ದಾವನಗೆರೆ : ಸಚಿವ ಸ್ಥಾನ ನೀಡುವಂತೆ ನಾನು ಕೇಳಿಲ್ಲ. ಮಂತ್ರಿಗಿರಿಯಿಲ್ಲದಿದ್ದರೂ ಕೆಲಸ ಮಾಡಬಹುದಾಗಿದ್ದು ಶಾಸಕನಾಗಿ ಜನರ ಸೇವೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂಬುದು ಕಾಂಗ್ರೆಸ್ ಹಿರಿಯ ನಾಯಕ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸ್ಪಷ್ಟೋಕ್ತಿ.
ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಮಂತ್ರಿ ಸ್ಥಾನ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲಎಂದರು.
ಬೆಂಗಳೂರಿನಿಂದ ಬಂದ ತಕ್ಷಣವೇ ದಾವಣಗೆರೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಸೂಚನೆ ನೀಡಿದ್ದೇನೆ. ಸೋಮವಾರದಿಂದ ಕಾಮಗಾರಿ ಭೂಮಿ ಪೂಜೆ ಕಾರ್ಯ ನೆರವೇರಿಸುತ್ತೇನೆ. ಕುಡಿವ ನೀರು, ಚರಂಡಿ ಸರಿಪಡಿಸಿ ಸೊಳ್ಳೆ ಕಾಟದಿಂದ ಜನರನ್ನು ಮುಕ್ತಿಗೊಳಿಸಲಾಗುವುದು ಎಂದರು.
ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ನಾನು ಮಂತ್ರಿಗಿರಿ ನೀಡುವಂತೆ ಯಾರ ಬಳಿಯೂ ಕೇಳಿಲ್ಲ. ಅದಾಗಿಯೇ ಬಂದರೆ ಸಚಿವ ಸ್ಥಾನದಲ್ಲಿ ಅಲಂಕರಿಸುತ್ತೇನೆ. ಇಲ್ಲದಿದ್ದರೆ ನಮಗೆ ಬೇಕಾದಷ್ಟು ಕೆಲಸಗಳು ಇವೆ. ರಾಜಕೀಯ ಎನ್ನುವುದು ಹವ್ಯಾಸ ಅಷ್ಟೇ. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಹೆಚ್ಚು ಗೆಲ್ಲದ ಕಾರಣಕ್ಕೆ ಸಚಿವ ಸ್ಥಾನ ನೀಡಿಲ್ಲ ಎಂದು ಅನಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ನಮ್ಮ ಪಕ್ಷದ ಪದಾಧಿಕಾರಿಗಳು, ಸಂಸ್ಥೆಗಳ ಪ್ರತಿನಿಧಿಗಳು ರಾಜೀನಾಮೆ ನೀಡಿ ಹೋರಾಟ ಮಾಡುತ್ತಿದ್ದಾರೆ. ನಾನು ಯಾರಿಗೂ ಹೋರಾಟ ಮಾಡಲು ಹೇಳಿಲ್ಲಎಂದರು.
ಸರಕಾರ ಮೂರು ತಿಂಗಳಲ್ಲಿ ಬಿದ್ದು ಹೋಗುತ್ತದೆ ಎನ್ನುತ್ತಾರಲ್ಲ ಎಂಬ ಪ್ರಶ್ನೆಗೆ, ಹಾಗೆ ಹೇಳುತ್ತಾರೆ, ಮೂರು ವಾರವೂ ಇರಲ್ಲ ಅಂತಾರೆ. ಆದರೆ ಸಚಿವ ಸಂಪುಟ ರಚನೆಯಾಗಿದ್ದು ಸರಕಾರ ನಡೆಯಲಿದೆ. ನಾನು ಮಾಜಿ ಪ್ರಧಾನಿ ದೇವೇಗೌಡರು ವಿಶ್ವಾಸಿಗರು. ಅವರೊಂದಿಗೆ ಮಾತನಾಡಿದ್ದೇನೆ ಅಷ್ಟೇ. ದೇವೇಗೌಡ್ರು, ಕುಮಾರಸ್ವಾಮಿ ದಾವಣಗೆರೆಗೆ ಬಂದರೆ ನಮ್ಮ ಮನೆಗೆ ಬಂದು ಹೋಗುತ್ತಾರೆ ಅಷ್ಟೇ. ಬೇರೆ ಏನು ಇಲ್ಲ ಎಂದರು.
ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಮಂತ್ರಿ ಸ್ಥಾನ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲಎಂದರು.
ಬೆಂಗಳೂರಿನಿಂದ ಬಂದ ತಕ್ಷಣವೇ ದಾವಣಗೆರೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಸೂಚನೆ ನೀಡಿದ್ದೇನೆ. ಸೋಮವಾರದಿಂದ ಕಾಮಗಾರಿ ಭೂಮಿ ಪೂಜೆ ಕಾರ್ಯ ನೆರವೇರಿಸುತ್ತೇನೆ. ಕುಡಿವ ನೀರು, ಚರಂಡಿ ಸರಿಪಡಿಸಿ ಸೊಳ್ಳೆ ಕಾಟದಿಂದ ಜನರನ್ನು ಮುಕ್ತಿಗೊಳಿಸಲಾಗುವುದು ಎಂದರು.
ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ನಾನು ಮಂತ್ರಿಗಿರಿ ನೀಡುವಂತೆ ಯಾರ ಬಳಿಯೂ ಕೇಳಿಲ್ಲ. ಅದಾಗಿಯೇ ಬಂದರೆ ಸಚಿವ ಸ್ಥಾನದಲ್ಲಿ ಅಲಂಕರಿಸುತ್ತೇನೆ. ಇಲ್ಲದಿದ್ದರೆ ನಮಗೆ ಬೇಕಾದಷ್ಟು ಕೆಲಸಗಳು ಇವೆ. ರಾಜಕೀಯ ಎನ್ನುವುದು ಹವ್ಯಾಸ ಅಷ್ಟೇ. ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಹೆಚ್ಚು ಗೆಲ್ಲದ ಕಾರಣಕ್ಕೆ ಸಚಿವ ಸ್ಥಾನ ನೀಡಿಲ್ಲ ಎಂದು ಅನಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನನಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ನಮ್ಮ ಪಕ್ಷದ ಪದಾಧಿಕಾರಿಗಳು, ಸಂಸ್ಥೆಗಳ ಪ್ರತಿನಿಧಿಗಳು ರಾಜೀನಾಮೆ ನೀಡಿ ಹೋರಾಟ ಮಾಡುತ್ತಿದ್ದಾರೆ. ನಾನು ಯಾರಿಗೂ ಹೋರಾಟ ಮಾಡಲು ಹೇಳಿಲ್ಲಎಂದರು.
ಸರಕಾರ ಮೂರು ತಿಂಗಳಲ್ಲಿ ಬಿದ್ದು ಹೋಗುತ್ತದೆ ಎನ್ನುತ್ತಾರಲ್ಲ ಎಂಬ ಪ್ರಶ್ನೆಗೆ, ಹಾಗೆ ಹೇಳುತ್ತಾರೆ, ಮೂರು ವಾರವೂ ಇರಲ್ಲ ಅಂತಾರೆ. ಆದರೆ ಸಚಿವ ಸಂಪುಟ ರಚನೆಯಾಗಿದ್ದು ಸರಕಾರ ನಡೆಯಲಿದೆ. ನಾನು ಮಾಜಿ ಪ್ರಧಾನಿ ದೇವೇಗೌಡರು ವಿಶ್ವಾಸಿಗರು. ಅವರೊಂದಿಗೆ ಮಾತನಾಡಿದ್ದೇನೆ ಅಷ್ಟೇ. ದೇವೇಗೌಡ್ರು, ಕುಮಾರಸ್ವಾಮಿ ದಾವಣಗೆರೆಗೆ ಬಂದರೆ ನಮ್ಮ ಮನೆಗೆ ಬಂದು ಹೋಗುತ್ತಾರೆ ಅಷ್ಟೇ. ಬೇರೆ ಏನು ಇಲ್ಲ ಎಂದರು.