ಆ್ಯಪ್ನಗರ

ಮಳೆ ಬಿದ್ದರೆ ಹಳೇ ದಾವಣಗೆರೆ ಕೆಸರು ಗದ್ದೆ

ಹಳೇ ದಾವಣಗೆರೆಯ ವರ್ತಕರಿಗೆ ವ್ಯಾಪಾರವಾಗದಿದ್ದರೂ ಪರವಾಗಿಲ್ಲ. ಈಗ ಮಳೆಗಾಲದ ಭಯ ಶುರುವಾಗಿದೆ. ಜೋರು ಮಳೆ ಬಿದ್ದರೆ ಮಂಡಿಪೇಟೆ, ಚಾಮರಾಜಪೇಟೆ, ಇಡೀ ಹಳೇ ಭಾಗವೇ ಕೆಸರು ಗದ್ದೆಯಾಗಲಿದೆ.

Vijaya Karnataka 15 Jun 2019, 5:00 am
ದಾವಣಗೆರೆ : ಹಳೇ ದಾವಣಗೆರೆಯ ವರ್ತಕರಿಗೆ ವ್ಯಾಪಾರವಾಗದಿದ್ದರೂ ಪರವಾಗಿಲ್ಲ. ಈಗ ಮಳೆಗಾಲದ ಭಯ ಶುರುವಾಗಿದೆ. ಜೋರು ಮಳೆ ಬಿದ್ದರೆ ಮಂಡಿಪೇಟೆ, ಚಾಮರಾಜಪೇಟೆ, ಇಡೀ ಹಳೇ ಭಾಗವೇ ಕೆಸರು ಗದ್ದೆಯಾಗಲಿದೆ.
Vijaya Karnataka Web if the rain falls the old davangere clay is wet
ಮಳೆ ಬಿದ್ದರೆ ಹಳೇ ದಾವಣಗೆರೆ ಕೆಸರು ಗದ್ದೆ


ಇದಕ್ಕೆ ಕಾರಣ, ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆದಿರುವ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಕೆಲ ಕಡೆ ಅರ್ಧಂಬರ್ಧ ಆಗಿವೆ. ಅಂಥ ಕಡೆ ಬಿದ್ದ ಮಳೆ ನೀರು ನೆಲ ಮಹಡಿಗೆ ನುಗ್ಗಿಬಿಟ್ಟರೆ ಎನ್ನುವ ಆತಂಕ ವರ್ತಕರದು.

ನಗರದ ಹಳೇ ಭಾಗದಲ್ಲಿ ಎಲ್ಲ ರಸ್ತೆಗಳ ಪುಟ್‌ಪಾತ್‌, ಪೈಪ್‌ಲೈನ್‌ಗೆ ಗುಂಡಿ ತೆಗೆದು ಬಿಡಲಾಗಿದೆ. ರಸ್ತೆ ಉದಕ್ಕೂ ಮಣ್ಣಿನ ರಾಶಿ ತುಂಬಿಕೊಂಡಿದೆ. ಮಳೆ ಬಂದರೆ ಇಡೀ ಸಂಚಾರವೇ ಅಸ್ತವ್ಯಸ್ತಗೊಳ್ಳಲಿದ್ದು, ಕೆಸರು ಗದ್ದೆಯಲ್ಲಿಯೇ ಸಾಗಬೇಕು.

ಅದರಲ್ಲೂ ನೆಲ ಮಹಡಿ ಅಂಗಡಿ ಮಾಲೀಕರಿಗೆ ಹೆಚ್ಚು ಆತಂಕ ಎದುರಾಗಿದೆ. ಲಕ್ಷಾಂತರ ಮೌಲ್ಯದ ಸಾಮಗ್ರಿಗಳನ್ನು ದಾಸ್ತಾನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಮಳೆ ಬಂದರೆ ನೀರು ನೇರ ಅಂಗಡಿ ಮಳಿಗೆಗೆ ನುಗ್ಗುತ್ತದೆ. ಮುಂದೆ ಹರಿದು ಹೋಗಲು ಚರಂಡಿ, ಫುಟ್‌ಪಾತ್‌ ವ್ಯವಸ್ಥೆ ಇಲ್ಲದಿರುವುದು.

ಕೆಸರು ಗದ್ದೆ:

ಯಾವ ರಸ್ತೆಗೂ ಹೋದರೂ ರಿಪೇರಿ ಕಾಮಗಾರಿ ನಡೆಯುತ್ತಲೇ ಇದೆ. ಯಾವುದೂ ಪೂರ್ಣಗೊಂಡಿಲ್ಲ. ರಸ್ತೆ ಅಕ್ಕಪಕ್ಕ ಮಣ್ಣಿನ ಗುಡ್ಡೆಗಳು, ಕಾಮಗಾರಿ ಸ್ಥಳದಲ್ಲಿ ಎಂ ಸ್ಯಾಂಡ್‌ ಮರಳು ರಾಶಿ ಹಾಕಲಾಗಿದೆ. ದೊಡ್ಡ ಮಳೆ ಬಂದರೆ ನೀರಿನಲ್ಲಿ ಕೊಚ್ಚಿಕೊಂಡು ರಸ್ತೆ ಪಾಲಾಗಲಿದೆ. ಆಗ ಇಡೀ ರಸ್ತೆಗಳೇ ಕೆಸರು ಗದ್ದೆಯಾಗಲಿವೆ. ಇದರಲ್ಲಿಯೇ ಓಡಾಡಬೇಕು. ಬಿಟ್ಟರೆ ಪರ್ಯಾಯ ಮಾರ್ಗ ಇಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಕಾಮಗಾರಿ ಕತೆ:

ಹಳೇ ನಗರವನ್ನು ಸುಂದರವಾಗಿ ಪರಿವರ್ತಿಸುವುದಕ್ಕೆ ಒಂದುವರೆ ವರ್ಷದಿಂದ ಸ್ಮಾರ್ಟ್‌ಸಿಟಿಯಡಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಪೂರ್ಣಗೊಂಡಿಲ್ಲ. ಸಿಮೆಂಟ್‌ ರಸ್ತೆಗಳು ಒಂದಿಷ್ಟು ಬಿಟ್ಟರೆ, ಪುಟ್‌ಪಾತ್‌, ಭೂಗತ ವಿದ್ಯುತ್‌ ಕೇಬಲ್‌, ಟೆಲಿಪೋನ್‌, ಕುಡಿಯುವ ನೀರು, ಗ್ಯಾಸ್‌ ಪೈಪ್‌ ಹಾಕುವುದು ಇನ್ನೂ ಉಳಿದಿದೆ. ಮಳೆ ನೀರು ಹರಿಯಲು ಚರಂಡಿ ಸಂಪರ್ಕ ಬಾಕಿ ಇದೆ. ಹೀಗಾಗಿ ದಾವಣಗೆರೆಯಲ್ಲಿ ಭಾರಿ ಪ್ರಮಾಣದ ಮಳೆಯಾದರೆ ಹಳೇ ಭಾಗದ ಎಲ್ಲ ರಸ್ತೆಗಳು ಹೊಳೆಯಾಗಲಿವೆ.

ನೆಲ ಮಳಿಗೆಗೆ ಅಪಾಯ:

ಮಳೆ ನೀರು ಸರಗವಾಗಿ ಹರಿದು ಹೋಗಲು ಚರಂಡಿಗಳ ಜೋಡಣೆಯಾಗಿಲ್ಲ. ನೆಲ ಮಳಿಗೆಯ ವ್ಯಾಪಾರಿಗಳ ಸ್ಥಿತಿ ಅತಂತ್ರವಾಗಲಿದೆ. ಬಹಳ ವರ್ಷಗಳಿಂದ ಈ ಸಮಸ್ಯೆ ಎದುರಿಸಿಯೇ ಬಂದವರಿಗೆ ಈಗ ಸ್ಮಾರ್ಟ್‌ಸಿಟಿಯಲ್ಲಾದರೂ ಸರಿ ಹೋಗುವ ಭರವಸೆ ಇತ್ತು. ಆದರೆ ಈಗ ಕಾಮಗಾರಿ ವಿಳಂಬದಿಂದ ವಾಂತರ ಸೃಷ್ಟಿಯಾಗಲಿದೆ.. ಮೊನ್ನೆ ಸುರಿದ ಸಣ್ಣ ಮಳೆಗೆ ನೆಲ ಮಳಿಗೆಗಳಿಗೆ ನೀರು ನುಗ್ಗಿತ್ತು ಎನ್ನುತ್ತಾರೆ ಕಬ್ಬಿಣದಂಗಡಿ ಮಾಲೀಕ ಹರೀಫ್‌ ಬಾಷಾ.

=======ಬಾಕ್ಸ್‌..

ಪ್ರವೇಶದ ಸಂಚಾರ ಅಸ್ತವ್ಯಸ್ತ


ಹೊಸ ಊರಿನ ಕಡೆಯಿಂದ ಹಳೇ ಭಾಗಕ್ಕೆ ಹೋಗುವವರು ಮಳೆಗಾಲದಲ್ಲಿ ಸಮಸ್ಯೆ ದಾಟಿಕೊಂಡೇ ಹೋಗಬೇಕು. ನಗರದ ಅಶೋಕ ರಸ್ತೆಯ ರೈಲ್ವೆ ಗೇಟ್‌, ರೇಣುಕಾ ಮಂದಿರ ಪಕ್ಕದ ಅಂಡರ್‌ ಬ್ರೀಡ್ಜ್‌ , ಪಾಲಿಕೆ ಎದುರಿನ ಅಂಡರ್‌ ಬ್ರೀಡ್ಜ್‌ ಮೂಲಕ ಸಾವಿರಾರು ಜನ ಓಡಾಡುತ್ತಾರೆ. ಆದರೆ ಮಳೆಗಾಲದಲ್ಲಿ ಬೈಕ್‌, ಕಾರು ಸಂಚಾರಕ್ಕೆ ದೊಡ್ಡ ಹರಸಾಹಸ ಪಡಬೇಕು.

=====ಕೊಟ್‌...

ಸ್ಮಾರ್ಟ್‌ಸಿಟಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಳ್ಳಬೇಕಾಗಿತ್ತು. ಮಳೆಗಾಲ ಬಂದರೂ ಮುಗಿದಿಲ್ಲ. ಕೆಲವು ರಸ್ತೆಯಲ್ಲಿ ಈಗಲೂ ಚರಂಡಿ ವರ್ಕ್‌ ನಡೆದಿದೆ. ಮಳೆ ಬಂದರೆ ನೀರು ಹರಿಯಲು ಮಾರ್ಗವೇ ಇಲ್ಲ. ಹೀಗಾಗಿ ಅಂಗಡಿಗಳಿಗೆ ನೀರು ನುಗ್ಗುವ ಭಯವಿದೆ.

-ಮಂಜುನಾಥ್‌, ಬಟ್ಟೆ ಅಂಗಡಿ ಮಾಲೀಕ ದಾವಣಗೆರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ