ಆ್ಯಪ್ನಗರ

ಎಸ್ಟಿ ಮೀಸಲು ಏರಿಕೆ ಆಗದಿದ್ದರೆ ಶ್ರೀಗಳು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ: ರಮೇಶ್‌ ಜಾರಕಿಹೊಳಿ

ಎಸ್ಟಿ ವರ್ಗಕ್ಕೆ ಶೈಕ್ಷಣಿಕ, ಉದ್ಯೋಗ ಕ್ಷೇತ್ರದಲ್ಲಿ ಶೇ.7.5 ಮೀಸಲಾತಿಗೆ ಆಗ್ರಹಿಸಿ ಸತತ ಹೋರಾಟ ನಡೆಸಲಾಗಿದೆ. ಈಗಾಗಲೆ ಸಿಎಂ ಬಿಎಸ್‌ವೈರೊಂದಿಗೆ ಮೀಸಲಾತಿ ಹೆಚ್ಚಿಸುವ ಕುರಿತು ಚರ್ಚಿಸಿದ್ದು, ಅವರು ಭರವಸೆ ನೀಡಿದ್ದಾರೆ. ಸರಕಾರ ಸ್ಪಂದಿಸದಿದ್ದರೆ ಜಾತ್ರೆಯಂದು ಸ್ವಾಮೀಜಿಯವರು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ ಎಂದು ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು.

Vijaya Karnataka Web 12 Jan 2021, 8:01 am
ಹರಿಹರ: ಶ್ರೀ ವಾಲ್ಮೀಕಿ ಜಾತ್ರೆಗೆ ಮುನ್ನ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿ ಏರಿಕೆ ಆಗದಿದ್ದರೆ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯವರು ಕೈಗೊಳ್ಳುವ ನಿರ್ಧಾರದಂತೆ ನಡೆದುಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು.
Vijaya Karnataka Web Ramesh Jarkiholi


ಮಾವಿನ ಗಿಡಗಳಲ್ಲಿ ಯಥೇಚ್ಛ ಹೂವು; ಈ ಬಾರಿ ಉತ್ತಮ ಫಸಲು ನಿರೀಕ್ಷೆಯಲ್ಲಿ ರೈತರು
ತಾಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಮಠದಲ್ಲಿ ಸೋಮವಾರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಟಿ ವರ್ಗಕ್ಕೆ ಶೈಕ್ಷಣಿಕ, ಉದ್ಯೋಗ ಕ್ಷೇತ್ರದಲ್ಲಿ ಶೇ.7.5 ಮೀಸಲಾತಿಗೆ ಆಗ್ರಹಿಸಿ ಸತತ ಹೋರಾಟ ನಡೆಸಲಾಗಿದೆ. ಈಗಾಗಲೆ ಸಿಎಂ ಬಿಎಸ್‌ವೈರೊಂದಿಗೆ ಮೀಸಲಾತಿ ಹೆಚ್ಚಿಸುವ ಕುರಿತು ಚರ್ಚಿಸಿದ್ದು, ಅವರು ಭರವಸೆ ನೀಡಿದ್ದಾರೆ. ಸರಕಾರ ಸ್ಪಂದಿಸದಿದ್ದರೆ ಜಾತ್ರೆಯಂದು ಸ್ವಾಮೀಜಿಯವರು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲಾ ಬದ್ಧರಾಗಿದ್ದೇವೆ ಎಂದರು.

ಪಾತಾಳಕ್ಕೆ ಕುಸಿದ ಕ್ಯಾರಟ್‌ ಬೆಲೆ..! ಒಂದಂಕಿಗಿಳಿದ ಬೆಲೆ ಕಂಡು ರೈತ ಕಂಗಾಲು; ಗ್ರಾಹಕರಿಗೆ ಖುಷಿ..!
ಜಾತ್ರೆ ಯಶಸ್ವಿ ಆಗುತ್ತದೆ:
ಫೆ. 8, 9ರಂದು ಮಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ಕಳೆದ ಬಾರಿಗಿಂತ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಸರಕಾರದ ಕೋವಿಡ್‌ 19 ನಿಯಮ ಪಾಲಿಸಿಕೊಂಡು ಎಲ್ಲರ ಸಹಕಾರದಿಂದ ಜಾತ್ರೆಯನ್ನು ಯಶಸ್ವಿಗೊಳಿಸುತ್ತೇವೆ ಎಂದರು. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಬಳ್ಳಾರಿ ಸಂಸದ ದೇವೇಂದ್ರಪ್ಪ, ಶಾಸಕರಾದ ತುಕಾರಾಮ್‌, ಚಿಕ್ಕಮಾದು, ಗಣೇಶ್‌, ಸೋಮಲಿಂಗಪ್ಪ, ಮಾಜಿ ಶಾಸಕ ಪ್ರತಾಪ್‌ ಗೌಡ ಪಾಟೀಲ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ