ಆ್ಯಪ್ನಗರ

ಬಳ್ಳಾರಿಗೆ ಹರಪನಹಳ್ಳಿ ಹೊರಬಿದ್ದ ಆದೇಶ

ಹರಪನಹಳ್ಳಿ ತಾಲೂಕನ್ನು ವಾಪಸ್‌ ಬಳ್ಳಾರಿಗೆ ಜಿಲ್ಲೆಗೆ ಸೇರಿಸುವ ಸಂಬಂಧ ಕೈಗೊಂಡ ತೀರ್ಮಾನದ ಅಧಿಕೃತ ಆದೇಶ ಹೊರ ಬಿದ್ದಿದೆ. ಸರಕಾರ ಬುಧವಾರದಂದು ಹರಪನಹಳ್ಳಿ ತಾಲೂಕನ್ನು ಬಳ್ಳಾರಿಗೆ ಜಿಲ್ಲೆಗೆ ಸೇರಿಸಿರುವ ಆದೇಶ ಹೊರಡಿಸಿದೆ.

Vijaya Karnataka 23 Mar 2018, 8:18 am
ದಾವಣಗೆರೆ: ಹರಪನಹಳ್ಳಿ ತಾಲೂಕನ್ನು ವಾಪಸ್‌ ಬಳ್ಳಾರಿಗೆ ಜಿಲ್ಲೆಗೆ ಸೇರಿಸುವ ಸಂಬಂಧ ಕೈಗೊಂಡ ತೀರ್ಮಾನದ ಅಧಿಕೃತ ಆದೇಶ ಹೊರ ಬಿದ್ದಿದೆ. ಸರಕಾರ ಬುಧವಾರದಂದು ಹರಪನಹಳ್ಳಿ ತಾಲೂಕನ್ನು ಬಳ್ಳಾರಿಗೆ ಜಿಲ್ಲೆಗೆ ಸೇರಿಸಿರುವ ಆದೇಶ ಹೊರಡಿಸಿದೆ.
Vijaya Karnataka Web harappanahallis order ordered to bellary
ಬಳ್ಳಾರಿಗೆ ಹರಪನಹಳ್ಳಿ ಹೊರಬಿದ್ದ ಆದೇಶ


ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ, ಸರಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಾದೇಶಿಕ ಆಯುಕ್ತರು, ಬಳ್ಳಾರಿ, ದಾವಣಗೆರೆ ಡಿಸಿ, ಮತ್ತು ಎರಡೂ ಜಿಲ್ಲೆಯ ಸಿಇಒಗಳಿಗೆ ಈ ಆದೇಶ ಪ್ರತಿಯನ್ನು ಕಳುಹಿಸಲಾಗಿದೆ.

371 ಜೆ ಸೌಲಭ್ಯ:

ಬಳ್ಳಾರಿ ಜಿಲ್ಲೆಯ ಕಂದಾಯ ವ್ಯಾಪ್ತಿಗೆ ಒಳಪಟ್ಟಿದ್ದ ಹರಪನಹಳ್ಳಿ ತಾಲೂಕನ್ನು ಜಿಲ್ಲೆಗಳ ಪುನರ್‌ ವಿಂಗಡಣೆ ವೇಳೆ ದಾವಣಗೆರೆ ಜಿಲ್ಲೆಯ ಕಂದಾಯ ವ್ಯಾಪ್ತಿಗೆ ತರಲಾಗಿರುತ್ತದೆ. ಆದರೆ ಹರಪನಹಳ್ಳಿ ತಾಲೂಕು ಬಹಳ ಹಿಂದುಳಿದಿದ್ದು ಈ ತಾಲೂಕನ್ನು ಹಿಂದೆ ಇದ್ದಂತೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಸೇರಿಸಿ ಅನುಚ್ಚೇದ 371 ಜೆ ಸೌಲಭ್ಯಗಳನ್ನು ವಿಸ್ತರಿಸಬೇಕೆಂದು ಹಲವು ಮನವಿಗಳು ಸರಕಾರಕ್ಕೆ ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲೂಕನ್ನು ಈ ಹಿಂದೆ ಇದ್ದಂತೆ ಬಳ್ಳಾರಿ ಜಿಲ್ಲೆ ವ್ಯಾಪ್ತಿಗೆ ತರಲು ಸರಕಾರ ತೀರ್ಮಾನಿಸಿ ಪ್ರಕಟಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಾರತೀಯ ಸಂವಿಧಾನದಲ್ಲಿ ತರಲಾದ ತಿದ್ದುಪುಡಿ ಅನುಚ್ಚೇದ 371 ಜೆ ಸೇರ್ಪಡೆಯೊಂದಿಗೆ ಹೈದ್ರಾಬಾದ್‌ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಬೀದರ, ಕಲ್ಬುರ್ಗಿ,ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳು 371 ಜೆ ನಂತೆ ವಿಶೇಷ ಸ್ಥಾನಮಾನ ಹೊಂದಿವೆ. ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ತಾಲೂಕು, ಹೋಬಳಿ ಮತ್ತು ಗ್ರಾಮಗಳು ಈ ಸವಲತ್ತುಗಳಿಗೆ ಅರ್ಹತೆ ಹೊಂದಿರುತ್ತವೆ ಎಂಬ ನಿಯಮವನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸರಕಾರಿ ಆದೇಶ ಹೊರ ಬಿದ್ದಿದೆ. ಈ ಬಗ್ಗೆ ಕೇಂದ್ರ ಗೃಹ ಮಂತ್ರಾಲಯ ಪರಿಶೀಲನೆ ನಡೆಸಿ ಪಾರ್ಲಿಮೆಂಟ್‌ ಅಮೆಂಡ್‌ಮೆಂಟ್‌ ಆಗಬೇಕು. ಆಗ 371 ಜೆ ಸೌಲಭ್ಯಗಳು ಹರಪನಹಳ್ಳಿಗೆ ಧಕ್ಕಲಿವೆ.

- ಡಿ.ಎಸ್‌.ರಮೇಶ್‌, ಡಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ