ಆ್ಯಪ್ನಗರ

ಹನಿಟ್ರ್ಯಾಪ್‌ ಮಾಡುತ್ತಿದ್ದ ದಂಪತಿ ಬಂಧನ

ಚಾಲಾಕಿ ದಂಪತಿ ಹನಿಟ್ರ್ಯಾಪ್‌ ಮಾಡಿ ಹಣ ವಸೂಲಿ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಭಾನುವಾರ ರಾತ್ರಿ ನಡೆದಿದೆ.

Vijaya Karnataka 27 Mar 2018, 2:02 pm

ದಾವಣಗೆರೆ:ಚಾಲಾಕಿ ದಂಪತಿ ಹನಿಟ್ರ್ಯಾಪ್‌ ಮಾಡಿ ಹಣ ವಸೂಲಿ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಭಾನುವಾರ ರಾತ್ರಿ ನಡೆದಿದೆ.

ನಿಟ್ಟುವಳ್ಳಿ ನಿವಾಸಿ ರೇಖಾ, ವೆಂಕಟೇಶ್‌ ಹನಿಟ್ರ್ಯಾಪ್‌ ಮಾಡಿ ಸಿಕ್ಕಿಬಿದ್ದವರು.

ಬಸವನಗರ ಪೊಲೀಸರು ದಂಪತಿಯನ್ನು ಬಂಧಿಸಿ, ಅವರಿಂದ 5 ಲಕ್ಷ ರೂ., ಒಂದು ಮೊಬೈಲ್‌ ವಶಕ್ಕೆ ಪಡೆದಿದ್ದಾರೆ. ನಗರದ ಚಿನ್ನ ಹಾಗೂ ಬೆಳ್ಳಿ ವ್ಯಾಪಾರಿ ಬಾವೀಶ್‌ ಹನಿಟ್ರ್ಯಾಪ್‌ಗೆ ಬಲಿಯಾದವ.

ಘಟನೆ ವಿವರ: ಈ ದಂಪತಿ ಕಳೆದ ಆರು ತಿಂಗಳ ಹಿಂದೆ ಚಿನ್ನದ ಅಂಗಡಿಗೆ ಹೋಗಿದ್ದರು. ಆಗ ಬಾವೀಶ್‌ ಮೊಬೈಲ್‌ ನಂಬರ್‌ ತೆಗೆದುಕೊಂಡಿದ್ದಾರೆ. ಬಳಿಕ ಆತನಿಗೆ ರೇಖಾ ಮಿಸ್‌ ಕಾಲ್‌ ಕೊಟ್ಟಿದ್ದಾಳೆ. ಬಾವೀಶ್‌ ವಾಪಸ್‌ ಕಾಲ ಮಾಡಿದ ವೇಳೆ ಆತನನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ. ಇದು ಮುಂದುವರಿದು ಮೊಬೈಲ್‌ನಲ್ಲಿಯೇ ಚಾಟಿಂಗ್‌ ಶುರುವಾಗಿದೆ. ಇದಾದ ನಂತರ ರೇಖಾ ತನ್ನ ಮನೆಯಲ್ಲಿ ಯಾರೂ ಇಲ್ಲವೆಂದು ಉಪಾಯ ಮಾಡಿ ಬಾವೀಶ್‌ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಮನೆಗೆ ಬಂದಿದ್ದ ಬಾವೀಶ್‌ಗೆ ಶರ್ಟ್‌ ಬಿಚ್ಚಲು ಹೇಳಿದ್ದಾಳೆ. ಇದಾದ ನಂತರ ಆತನ ನಗ್ನಚಿತ್ರಗಳನ್ನು ಪತಿ ವೆಂಕಟೇಶ್‌ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ.

15 ಲಕ್ಷ ರೂ.ಗೆ ಬೇಡಿಕೆ: ನಗ್ನ ದೃಶ್ಯ ತೋರಿಸಿದ ದಂಪತಿ ಬಾವೀಶ್‌ಗೆ 15 ಲಕ್ಷ ರೂ. ನೀಡುವಂತೆ ಬ್ಲಾಕ್‌ ಮೇಲ್‌ ಮಾಡಿದ್ದಾರೆ. ಬಾವೀಶ್‌ 5 ಲಕ್ಷ ರೂ. ನೀಡಿ ಪ್ರಕರಣಕ್ಕೆ ಸುಖ್ಯಾಂತಕ್ಕೆ ಚಿಂತಿಸಿದ್ದ. ಇಷ್ಟಕ್ಕೆ ಸುಮ್ಮನಾಗದ ವಂಚಕ ದಂಪತಿ ಇನ್ನು 10 ಲಕ್ಷ ರೂ. ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಲ್ಲದಿದ್ದರೆ ನಗ್ನ ದೃಶ್ಯಗಳನ್ನು ಸಾರ್ವಜನಿಕರಿಗೆ ತೋರಿಸಿ ಮಾನಹರಾಜು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಕೊನೆಗೆ ಬಾವೀಶ್‌ ಬಸವನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಬಸವನಗರ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಗರದಲ್ಲಿ ಹನಿಟ್ರ್ಯಾಪ್‌ ಜಾಲವಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ