ಹೊನ್ನಾಳಿ : ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷಿ ಉಪ ನಿರ್ದೇಶಕರ ಕಚೇರಿ-2ನ್ನು ಹೊನ್ನಾಳಿ ತಾಲೂಕಿಗೆ ಸ್ಥಳಾಂತರಿಸುವಂತೆ ಕೃಷಿ ಸಚಿವ ಶಿವಶಂಕರರೆಡ್ಡಿ ಅವರಿಗೆ ಮನವಿ ಮಾಡಿದ್ದೆ. ಅವರ ಸೂಚನೆಯಂತೆ ಕಚೇರಿ ಸ್ಥಳಾಂತರಕ್ಕೆ ಸರಕಾರ ಆದೇಶ ಮಾಡಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಕೃಷಿ ಉಪ ನಿರ್ದೇಶಕರ ಕಚೇರಿಗಾಗಿ ಪಟ್ಟಣದ ಶಾಸಕರ ಹಳೇ ಭವನ, ಎಪಿಎಂಸಿ ಗೆಸ್ಟ್ ಹೌಸ್ ಹಾಗೂ ರೈತ ಭವನದ ಕಟ್ಟಡಗಳನ್ನು ಶನಿವಾರ ಪರಿಶೀಲಿಸಿ ಮಾತನಾಡಿದರು.
ಕೃಷಿ ಉಪ ನಿರ್ದೇಶಕರ ಕಚೇರಿ ವ್ಯಾಪ್ತಿಗೆ ಹೊನ್ನಾಳಿ, ಚನ್ನಗಿರಿ ಮತ್ತು ನ್ಯಾಮತಿ ತಾಲೂಕುಗಳನ್ನು ಒಳಪಡಿಸಲಾಗಿದ್ದು, ಕಚೇರಿ ಸ್ಥಳಾಂತರಕ್ಕೆ ಸೂಕ್ತ ಕಟ್ಟಡ ಒದಗಿಸಲಾಗುವುದು ಎಂದರು.
ಕೃಷಿ ಉಪ ನಿರ್ದೇಶಕಿ ಹಂಸವೇಣಿ ಮಾತನಾಡಿ, ಕೃಷಿ ಉಪ ನಿರ್ದೇಶಕರ ಕಚೇರಿಯಲ್ಲಿ ಈ ಮೂರು ತಾಲೂಕುಗಳ ಆಡಳಿತ ಮತ್ತು ಅನುಷ್ಠಾನದ ಮೇಲುಸ್ತುವಾರಿಯನ್ನು ಈ ಹಂತದಲ್ಲಿಯೇ ನಿರ್ವಹಣೆ ಮಾಡಲಾಗುವುದು. ಮೂರು ತಾಲೂಕುಗಳ ರೈತರು ದಾವಣಗೆರೆ ಉಪ ವಿಭಾಗಕ್ಕೆ ಬರಬೇಕಾಗಿತ್ತು. ಈಗ ಕಚೇರಿ ಇಲ್ಲಿಯೇ ಆರಂಭವಾಗುತ್ತಿರುವುದರಿಂದ ಮೂರೂ ತಾಲೂಕುಗಳ ರೈತರು ಅಲೆದಾಡುವುದು ತಪ್ಪಲಿದೆ ಎಂದರು.
13 ಸಿಬ್ಬಂದಿ:
ಕೃಷಿ ಉಪ ನಿರ್ದೇಶಕರ ಕಚೇರಿ ವ್ಯಾಪ್ತಿ 2ಕ್ಕೆ, ಕೃಷಿ ಉಪ ನಿರ್ದೇಶಕರು(1), ತಾಂತ್ರಿಕ ಅಧಿಕಾರಿಗಳು(2), ಅಧೀಕ್ಷ ಕರು(1), ಪ್ರಥಮ ದರ್ಜೆ ಸಹಾಯಕರು(3), ದ್ವಿತೀಯ ದರ್ಜೆ ಸಹಾಯಕರು(3), ಡಿ ಗ್ರೂಪ್ ನೌಕರರು(2) ಸೇರಿದಂತೆ ಒಟ್ಟು 13 ಜನ ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹಂಸವೇಣಿ ತಿಳಿಸಿದರು.
ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರ ನಾಯ್ಕ, ತಾಪಂ ಸದಸ್ಯ ಸಿ.ಆರ್. ಶಿವಾನಂದ್, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಸಹಾಯಕ ಕೃಷಿ ನಿರ್ದೇಶಕ ಬಸಪ್ಪ, ಡಾ. ಕೆಂಚಪ್ಪ ಬಂತಿ, ಬಿಜೆಪಿ ಮುಖಂಡ ಸುರೇಶ್ ಮತ್ತಿತರರಿದ್ದರು.
ಕೃಷಿ ಉಪ ನಿರ್ದೇಶಕರ ಕಚೇರಿಗಾಗಿ ಪಟ್ಟಣದ ಶಾಸಕರ ಹಳೇ ಭವನ, ಎಪಿಎಂಸಿ ಗೆಸ್ಟ್ ಹೌಸ್ ಹಾಗೂ ರೈತ ಭವನದ ಕಟ್ಟಡಗಳನ್ನು ಶನಿವಾರ ಪರಿಶೀಲಿಸಿ ಮಾತನಾಡಿದರು.
ಕೃಷಿ ಉಪ ನಿರ್ದೇಶಕರ ಕಚೇರಿ ವ್ಯಾಪ್ತಿಗೆ ಹೊನ್ನಾಳಿ, ಚನ್ನಗಿರಿ ಮತ್ತು ನ್ಯಾಮತಿ ತಾಲೂಕುಗಳನ್ನು ಒಳಪಡಿಸಲಾಗಿದ್ದು, ಕಚೇರಿ ಸ್ಥಳಾಂತರಕ್ಕೆ ಸೂಕ್ತ ಕಟ್ಟಡ ಒದಗಿಸಲಾಗುವುದು ಎಂದರು.
ಕೃಷಿ ಉಪ ನಿರ್ದೇಶಕಿ ಹಂಸವೇಣಿ ಮಾತನಾಡಿ, ಕೃಷಿ ಉಪ ನಿರ್ದೇಶಕರ ಕಚೇರಿಯಲ್ಲಿ ಈ ಮೂರು ತಾಲೂಕುಗಳ ಆಡಳಿತ ಮತ್ತು ಅನುಷ್ಠಾನದ ಮೇಲುಸ್ತುವಾರಿಯನ್ನು ಈ ಹಂತದಲ್ಲಿಯೇ ನಿರ್ವಹಣೆ ಮಾಡಲಾಗುವುದು. ಮೂರು ತಾಲೂಕುಗಳ ರೈತರು ದಾವಣಗೆರೆ ಉಪ ವಿಭಾಗಕ್ಕೆ ಬರಬೇಕಾಗಿತ್ತು. ಈಗ ಕಚೇರಿ ಇಲ್ಲಿಯೇ ಆರಂಭವಾಗುತ್ತಿರುವುದರಿಂದ ಮೂರೂ ತಾಲೂಕುಗಳ ರೈತರು ಅಲೆದಾಡುವುದು ತಪ್ಪಲಿದೆ ಎಂದರು.
13 ಸಿಬ್ಬಂದಿ:
ಕೃಷಿ ಉಪ ನಿರ್ದೇಶಕರ ಕಚೇರಿ ವ್ಯಾಪ್ತಿ 2ಕ್ಕೆ, ಕೃಷಿ ಉಪ ನಿರ್ದೇಶಕರು(1), ತಾಂತ್ರಿಕ ಅಧಿಕಾರಿಗಳು(2), ಅಧೀಕ್ಷ ಕರು(1), ಪ್ರಥಮ ದರ್ಜೆ ಸಹಾಯಕರು(3), ದ್ವಿತೀಯ ದರ್ಜೆ ಸಹಾಯಕರು(3), ಡಿ ಗ್ರೂಪ್ ನೌಕರರು(2) ಸೇರಿದಂತೆ ಒಟ್ಟು 13 ಜನ ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹಂಸವೇಣಿ ತಿಳಿಸಿದರು.
ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರ ನಾಯ್ಕ, ತಾಪಂ ಸದಸ್ಯ ಸಿ.ಆರ್. ಶಿವಾನಂದ್, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಸಹಾಯಕ ಕೃಷಿ ನಿರ್ದೇಶಕ ಬಸಪ್ಪ, ಡಾ. ಕೆಂಚಪ್ಪ ಬಂತಿ, ಬಿಜೆಪಿ ಮುಖಂಡ ಸುರೇಶ್ ಮತ್ತಿತರರಿದ್ದರು.