ ಹೊಂದಿರುವ 'ಹಫ್ತಾ' ಚಿತ್ರ ಜೂನ್‌ 21ಕ್ಕೆ ರಾಜ್ಯಾದ್ಯಂತ 150 ಥಿಯೇಟರ್‌ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಾಯಕನಟ ವರ್ಧನ್‌ ತೀರ್ಥಹಳ್ಳಿ ಹೇಳಿದರು.

Vijaya Karnataka 19 Jun 2019, 5:00 am
ದಾವಣಗೆರೆ : ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕು ಎಂಬ ಕಥಾಹಂದರ ಹೊಂದಿರುವ 'ಹಫ್ತಾ' ಚಿತ್ರ ಜೂನ್‌ 21ಕ್ಕೆ ರಾಜ್ಯಾದ್ಯಂತ 150 ಥಿಯೇಟರ್‌ಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಾಯಕನಟ ವರ್ಧನ್‌ ತೀರ್ಥಹಳ್ಳಿ ಹೇಳಿದರು.
Vijaya Karnataka Web hafta released on june 21
ಜೂನ್‌ 21ಕ್ಕೆ ‘ಹಫ್ತಾ’ ಚಿತ್ರ ಬಿಡುಗಡೆ


ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರವೂ ವಿಭಿನ್ನ ಕತೆ ಹೊಂದಿದ್ದು, ಮನರಂಜನೆ ಜತೆ ಸಾಮಾಜಿಕ ಸಂದೇಶ ನೀಡಿದೆ. ಸುಮಾರು 40 ಚಿತ್ರಗಳಲ್ಲಿ ಪೋಷಕ ನಟನಾಗಿ, ಖಳನಟನಾಗಿ ಅಭಿನಿಯಿಸಿದ್ದು, ಪ್ರಥಮಬಾರಿಗೆ ನಾಯಕ ನಟನಾಗಿದ್ದೇನೆ. ಎರಡು ಶೇಡ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮಾಸ್‌ ಹಾಗೂ ಮಂಗಳಮುಖಿ ಪಾತ್ರ ಇದ್ದು, ಈ ಪಾತ್ರದ ಮೂಲಕ ಸಮಾಜಕ್ಕೆ ಸಂದೇಶವೂ ಇದೆ. ಟ್ರೇಲರ್‌ಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕರು ಹೊಸಬರೇ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, 'ಹಫ್ತಾ' ಚಿತ್ರದ ಶೀರ್ಷಿಕೆಗೆ 'ಸೆಂಟಿಮೆಂಟ್‌ ನಾಟ್‌ ಆಲೋಡ್‌' ಎಂಬ ಟ್ಯಾಗ್‌ ಲೈನ್‌ ಅಡಿಬರಹವಿದೆ.

ಚಿತ್ರದಲ್ಲಿ ಯಾರಿಂದಲೂ ಹಫ್ತಾ ವಸೂಲಿ ಮಾಡುವ ಅಂಶ ಇಲ್ಲ. ಭೂಗತಲೋಕದ ಚಟುವಟಿಕೆಗಳು ಮತ್ತು ಸುಪಾರಿ ಕಿಲ್ಲಿಂಗ್‌ ಅಂಶಗಳೇ ಚಿತ್ರದ ಕಥಾ ವಸ್ತುವಾಗಿದ್ದು, ಸಸ್ಫೆನ್ಸ್‌- ಥ್ರಿಲ್ಲರ್‌ ಚಿತ್ರ ಇದು. ರಾಘವ ನಾಗ್‌, ಬಿಂಬಶ್ರೀ ನೀನಾಸಂ, ಸೌಮ್ಯ, ಬಾಲ ರಾಜವಾಡಿ, ದಶಾವರ ಚಂದ್ರು, ಉಗ್ರಂ ರವಿ ಇದ್ದಾರೆ. ಮಂಗಳೂರು, ಮುರುಡೇಶ್ವರ, ಗೋಕರ್ಣ , ಬೆಂಗಳೂರಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಜಯ್‌ ಸಂಗೀತ, ಗೌತಮ್‌ ಶ್ರೀವತ್ಸ ಸಂಗೀತ ನೀಡಿದ್ದಾರೆ. ಪ್ರಕಾಶ್‌ ಹೆಬ್ಬಾಳ ಚಿತ್ರಕ್ಕೆ ಕಥೆ, ಚಿತ್ರಕಥೆ ಜತೆ ಚೊಚ್ಚಲ ನಿರ್ದೇಶನ ಮಾಡಿದ್ದಾರೆ. ಮೈತ್ರಿ ಮಂಜುನಾಥ್‌ರದು ನಿರ್ಮಾಣ ಎಂದರು.

ಮತ್ತೊಬ್ಬ ನಾಯಕನಟ ರಾಘವನಾಗ್‌ ಮಾತನಾಡಿ, ಇದು ನನ್ನ 3ನೇ ಸಿನಿಮಾ. ವಿಭಿನ್ನ ಕತೆ ಚಿತ್ರದಲ್ಲಿದೆ. ಇಬ್ಬರು ನಾಯಕಿಯರಿದ್ದು, ಬಿಂಬಶ್ರೀ ನೀನಾಸಂ, ಮಾಡೆಲ್‌ ಸೌಮ್ಯ ಅಭಿನಯಿಸಿದ್ದಾರೆ ಎಂದರು.

ಚಿತ್ರದ ನಿರ್ದೇಶಕ ಪ್ರಕಾಶ್‌ ಹೆಬ್ಬಾಳ ಮಾತನಾಡಿ, ಚಿತ್ರದಲ್ಲಿ ಹಲವು ಟ್ವಿಸ್ಟ್‌ಗಳಿವೆ. ಹಲವು ನಿರ್ದೇಶಕರ ಬಳಿ ಸಹಾಯಕನಾಗಿ ದುಡಿದು ಮೊದಲ ಬಾರಿ ಆ್ಯಕ್ಷ ನ್‌ ಕಟ್‌ ಹೇಳಿದ್ದೇನೆ. ದಾವಣಗೆರೆ ಬಸವರಾಜ್‌ ಸಂಭಾಷಣೆ ಬರೆದಿದ್ದಾರೆ. ಮಾಸ್‌ ಚಿತ್ರವಾದರೂ ಹಿರೋಯಿಸಂ ಇಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಭಾಷಣೆಕಾರ ಬಸವರಾಜ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ