ಆ್ಯಪ್ನಗರ

ದಾವಣಗೆರೆ: ಭಾರೀ ಗಾಳಿ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

ಮಲೆಬೆನ್ನೂರಿನಲ್ಲಿ ಸುರಿದ ಭಾರೀ ಗಾಳಿ ಮಳೆಗೆ 100ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ನೆಲಕಚ್ಚಿದ್ದರೆ, 250ರಿಂದ 300ಕ್ಕೂ ಹೆಚ್ಚು ಅಡಿಕೆ ಮರಗಳು, ಸುಮಾರು 22 ತೇಗದ ಮರಗಳು ನೆಲಕ್ಕುರುಳಿವೆ. ಕೊಯ್ಲಿಗೆ ಬಂದಿರುವ ಬೆಳೆ ನೆಲಕ್ಕುರುಳಿದ ಪರಿಣಾಮ ನೀರಿನಲ್ಲಿ ಭತ್ತದ ತೆನೆಗಳು ಮುಳುಗುವುದರಿಂದ, ಗದ್ದೆಯಲ್ಲಿ ನೀರು ನಿಂತರೆ ಭತ್ತ ತೆನೆಯಲ್ಲೇ ಮೊಳಕೆಯೊಡೆದು ಹಾನಿಯಾಗುವ ಸಾಧ್ಯತೆಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Vijaya Karnataka Web 15 May 2020, 8:08 am
ಮಲೆಬೆನ್ನೂರು: ಮಲೆಬೆನ್ನೂರು ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಸುರಿದ ಭಾರೀ ಗಾಳಿ ಮಳೆಗೆ ಕೊಯ್ಲಿಗೆ ಬಂದಿದ್ದ ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದ್ದು, ಬಾಳೆ, ಅಡಕೆ, ತೆಂಗಿನ ಮರಗಳು ನೆಲಕ್ಕುರುಳಿ ಕೋಟ್ಯಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದೆ. ಭಾರೀ ಗಾಳಿಯ ಪರಿಣಾಮ ಮಲೆಬೆನ್ನೂರಿನಲ್ಲಿ 100ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ನೆಲಕಚ್ಚಿದ್ದರೆ, 250ರಿಂದ 300ಕ್ಕೂ ಹೆಚ್ಚು ಅಡಕೆ ಮರಗಳು, ಸುಮಾರು 22 ತೇಗದ ಮರಗಳು ನೆಲಕ್ಕುರುಳಿವೆ. ಸುಮಾರು 2.5 ಎಕರೆಯಲ್ಲಿನ ಬಾಳೆ ನೆಲಕಚ್ಚಿದೆ. ಕುಂಬಳೂರಿನಲ್ಲಿಸುಮಾರು 475 ಎಕರೆ ಭತ್ತದ ಬೆಳೆ, 6 ಅಡಕೆ ಮರ, 8 ತೆಂಗಿನ ಮರಗಳು, ನಿಟ್ಟೂರಿನಲ್ಲಿ ಸುಮಾರು 250 ಎಕರೆ ಭತ್ತದ ಬೆಳೆ, 6 ತೆಂಗಿನ ಮರಗಳು, 4 ಅಡಕೆ ಮರಗಳು ನೆಲಕ್ಕುರುಳಿವೆ.
Vijaya Karnataka Web ಸಾಂದರ್ಭಿಕ ಚಿತ್ರ


ಆದಾಪುರದಲ್ಲಿ ಸುಮಾರು 80 ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ನಂದಿತಾವರೆ ಹಾಗೂ ಕುಣೆಬೆಳಕೆರೆಯಲ್ಲಿ ಸುಮಾರು 120ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ನೆಲಕಚ್ಚಿದೆ.

ರೈತರ ಆತಂಕ
ಕೊಯ್ಲಿಗೆ ಬಂದಿರುವ ಬೆಳೆ ನೆಲಕ್ಕುರುಳಿದ ಪರಿಣಾಮ ನೀರಿನಲ್ಲಿ ಭತ್ತದ ತೆನೆಗಳು ಮುಳುಗುವುದರಿಂದ, ಗದ್ದೆಯಲ್ಲಿ ನೀರು ನಿಂತರೆ ಭತ್ತ ತೆನೆಯಲ್ಲೇ ಮೊಳಕೆಯೊಡೆದು ಹಾನಿಯಾಗುವ ಸಾಧ್ಯತೆಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎತ್ತರ ಬೆಳೆಯುವ ಆರ್‌ಎನ್‌ಆರ್‌, ಶ್ರೀರಾಮ್‌ ಸೋನಾ ಭತ್ತದ ಬೆಳೆ ಈಗಾಗಲೇ ಕೊಯ್ಲಿಗೆ ಬಂದಿದ್ದು, ಈ ಬೆಳೆಯೇ ಹಾನಿಯಾಗಿದೆ.

ಶಾಸಕರು ಪರಿಶೀಲನೆ
ಮಲೆಬೆನ್ನೂರು, ಕುಂಬಳೂರು ಗ್ರಾಮಗಳಲ್ಲಿ ಗಾಳಿ ಮಳೆಗೆ ಹಾನಿಗೊಳಗಾದ ಭತ್ತದ ಗದ್ದೆ, ಅಡಕೆ, ತೆಂಗು, ಬಾಳೆ ತೋಟಗಳ ವೀಕ್ಷಣೆಗೆ ಗುರುವಾರ ಶಾಸಕ ಎಸ್‌.ರಾಮಪ್ಪ, ಜಿಪಂ ಸದಸ್ಯ ಬಿ.ಎಂ.ವಾಗೀಶ್‌ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್‌, ತಹಸೀಲ್ದಾರ್‌ ರಾಮಚಂದ್ರಪ್ಪ, ಆರ್‌ಐ ಸಮೀರ್‌, ಗ್ರಾಮ ಲೆಕ್ಕಾಧಿಕಾರಿ, ಕೊಟ್ರೇಶ್‌, ಗ್ರಾಮ ಸಹಾಯಕ ಅಂಜನಪ್ಪ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ಬೆಳೆ ಹಾನಿಗೊಳಗಾದ ರೈತರು ಅಗತ್ಯ ದಾಖಲೆಗಳನ್ನು ನಾಡ ಕಚೇರಿಗೆ ತಲುಪಿಸುವಂತೆ ಉಪ ತಹಸೀಲ್ದಾರ್‌ ಆರ್‌.ರವಿ ರೈತರಿಗೆ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ