ದಾವಣಗೆರೆ : ಅಸ್ತಮಾ ರೋಗ ಸಾಮಾನ್ಯ ಕಾಯಿಲೆಯಾಗಿದ್ದು, ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಗುಣಮುಖರಾಗಬಹುದು ಎಂದು ಕಾಸರಗೋಡು ಶ್ವಾಸಕೋಶ ತಜ್ಞ ಡಾ.ನಾರಾಯಣ ಪ್ರದೀಪ್ ಹೇಳಿದರು.
ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ವಿಶ್ವ ಅಸ್ತಮಾ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ 17ನೇ ವರ್ಷದ ಅಸ್ತಮಾ ಸಮ್ಮೇಳನ ಹಾಗೂ ಬೃಹತ್ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಎಷ್ಟೇ ಔಷಧ ತೆಗೆದುಕೊಂಡು ಅಸ್ತಮಾ ರೋಗ ವಾಸಿಯಾಗುವುದಿಲ್ಲ ಎನ್ನುವ ತಪ್ಪು ಭಾವನೆ ಜನರಲ್ಲಿ ಹುಟ್ಟಿಕೊಂಡಿದೆ. ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಅಸ್ತಮಾಕ್ಕೆ ಸೂಕ್ತ ಚಿಕಿತ್ಸೆ ಪಡೆದಲ್ಲಿ ನಿಯಂತ್ರಣಕ್ಕೆ ತರುವುದರ ಮೂಲಕ ರೋಗದಿಂದ ಗುಣಮುಖರಾಗಬಹುದು ಎಂದರು.
ಇಂದಿನ ದಿನಗಳಲ್ಲಿ ಹೃದಯ ಸಂಬಂಧಿಧಿ ಸೇರಿ ಬೇರೆ ಕಾಯಿಲೆಗಳ ಬಗ್ಗೆ ಶಿಬಿರ ನಡೆಸಲಾಗುತ್ತದೆ. ಆದರೆ ಶ್ವಾಸಕೋಶದ ಕುರಿತು ಶಿಬಿರ ನಡೆಸುವುದೇ ವಿರಳ. ಇಂತಹ ಸಂದರ್ಭದಲ್ಲಿಯೂ ಕಳೆದ 17 ವರ್ಷಗಳಿಂದ ಅಸ್ತಮಾ ತಪಾಸಣೆ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ.
1998ರಲ್ಲಿ ಜೀನಾ ಸಂಸ್ಥೆ ಅಸ್ತಮಾ ಮತ್ತು ಅರ್ಲಜಿ ಕುರಿತು ಜನರಿಗೆ ಅರಿವು ಮೂಡಿಸಲು ಮೇ ತಿಂಗಳಲ್ಲಿ ವಿಶ್ವ ಅಸ್ತಮಾ ದಿನಾಚರಣೆ ಪ್ರತಿ ವರ್ಷವು ಆಚರಿಸಲಾಗುತ್ತಿದೆ. ಹಾಗೆಯೇ ವೈದ್ಯಕೀಯ ಶಾಸ್ತ್ರದಲ್ಲಿ ಅಸ್ತಮಾ ರೋಗ ಕುರಿತು ಸಾಕಷ್ಟು ಮಹಿತಿ ತಿಳಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆ ಸಣ್ಣ ಮಕ್ಕಳಲ್ಲಿ ಶೇ.4ರಿಂದ 7ರಷ್ಟು, ದೊಡ್ಡವರಿಗೆ ಶೇ.10ರಿಂದ 12ರಷ್ಟು ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.
ಅಸ್ತಮಾ ಕಾಯಿಲೆ ಅಲರ್ಜಿ, ದೂಳು, ಅಶುದ್ಧ ಆಹಾರ ಪದಾರ್ಥಗಳ ಸೇವನೆಗಳಿಂದ ಬರುತ್ತಿದೆ. ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬಹುದು. ಆದರೆ ಹುಳಿ ಮತ್ತು ಎಣ್ಣೆ ಆಹಾರ ಸೇವನೆ ಆದಷ್ಟು ಕಡಿಮೆ ಮಾಡಬೇಕು. ಧೂಮಪಾನ ಸೇವನೆ ಬಿಡಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಎನ್.ಎಚ್. ಕೃಷ್ಣ, ಹಾಸ್ಯ ಕಲಾವಿದ ನವಲಿಂಗ ಪಾಟೀಲ್ ಹುಮ್ನಾಬಾದ್, ಗುಂಡಣ್ಣ ದಿಗ್ಗಿ ಕಲಬುರ್ಗಿ, ಗಂಗಾವತಿ ಪ್ರಾಣೇಶ್, ಚೇತನ್ ಕೃಷ್ಣ, ಅಂತಾರಾಷ್ಟ್ರೀಯ ಈಜುಪಟು ರೇವತಿ ನಾಯಕ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್, ಬಿ.ಆರ್.ಸುಬ್ರಹ್ಮಣ್ಯಇತರರು ಇದ್ದರು.
ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ವಿಶ್ವ ಅಸ್ತಮಾ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ 17ನೇ ವರ್ಷದ ಅಸ್ತಮಾ ಸಮ್ಮೇಳನ ಹಾಗೂ ಬೃಹತ್ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಎಷ್ಟೇ ಔಷಧ ತೆಗೆದುಕೊಂಡು ಅಸ್ತಮಾ ರೋಗ ವಾಸಿಯಾಗುವುದಿಲ್ಲ ಎನ್ನುವ ತಪ್ಪು ಭಾವನೆ ಜನರಲ್ಲಿ ಹುಟ್ಟಿಕೊಂಡಿದೆ. ಇದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಅಸ್ತಮಾಕ್ಕೆ ಸೂಕ್ತ ಚಿಕಿತ್ಸೆ ಪಡೆದಲ್ಲಿ ನಿಯಂತ್ರಣಕ್ಕೆ ತರುವುದರ ಮೂಲಕ ರೋಗದಿಂದ ಗುಣಮುಖರಾಗಬಹುದು ಎಂದರು.
ಇಂದಿನ ದಿನಗಳಲ್ಲಿ ಹೃದಯ ಸಂಬಂಧಿಧಿ ಸೇರಿ ಬೇರೆ ಕಾಯಿಲೆಗಳ ಬಗ್ಗೆ ಶಿಬಿರ ನಡೆಸಲಾಗುತ್ತದೆ. ಆದರೆ ಶ್ವಾಸಕೋಶದ ಕುರಿತು ಶಿಬಿರ ನಡೆಸುವುದೇ ವಿರಳ. ಇಂತಹ ಸಂದರ್ಭದಲ್ಲಿಯೂ ಕಳೆದ 17 ವರ್ಷಗಳಿಂದ ಅಸ್ತಮಾ ತಪಾಸಣೆ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ.
1998ರಲ್ಲಿ ಜೀನಾ ಸಂಸ್ಥೆ ಅಸ್ತಮಾ ಮತ್ತು ಅರ್ಲಜಿ ಕುರಿತು ಜನರಿಗೆ ಅರಿವು ಮೂಡಿಸಲು ಮೇ ತಿಂಗಳಲ್ಲಿ ವಿಶ್ವ ಅಸ್ತಮಾ ದಿನಾಚರಣೆ ಪ್ರತಿ ವರ್ಷವು ಆಚರಿಸಲಾಗುತ್ತಿದೆ. ಹಾಗೆಯೇ ವೈದ್ಯಕೀಯ ಶಾಸ್ತ್ರದಲ್ಲಿ ಅಸ್ತಮಾ ರೋಗ ಕುರಿತು ಸಾಕಷ್ಟು ಮಹಿತಿ ತಿಳಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆ ಸಣ್ಣ ಮಕ್ಕಳಲ್ಲಿ ಶೇ.4ರಿಂದ 7ರಷ್ಟು, ದೊಡ್ಡವರಿಗೆ ಶೇ.10ರಿಂದ 12ರಷ್ಟು ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.
ಅಸ್ತಮಾ ಕಾಯಿಲೆ ಅಲರ್ಜಿ, ದೂಳು, ಅಶುದ್ಧ ಆಹಾರ ಪದಾರ್ಥಗಳ ಸೇವನೆಗಳಿಂದ ಬರುತ್ತಿದೆ. ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬಹುದು. ಆದರೆ ಹುಳಿ ಮತ್ತು ಎಣ್ಣೆ ಆಹಾರ ಸೇವನೆ ಆದಷ್ಟು ಕಡಿಮೆ ಮಾಡಬೇಕು. ಧೂಮಪಾನ ಸೇವನೆ ಬಿಡಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಎನ್.ಎಚ್. ಕೃಷ್ಣ, ಹಾಸ್ಯ ಕಲಾವಿದ ನವಲಿಂಗ ಪಾಟೀಲ್ ಹುಮ್ನಾಬಾದ್, ಗುಂಡಣ್ಣ ದಿಗ್ಗಿ ಕಲಬುರ್ಗಿ, ಗಂಗಾವತಿ ಪ್ರಾಣೇಶ್, ಚೇತನ್ ಕೃಷ್ಣ, ಅಂತಾರಾಷ್ಟ್ರೀಯ ಈಜುಪಟು ರೇವತಿ ನಾಯಕ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್, ಬಿ.ಆರ್.ಸುಬ್ರಹ್ಮಣ್ಯಇತರರು ಇದ್ದರು.