ಆ್ಯಪ್ನಗರ

ಹರಿಹರ ಮೇರಿ ಮಾತೆ ಮಹೋತ್ಸವ

ನಗರದ ಆರೋಗ್ಯ ಮಾತೆ ಚರ್ಚ್‌ನಲ್ಲಿ ಆಗಸ್ಟ್‌ 30 ರಿಂದ 9ರವರೆಗೆ ಮೇರಿ ಮಾತೆ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಫಾದರ್‌ ಡಾ.ಅಂತೋನಿ ಪೀಟರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijaya Karnataka 1 Sep 2018, 5:00 am
ಹರಿಹರ: ನಗರದ ಆರೋಗ್ಯ ಮಾತೆ ಚರ್ಚ್‌ನಲ್ಲಿ ಆಗಸ್ಟ್‌ 30 ರಿಂದ 9ರವರೆಗೆ ಮೇರಿ ಮಾತೆ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಫಾದರ್‌ ಡಾ.ಅಂತೋನಿ ಪೀಟರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vijaya Karnataka Web harihar marie is the mother jubilee
ಹರಿಹರ ಮೇರಿ ಮಾತೆ ಮಹೋತ್ಸವ


ಆ.30ರ ಸಂಜೆ 5ಕ್ಕೆ ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ವಿಶೇಷ ಪ್ರಾರ್ಥನಾ ವಿಧಿವಿಧಾನಗಳನ್ನು ನಡೆಸಲಾಯಿತು. 'ಹರಿಹರದ ಆರೋಗ್ಯ ಮಾತೆ ನೊಂದ ಬಾಳಿಗೆ ಸೌಖ್ಯದಾತೆ' ಎಂಬ ಧ್ಯೇಯ ವಾಕ್ಯದಡಿ ನಡೆಯುತ್ತಿರುವ ಪ್ರಸಕ್ತ ವರ್ಷದ ಉತ್ಸವ ದೇಶದ ಸರ್ವರಿಗೆ ಸುಖ, ಶಾಂತಿ, ನೆಮ್ಮದಿಯ ಜೀವನ ದೊರಕಲೆಂಬ ಉದ್ದೇಶ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಸೆ.7 ರಂದು ಬೆಂಗಳೂರು ಮಹಾಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ.ಫೀಟರ್‌ ಮಚಾದೋ ನೇತೃತ್ವದಲ್ಲಿ ಕನ್ನಡದಲ್ಲಿ ಬಲಿಪೂಜೆ ಮತ್ತು ಸಂಜೆ 5.30ಕ್ಕೆ ಸಹ ಬಲಿಪೂಜೆ. ಫಾ.ಫ್ರಾಂಕ್ಲಿನ್‌ ಡಿಸೋಜಾ, ಫಾ.ರೋಮನ್‌ ಪಿಂಟೋ, ಬ್ರ.ಟಿ.ಕೆ.ಜಾರ್ಜ್‌, ಬ್ರ.ವಿಲಿಯಂ ಡಿಸೋಜಾ ನೇತೃತ್ವದಲ್ಲಿ ಪರಮ ಪ್ರಸಾದದ ವಿಶೇಷ ಪೂಜೆ. ನಂತರ ರೋಗಿಗಳಿಗೋಸ್ಕರ ಪ್ರತ್ಯೇಕ ಪ್ರಾರ್ಥನೆ ನಡೆಯಲಿದೆ.

ಸೆ.8ರ ಬೆಳಿಗ್ಗೆ 5.30ರಿಂದ ಭದ್ರಾವತಿಯ ಧರ್ಮಾಧ್ಯಕ್ಷ ಡಾ.ಜೋಸೆಫ್‌ ಅರುಮಚಾಡತ್‌ ನೇತೃತ್ವದಲ್ಲಿ ಕನ್ನಡ, ತೆಲುಗು, ಮಲಯಾಳಂ, ಗುಲ್ಬರ್ಗಾದ ಧರ್ಮಾಧ್ಯಕ್ಷ ಡಾ.ರಾಬರ್ಟ್‌ ಮಿರಾಂದ ನೇತೃತ್ವದಲ್ಲಿ ತಮಿಳು ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ಬಲಿ ಪೂಜೆ. 11.15ಕ್ಕೆ ಶಿವಮೊಗ್ಗ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್‌ ಸೆರಾವೋ ಹರಿಹರ ಪುರಪ್ರವೇಶ ಮಾಡಲಿದ್ದು, ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆತರಲಾಗುವುದು. ನಂತರ ಸಂಜೆ 5.30ಕ್ಕೆ ಪುಷ್ಪಾಲಂಕೃತ ತೇರಿನ ಮಹಾ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ