ಆ್ಯಪ್ನಗರ

ಮೇ 30ರವರೆಗೆ ನೀರು ಹರಿಸದಿದ್ದರೆ: ಬೆಳೆ ನಷ್ಟ

ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದಲ್ಲಿ ಭತ್ತ ಕಾಳು ಕಟ್ಟುವ ಹಂತದಲ್ಲಿದ್ದು, ನಾಲೆಯಲ್ಲಿ ನೀರು ಮುಂದುವರೆಸುವರೋ ಅಥವಾ ನಿಲುಗಡೆ ಮಾಡುವರೋ ಎಂದು ನಿಖರ ಮಾಹಿತಿಯಿಲ್ಲದೆ, ರೈತರು ಗೊಂದಲದಲ್ಲಿದ್ದಾರೆ. ಇತ್ತ ನಾಲೆಯಲ್ಲಿ ನೀರು ಮುಂದುವರೆಸುವ ಅಥವಾ ನಿಲುಗಡೆ ಮಾಡುವ ದಿನಾಂಕ ಈವರೆಗೂ ಅಧಿಕೃತವಾಗಿ ನಿರ್ಧಾರವಾಗದಿರುವುದರಿಂದ ಅಧಿಕಾರಿಗಳೂ ಸಹ ಗೊಂದಲದ ಹೇಳಿಕೆ ನೀಡುತ್ತಿದ್ದು, ಕೊನೆ ಭಾಗದ ಭತ್ತದ ಬೆಳೆಯ ಸ್ಥಿತಿ ತೂಗುಯ್ಯಾಲೆಯಲ್ಲಿದೆ.

Vijaya Karnataka 15 May 2019, 5:00 am
ಮಲೆಬೆನ್ನೂರು : ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದಲ್ಲಿ ಭತ್ತ ಕಾಳು ಕಟ್ಟುವ ಹಂತದಲ್ಲಿದ್ದು, ನಾಲೆಯಲ್ಲಿ ನೀರು ಮುಂದುವರೆಸುವರೋ ಅಥವಾ ನಿಲುಗಡೆ ಮಾಡುವರೋ ಎಂದು ನಿಖರ ಮಾಹಿತಿಯಿಲ್ಲದೆ, ರೈತರು ಗೊಂದಲದಲ್ಲಿದ್ದಾರೆ. ಇತ್ತ ನಾಲೆಯಲ್ಲಿ ನೀರು ಮುಂದುವರೆಸುವ ಅಥವಾ ನಿಲುಗಡೆ ಮಾಡುವ ದಿನಾಂಕ ಈವರೆಗೂ ಅಧಿಕೃತವಾಗಿ ನಿರ್ಧಾರವಾಗದಿರುವುದರಿಂದ ಅಧಿಕಾರಿಗಳೂ ಸಹ ಗೊಂದಲದ ಹೇಳಿಕೆ ನೀಡುತ್ತಿದ್ದು, ಕೊನೆ ಭಾಗದ ಭತ್ತದ ಬೆಳೆಯ ಸ್ಥಿತಿ ತೂಗುಯ್ಯಾಲೆಯಲ್ಲಿದೆ.
Vijaya Karnataka Web if water does not dry up until may 30 crop loss
ಮೇ 30ರವರೆಗೆ ನೀರು ಹರಿಸದಿದ್ದರೆ: ಬೆಳೆ ನಷ್ಟ


ಕೊನೆ ಭಾಗದ ಅಚ್ಚುಕಟ್ಟಿನಲ್ಲಿ ಭತ್ತ ಕಾಳು ಕಟ್ಟುವ ಹಂತದಲ್ಲಿರುವುದರಿಂದ ಮೇ.30ರವರೆಗೆ ನೀರು ಹರಿಸುವಂತೆ ಒತ್ತಾಯಿಸಿ, ದಾವಣಗೆರೆ ಜಿಲ್ಲೆಯ ಕೊನೆ ಭಾಗದ ರೈತರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಒಂದು ವೇಳೆ ಈ ಹಂತದಲ್ಲಿ ನಾಲೆ ನೀರು ಬಂದ್‌ ಮಾಡಿದರೆ, ಭತ್ತದ ಬೆಳೆ ನಾಶವಾಗಿ ಕೋಟ್ಯಂತರ ರೂ.ನಷ್ಟವಾಗುವ ಸಾಧ್ಯತೆಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕೊನೆ ಭಾಗದ ರೈತರು ಮೇ.30ರವರೆಗೆ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ, ಮೇ 20ರವರೆಗೆ ನೀರು ಮುಂದುವರೆಸುವಂತೆ, ಮುಖ್ಯ ಎಂಜಿನಿಯರ್‌ ಹಾಗೂ ರಾಜ್ಯ ನೀರಾವರಿ ನಿಗಮದ ಎಂಡಿಗೆ ಪತ್ರ ಬರೆದಿದ್ದೇವೆ. ಎಂಡಿ ಕಚೇರಿಯಿಂದ ಅಧಿಕೃತವಾಗಿ ಯಾವುದೇ ಆದೇಶ ಬಂದಿಲ್ಲವೆಂದು ಭದ್ರಾ ಸೂಪರಿಟೆಂಡೆಂಟ್‌ ಎಂಜಿನಿಯರ್‌ ದಿವಾಕರ್‌ ನಾಯ್ಕ್‌ ತಿಳಿಸಿದ್ದಾರೆ.

ನೀರಾವರಿ ಸಚಿವ ಡಿ.ಕೆ.ಶಿವಕುಮಾರ್‌ ಕಚೇರಿಗೆ ಪತ್ರ ಕಳಿಸಿದ್ದು, ಈ ಬಗ್ಗೆ ಅಲ್ಲಿಂದ ಅಧಿಕೃತ ಉತ್ತರ ಬಂದಿಲ್ಲ ಎನ್ನುತ್ತಾರೆ ನೀರಾವರಿ ನಿಗಮದ ಎಂಡಿ ಮಂಜುನಾಥ್‌.

ಕಾಡಾ ಕಮಿಟಿಯಿಲ್ಲದ್ದೇ ಗೊಂದಲಕ್ಕೆ ಕಾರಣ
ಕಾಡಾ ಕಮಿಟಿ ಅಸ್ತಿತ್ವದಲ್ಲಿದ್ದರೆ, ಐಸಿಸಿ ಸಭೆ ಕರೆದು ನಿರ್ಧಾರ ತಗೆದುಕೊಳ್ಳುತ್ತಿದ್ದರು. ಆದರೆ ರಾಜ್ಯ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದರೂ ಇದುವರೆಗೂ ಭದ್ರಾ ಕಾಡಾ ಸಮಿತಿ ರಚನೆ ಮಾಡದಿರುವುದೇ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಡಿಕೆಶಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿ
ಕಾಡಾ ಕಮಿಟಿ ಇಲ್ಲದ ಮೇಲೆ ಭದ್ರಾ ನಾಲೆ ನೀರು ನಿರ್ವಹಣೆ ಕುರಿತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್‌ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಈಗಾಗಲೇ ನೀರಾವರಿ ನಿಗಮದ ಎಂಡಿ ನೀರಾವರಿ ಸಚಿವರ ಕಚೇರಿಗೆ ಮೇ 20ರವರೆಗೆ ನೀರು ಮುಂದುವರೆಸುವ ಕುರಿತು ಪತ್ರವನ್ನೂ ಕಳಿಸಿರುವುದಾಗಿ ತಿಳಿಸಿದ್ದಾರೆ. ಆದರೆ ನೀರಾವರಿ ಸಚಿವರು ನಿರ್ಧಾರ ತೆಗೆದುಕೊಳ್ಳಲು ಪತ್ರ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ, ಡಿಕೆಶಿ ಕುಂದಗೋಳ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತದೆ.

ರೈತರ ಆಕ್ರೋಶ
ನೀರಾವರಿ ಸಚಿವರು ಕುಂದಗೋಳ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿದ್ದು, ಭದ್ರಾ ನಾಲೆಯ ನೀರು ಮುಂದುವರಿಸುವ ಕುರಿತು ಇದುವರೆಗೂ ಯಾವುದೇ ನಿರ್ಧಾರ ಪ್ರಕಟಿಸದಿರುವುದರಿಂದ, ಕೊನೆ ಭಾಗದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭದ್ರಾ ನಾಲೆಯಲ್ಲಿ ಮೇ.20ರವರೆಗೆ ನೀರು ಮುಂದುವರೆಸುವಂತೆ ಮುಖ್ಯ ಎಂಜಿನಿಯರ್‌ ಹಾಗೂ ನೀರಾವರಿ ನಿಗಮ ಎಂಡಿಗೆ ಪ್ರಸ್ತಾವನೆ ನೀಡಿದ್ದೇವೆ. ಇದುವರೆಗೂ ಅಲ್ಲಿಂದ ಅಧಿಕೃತ ನಿರ್ಧಾರ ಬಂದಿಲ್ಲ. ಮೇ 15ಕ್ಕೆ ಭದ್ರಾ ನಾಲೆಯಲ್ಲಿ ನೀರು ನಿಲುಗಡೆ ಮಾಡದೆ, ಒಂದೆರಡು ದಿನ ನಾಲೆಗೆ ನೀರು ಮುಂದುವರೆಸುತ್ತೇವೆ. ಅಧಿಕೃತ ನಿರ್ಧಾರಕ್ಕಾಗಿ ಎರಡು ದಿನ ಕಾಯುತ್ತೇವೆ.
-ದಿವಾಕರ್‌ ನಾಯ್ಕ್‌, ಎಸ್‌ಇ, ಬಿಆರ್‌ ಪ್ರಾಜೆಕ್ಟ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ