ದಾವಣಗೆರೆ: ಸಾಮಾನ್ಯವಾಗಿ ಚುನಾವಣೆ ಬಂತೆಂದರೆ ಹಣ, ಹೆಂಡ, ಗಿಫ್ಟುಗಳ ಭರಾಟೆ ಜೋರಾಗಿಯೇ ಇರುತ್ತದೆ. ಮತದಾರರನ್ನು ಸೆಳೆಯಲು ಕೆಲವು ಅಭ್ಯರ್ಥಿಗಳು ಮುಲಾಜಿಲ್ಲದೆ ಹಣ ಖರ್ಚು ಮಾಡುತ್ತಾರೆ. ಆದರೆ, ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಅಂಥದ್ದೆಲ್ಲಾ ಆಮಿಷಗಳು ನಡೆಯಲ್ಲ. ಏಕೆ ಗೊತ್ತೆ? ಈ ಕ್ಷೇತ್ರದಲ್ಲಿ ಎಲ್ಲರೂ ಹಣವಂತರು. ಆದೇ ಕಾರಣದಿಂದ ಇಲ್ಲಿ ಹಣಕ್ಕಿಂತ ಜನ ಬೆಂಬಲವನ್ನು ಯಾರು ಗೆಲ್ಲುತ್ತಾರೆ ಅವರೇ ಜಯಶಾಲಿ ಆಗುತ್ತಾರೆ. ಹಾಗಾಗಿ, ಇಲ್ಲಿ ರಾಜಕಾರಣಿಗಳಿಗೆ ಪ್ರೀತಿ, ವಿಶ್ವಾಸ ಗಳಿಸಿಯೇ ಚುನಾವಣೆ ಗೆಲ್ಲಬೇಕಿದೆ. ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಜನರು ಹೆಚ್ಚಾಗಿದ್ದಾರೆ. ಅದರಲ್ಲೂ ಸಾಧು ಲಿಂಗಾಯಿತರು ಹೆಚ್ಚಿದ್ದು, ಅವರೇ ಗೆಲುವಿನ ನಿರ್ಣಾಯಕರು. ಆದ್ದರಿಂದ ಆ ಸಮಾಜದವರೇ ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್ ಬಯಸುತ್ತಾರೆ. ಈ ಕ್ಷೇತ್ರದಲ್ಲಿ ಬಡ, ಮಧ್ಯಮದವರಿಗಿಂತ ಶ್ರೀಮಂತರೇ ಹೆಚ್ಚು. ಅತಿ ಹೆಚ್ವು ಕ್ಲಾಸ್ ಒನ್ ಆಫೀಸರ್ ಗಳು ಈ ಕ್ಷೇತ್ರ ದಲ್ಲಿದ್ದಾರೆ. ಹಾಗಾಗಿ, ಇಲ್ಲಿ ದುಡ್ಡು, ಗಿಫ್ಟ್ ಏನೂ ನಡೆಯಲ್ಲ. ಏನಿದ್ದರೂ ಅಭ್ಯರ್ಥಿಗಳ ಒಳ್ಳೆತನಕ್ಕೆ ಮಾತ್ರ ಬೆಲೆ.
ಡಿ. 24ರಂದು ನಡೆಯಬೇಕಿದ್ದ ವೀರಶೈವ ಮಹಾಸಭಾ ಅಧಿವೇಶನ ಫೆಬ್ರವರಿಗೆ ಮುಂದೂಡಿಕೆಹೇಗಿದೆ ಟಿಕೆಟ್ ಗಾಗಿ ಸ್ಪರ್ಧೆ?
ಕಳೆದ 2018ರ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಕುಟುಂಬದ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ರವೀಂದ್ರನಾಥ್ ಅವರ ವಿರುದ್ಧ ಕಡಿಮೆ ಅಂತರದಿಂದ ಸೋತಿದ್ದರು. ಈಗ ಮತ್ತೊಮ್ಮ ಅಖಾಡ ಶುರುವಾಗಿದೆ. ಕೇವಲ 4071 ಮತಗಳ ಅಂತರದಿಂದ ಶಾಸಕ ರವೀಂದ್ರನಾಥ್ ಗೆದ್ದಿದ್ದು, ಈ ಬಾರಿ ಗೆಲುವಿನ ಲಕ್ಷ್ಮೀ ಯಾರ ಬಾಗಿಲಿಗೆ ಎಂಟ್ರಿ ಕೊಡುತ್ತಾಳೆ ಎಂಬುದು ಕುತೂಹಲ.
ಶಾಸಕ ರವೀಂದ್ರನಾಥ್ ಗೆ ವಯಸ್ಸಾಗಿರುವುದೇ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ವರದಾನವಾಗಿದೆ. ಅದಕ್ಕಾಗಿಯೇ ದಾವಣಗೆರೆ ಉತ್ತರಕ್ಕೆ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಬೆಳೆಯುತ್ತಿದೆ. ಆದರೆ ರವೀಂದ್ರನಾಥ್ ಎಲ್ಲಿಯೂ ಕೂಡ ನಾನು ಸ್ಪರ್ಧೆ ಮಾಡೋದಿಲ್ಲ ಅಂತ ಹೇಳಿಲ್ಲ. ಅಲ್ಲದೇ ಸಿಎಂ ಕೂಡ ರವೀಂದ್ರನಾಥ್ ಅವರನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ. ಆದರೂ ಹಲವು ಆಕಾಂಕ್ಷಿಗಳು ಕೊನೆ ಟೈಮ್ ನಲ್ಲಿ ಏನಾಬೇಕಾದರೂ ಆಗಬಹುದು ಎಂದು ತಾವು ಪ್ರಬಲ ಆಕಾಂಕ್ಷಿಗಳು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಶಾಸಕ ರವೀಂದ್ರನಾಥ್ ಗೆ ಆರ್ ಎಸ್ ಎಸ್ ಬಲವೂ ಇದೆ. ಮುಂದಿನ ದಿನಗಳಲ್ಲಿ ಟಿಕೆಟ್ ಸಿಕ್ಕರೂ ಸಿಗಬಹುದು.
ದಾವಣಗೆರೆ ಕ್ಷೇತ್ರ ವಿಭಜನೆಗೊಂಡ ಬಳಿಕ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿತು. 2008ರಲ್ಲಿ ಅಸ್ತಿತ್ವಕ್ಕೆ ಬಂದ ದಾವಣಗೆರೆ ಉತ್ತರ ಕ್ಷೇತ್ರ ಎರಡು ಚುನಾವಣೆಗಳನ್ನು ಮಾತ್ರ ಕಂಡಿದೆ. ಮೂರನೇ ಚುನಾವಣೆಗೆ ಸಜ್ಜಾಗಿರುವ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಗದೀಶ್, ಎಸ್.ಟಿ.ವೀರೇಶ್, ಸೋಮೇಶ್ವರ ಸುರೇಶ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಎಲ್ಲಿಯೂ ಟಿಕೆಟ್ ಆಕಾಂಕ್ಷಿಯಂತೆ ಹೇಳುವ ಹಾಗಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರಿಗೆ ಕೆಲಸ ಮಾಡುತ್ತೇವೆ ಎಂದು ಹೇಳಬೇಕೆಂಬ ಸೂಚನೆ ನೀಡಿರುವ ಹಿನ್ನೆಲೆ ಇದೊಂದು ವಾಕ್ಯ ಮಾತ್ರ ಬಿಜೆಪಿಯಿಂದ ಕೇಳಿ ಬರುತ್ತಿದೆ.
ಅಲ್ಲದೇ ಈ ಕ್ಷೇತ್ರದಿಂದ ಸ್ವತಃ ಸಿಎಂ ಬೊಮ್ಮಾಯಿ ನಿಲ್ಲುತ್ತಾರೆ ಎಂಬ ಊಹಾ ಪೋಹವಿತ್ತು. ಅಲ್ಲದೇ ದಾವಣಗೆರೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಸಿಎಂ ಬೊಮ್ಮಾಯಿ ಬರುತ್ತಿದ್ದು, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಸಿಎಂ ನಿಲ್ಲುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಸ್ವತಃ ಸಿಎಂ ನಾನು ನಿಲ್ಲೋದಿಲ್ಲ ಎಂದು ಹೇಳಿರುವ ಕಾರಣ ಉಳಿದ ಟಿಕೆಟ್ ಆಕಾಂಕ್ಷಿಗಳಿಗೆ ಹಾದಿ ಸುಗಮವಾಗಿದೆ.
ಇನ್ನು ಎಂಪಿ ಸಿದ್ದೇಶ್ ರಾಜ್ಯ ರಾಜಕಾರಣಕ್ಕೆ ಬರಲು ಸಜ್ಜಾಗಿದ್ದಾರೆ..ಇತ್ತೀಚೆಗೆ ಪಕ್ಷ ಹೇಳಿದರೆ ಗ್ರಾಮ ಪಂಚಾಯತಿಗೂ ನಿಲ್ಲುತ್ತೇನೆ ಎಂಬ ಹೇಳಿಕೆ ದಾವಣಗೆರೆ ಉತ್ತರಕ್ಕೆ ಎಂಪಿ ಸಿದ್ದೇಶ್ ಕೂಡ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿ ಎಂಬುದು ಗೊತ್ತಾಗುತ್ತಿದೆ..ಇನ್ನು ಚಿತ್ರದುರ್ಗದಿಂದ ಮಗ ಅನಿತ್ ರನ್ನು ನಿಲ್ಲಿಸುವ ತಂತ್ರವನ್ನು ಎಂಪಿ ಸಿದ್ದೇಶ್ ಕೈಗೊಂಡಿದ್ದು, ಅಲ್ಲಿ ಮಗ ಅನಿತ್ ಓಡಾಟ ಶುರುವಾಗಿದೆ. ಒಂದು ವೇಳೆ ಅಲ್ಲಿಂದ ಬಿಜೆಪಿ ಟಿಕೆಟ್ ಸಿಗದೇ ಹೋದರೆ ದಾವಣಗೆರೆ ಉತ್ತರದಿಂದ ನಿಲ್ಲಿಸುವ ಇರಾದೆ ಎಂಪಿ ಸಿದ್ದೇಶ್ ಅವರದ್ದಾಗಿದೆ.
ಇನ್ನು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಗೆ ಹಣಬಲವೂ ಇರುವ ಕಾರಣ ಇವರನ್ನು ಬಿಟ್ಟು ಕಾಂಗ್ರೆಸ್ ನಿಂದ ಯಾರು ಸ್ಫರ್ಧೆ ಮಾಡೋಲ್ಲ. ಇನ್ನೊಂದೆಡೆ ತಂದೆ ಶಾಮನೂರು ಶಿವಶಂಕರಪ್ಪ ವಯಸ್ಸಾಗಿರುವ ಕಾರಣ ದಾವಣಗೆರೆ ದಕ್ಷಿಣಕ್ಕೆ ಎಸ್.ಎಸ್.ಮಲ್ಲಿಕಾರ್ಜುನ ಹೋಗಲಿದ್ದು, ದಾವಣಗೆರೆ ಉತ್ತರಕ್ಕೆ ಪತ್ನಿ ಪ್ರಭಾ ಮಲ್ಲಿಕಾರ್ಜುನ ನಿಲ್ಲಿಸುವ ಸಂಭವ ತುಸು ಹೆಚ್ಚಿದೆ. ಇನ್ನು ಬಿಜೆಪಿಯಿಂದ ಜಗದೀಶ್, ಎಸ್.ಟಿ.ವೀರೇಶ್, ಸೋಮೇಶ್ವರ ಸುರೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಈ ಕ್ಷೇತ್ರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ದ ರವೀಂದ್ರನಾಥ್ ಅಥವಾ ಎಂಪಿ ಸಿದ್ದೇಶ್ ನಿಂತರೇ ನೇರಹಣಾಹಣಿ ನಡೆಯುತ್ತದೆ. ಒಂದು, ಎಸ್.ಎಸ್.ಮಲ್ಲಿಕಾರ್ಜುನ್ ಎದುರು ಇವರಿಬ್ಬರನ್ನು ಬಿಟ್ಟು ಬೇರೆಯವರು ನಿಂತರೇ ಎಸ್.ಎಸ್.ಗೆಲುವು ಖಚಿತ. ಇನ್ನೊಂದೆಡೆ ಎಸ್ಎಸ್ ಮಲ್ಲಿಕಾರ್ಜುನ ಬಿಟ್ಟು ಬೇರೊಬ್ಬರು ನಿಂತರೇ ಆಗ ಬಿಜೆಪಿ ಗೆಲ್ಲುತ್ತದೆ. ಎರಡು ಪಕ್ಷದಲ್ಲಿ ಹೊಸಬರು ನಿಂತರೇ ಬಿಜೆಪಿಗೆ ಫ್ಲಸ್ ಆಗಲಿದೆ..ಅಲ್ಲದೇ ಸಾಧು ಲಿಂಗಾಯಿತ ಬಿಟ್ಟು ಬೇರೆಪಂಗಡದವರು ನಿಂತರೇ ಫೈಟ್ ಇರೋದಿಲ್ಲ. ಇಲ್ಲಿ ಅತಿ ಹೆಚ್ಚು ಸಾಧು ಲಿಂಗಾಯತದವರು ಇರುವ ಕಾರಣ, ಆ ಸಮಾಜದ ಅಭ್ಯರ್ಥಿಯನ್ನೇ ಇಲ್ಲಿ ಹಾಕಬೇಕಾಗುತ್ತದೆ.
ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಅವರು 2013ರ ಚುನಾವಣೆಯಲ್ಲಿ ಬಿಜೆಪಿಯ ಎಸ್.ಎ. ರವೀಂದ್ರನಾಥ್ ಅವರನ್ನು 57 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಮಲ್ಲಿಕಾರ್ಜುನ ಅವರು 2008ರ ಚುನಾವಣೆಯಲ್ಲಿ ರವೀಂದ್ರನಾಥ್ ವಿರುದ್ಧ ಸೋತಿದ್ದರು.
“2013ರ ಚುನಾವಣೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಅವರು 88,101 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಎಸ್.ಎ.ರವೀಂದ್ರನಾಥ್ 30,821 ಮತ, ಜೆಡಿಎಸ್ನ ಟಿ.ಗಣೇಶ ದಾಸಕರಿಯಪ್ಪ 3,537 ಮತಗಳನ್ನು ಪಡೆದಿದ್ದರು. 2018 ರ ಚುನಾವಣೆಯಲ್ಲಿ 72469 ಮತಗಳನ್ನು ಎಸ್.ಎಸ್.ಮಲ್ಲಿಕಾರ್ಜುನ್ ಪಡೆದರೆ, ಎಸ್.ಎ.ರವೀಂದ್ರನಾಥ್ 76,540 ಮತಗಳನ್ನು ಪಡೆದಿದ್ದರು. ಜೆಡಿಎಸ್ ನ ವಡ್ಡನಹಳ್ಳಿ ಶಿವಕುಮಾರ್ 5381 ಮತಗಳನ್ನು ಪಡೆದಿದ್ದರು.ಯಾವ ಅಭ್ಯರ್ಥಿಯೂ ಇಷ್ಟವಿಲ್ಲ ಎಂದು 1071 ಮತಗಳು ಬಿದ್ದಿದ್ದವು. ಒಟ್ಟಾರೆ ಶ್ರೀಮಂತ ಕ್ಷೇತ್ರದಲ್ಲಿ ಮತದಾರ ಪ್ರಭು ಯಾರ ಮನೆಗೆ ಕಾಲಿಡುತ್ತಾನೆ’’ ಎಂದು ಕಾದು ನೋಡಬೇಕಾಗಿದೆ.
ಡಿ. 24ರಂದು ನಡೆಯಬೇಕಿದ್ದ ವೀರಶೈವ ಮಹಾಸಭಾ ಅಧಿವೇಶನ ಫೆಬ್ರವರಿಗೆ ಮುಂದೂಡಿಕೆಹೇಗಿದೆ ಟಿಕೆಟ್ ಗಾಗಿ ಸ್ಪರ್ಧೆ?
ಕಳೆದ 2018ರ ಚುನಾವಣೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಕುಟುಂಬದ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ರವೀಂದ್ರನಾಥ್ ಅವರ ವಿರುದ್ಧ ಕಡಿಮೆ ಅಂತರದಿಂದ ಸೋತಿದ್ದರು. ಈಗ ಮತ್ತೊಮ್ಮ ಅಖಾಡ ಶುರುವಾಗಿದೆ. ಕೇವಲ 4071 ಮತಗಳ ಅಂತರದಿಂದ ಶಾಸಕ ರವೀಂದ್ರನಾಥ್ ಗೆದ್ದಿದ್ದು, ಈ ಬಾರಿ ಗೆಲುವಿನ ಲಕ್ಷ್ಮೀ ಯಾರ ಬಾಗಿಲಿಗೆ ಎಂಟ್ರಿ ಕೊಡುತ್ತಾಳೆ ಎಂಬುದು ಕುತೂಹಲ.
ಶಾಸಕ ರವೀಂದ್ರನಾಥ್ ಗೆ ವಯಸ್ಸಾಗಿರುವುದೇ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ವರದಾನವಾಗಿದೆ. ಅದಕ್ಕಾಗಿಯೇ ದಾವಣಗೆರೆ ಉತ್ತರಕ್ಕೆ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಬೆಳೆಯುತ್ತಿದೆ. ಆದರೆ ರವೀಂದ್ರನಾಥ್ ಎಲ್ಲಿಯೂ ಕೂಡ ನಾನು ಸ್ಪರ್ಧೆ ಮಾಡೋದಿಲ್ಲ ಅಂತ ಹೇಳಿಲ್ಲ. ಅಲ್ಲದೇ ಸಿಎಂ ಕೂಡ ರವೀಂದ್ರನಾಥ್ ಅವರನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ. ಆದರೂ ಹಲವು ಆಕಾಂಕ್ಷಿಗಳು ಕೊನೆ ಟೈಮ್ ನಲ್ಲಿ ಏನಾಬೇಕಾದರೂ ಆಗಬಹುದು ಎಂದು ತಾವು ಪ್ರಬಲ ಆಕಾಂಕ್ಷಿಗಳು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಶಾಸಕ ರವೀಂದ್ರನಾಥ್ ಗೆ ಆರ್ ಎಸ್ ಎಸ್ ಬಲವೂ ಇದೆ. ಮುಂದಿನ ದಿನಗಳಲ್ಲಿ ಟಿಕೆಟ್ ಸಿಕ್ಕರೂ ಸಿಗಬಹುದು.
ದಾವಣಗೆರೆ ಕ್ಷೇತ್ರ ವಿಭಜನೆಗೊಂಡ ಬಳಿಕ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿತು. 2008ರಲ್ಲಿ ಅಸ್ತಿತ್ವಕ್ಕೆ ಬಂದ ದಾವಣಗೆರೆ ಉತ್ತರ ಕ್ಷೇತ್ರ ಎರಡು ಚುನಾವಣೆಗಳನ್ನು ಮಾತ್ರ ಕಂಡಿದೆ. ಮೂರನೇ ಚುನಾವಣೆಗೆ ಸಜ್ಜಾಗಿರುವ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಗದೀಶ್, ಎಸ್.ಟಿ.ವೀರೇಶ್, ಸೋಮೇಶ್ವರ ಸುರೇಶ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಸೂಚನೆಯಂತೆ ಎಲ್ಲಿಯೂ ಟಿಕೆಟ್ ಆಕಾಂಕ್ಷಿಯಂತೆ ಹೇಳುವ ಹಾಗಿಲ್ಲ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರಿಗೆ ಕೆಲಸ ಮಾಡುತ್ತೇವೆ ಎಂದು ಹೇಳಬೇಕೆಂಬ ಸೂಚನೆ ನೀಡಿರುವ ಹಿನ್ನೆಲೆ ಇದೊಂದು ವಾಕ್ಯ ಮಾತ್ರ ಬಿಜೆಪಿಯಿಂದ ಕೇಳಿ ಬರುತ್ತಿದೆ.
ಅಲ್ಲದೇ ಈ ಕ್ಷೇತ್ರದಿಂದ ಸ್ವತಃ ಸಿಎಂ ಬೊಮ್ಮಾಯಿ ನಿಲ್ಲುತ್ತಾರೆ ಎಂಬ ಊಹಾ ಪೋಹವಿತ್ತು. ಅಲ್ಲದೇ ದಾವಣಗೆರೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಸಿಎಂ ಬೊಮ್ಮಾಯಿ ಬರುತ್ತಿದ್ದು, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಸಿಎಂ ನಿಲ್ಲುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಸ್ವತಃ ಸಿಎಂ ನಾನು ನಿಲ್ಲೋದಿಲ್ಲ ಎಂದು ಹೇಳಿರುವ ಕಾರಣ ಉಳಿದ ಟಿಕೆಟ್ ಆಕಾಂಕ್ಷಿಗಳಿಗೆ ಹಾದಿ ಸುಗಮವಾಗಿದೆ.
ಇನ್ನು ಎಂಪಿ ಸಿದ್ದೇಶ್ ರಾಜ್ಯ ರಾಜಕಾರಣಕ್ಕೆ ಬರಲು ಸಜ್ಜಾಗಿದ್ದಾರೆ..ಇತ್ತೀಚೆಗೆ ಪಕ್ಷ ಹೇಳಿದರೆ ಗ್ರಾಮ ಪಂಚಾಯತಿಗೂ ನಿಲ್ಲುತ್ತೇನೆ ಎಂಬ ಹೇಳಿಕೆ ದಾವಣಗೆರೆ ಉತ್ತರಕ್ಕೆ ಎಂಪಿ ಸಿದ್ದೇಶ್ ಕೂಡ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿ ಎಂಬುದು ಗೊತ್ತಾಗುತ್ತಿದೆ..ಇನ್ನು ಚಿತ್ರದುರ್ಗದಿಂದ ಮಗ ಅನಿತ್ ರನ್ನು ನಿಲ್ಲಿಸುವ ತಂತ್ರವನ್ನು ಎಂಪಿ ಸಿದ್ದೇಶ್ ಕೈಗೊಂಡಿದ್ದು, ಅಲ್ಲಿ ಮಗ ಅನಿತ್ ಓಡಾಟ ಶುರುವಾಗಿದೆ. ಒಂದು ವೇಳೆ ಅಲ್ಲಿಂದ ಬಿಜೆಪಿ ಟಿಕೆಟ್ ಸಿಗದೇ ಹೋದರೆ ದಾವಣಗೆರೆ ಉತ್ತರದಿಂದ ನಿಲ್ಲಿಸುವ ಇರಾದೆ ಎಂಪಿ ಸಿದ್ದೇಶ್ ಅವರದ್ದಾಗಿದೆ.
ಇನ್ನು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಗೆ ಹಣಬಲವೂ ಇರುವ ಕಾರಣ ಇವರನ್ನು ಬಿಟ್ಟು ಕಾಂಗ್ರೆಸ್ ನಿಂದ ಯಾರು ಸ್ಫರ್ಧೆ ಮಾಡೋಲ್ಲ. ಇನ್ನೊಂದೆಡೆ ತಂದೆ ಶಾಮನೂರು ಶಿವಶಂಕರಪ್ಪ ವಯಸ್ಸಾಗಿರುವ ಕಾರಣ ದಾವಣಗೆರೆ ದಕ್ಷಿಣಕ್ಕೆ ಎಸ್.ಎಸ್.ಮಲ್ಲಿಕಾರ್ಜುನ ಹೋಗಲಿದ್ದು, ದಾವಣಗೆರೆ ಉತ್ತರಕ್ಕೆ ಪತ್ನಿ ಪ್ರಭಾ ಮಲ್ಲಿಕಾರ್ಜುನ ನಿಲ್ಲಿಸುವ ಸಂಭವ ತುಸು ಹೆಚ್ಚಿದೆ. ಇನ್ನು ಬಿಜೆಪಿಯಿಂದ ಜಗದೀಶ್, ಎಸ್.ಟಿ.ವೀರೇಶ್, ಸೋಮೇಶ್ವರ ಸುರೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಈ ಕ್ಷೇತ್ರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ದ ರವೀಂದ್ರನಾಥ್ ಅಥವಾ ಎಂಪಿ ಸಿದ್ದೇಶ್ ನಿಂತರೇ ನೇರಹಣಾಹಣಿ ನಡೆಯುತ್ತದೆ. ಒಂದು, ಎಸ್.ಎಸ್.ಮಲ್ಲಿಕಾರ್ಜುನ್ ಎದುರು ಇವರಿಬ್ಬರನ್ನು ಬಿಟ್ಟು ಬೇರೆಯವರು ನಿಂತರೇ ಎಸ್.ಎಸ್.ಗೆಲುವು ಖಚಿತ. ಇನ್ನೊಂದೆಡೆ ಎಸ್ಎಸ್ ಮಲ್ಲಿಕಾರ್ಜುನ ಬಿಟ್ಟು ಬೇರೊಬ್ಬರು ನಿಂತರೇ ಆಗ ಬಿಜೆಪಿ ಗೆಲ್ಲುತ್ತದೆ. ಎರಡು ಪಕ್ಷದಲ್ಲಿ ಹೊಸಬರು ನಿಂತರೇ ಬಿಜೆಪಿಗೆ ಫ್ಲಸ್ ಆಗಲಿದೆ..ಅಲ್ಲದೇ ಸಾಧು ಲಿಂಗಾಯಿತ ಬಿಟ್ಟು ಬೇರೆಪಂಗಡದವರು ನಿಂತರೇ ಫೈಟ್ ಇರೋದಿಲ್ಲ. ಇಲ್ಲಿ ಅತಿ ಹೆಚ್ಚು ಸಾಧು ಲಿಂಗಾಯತದವರು ಇರುವ ಕಾರಣ, ಆ ಸಮಾಜದ ಅಭ್ಯರ್ಥಿಯನ್ನೇ ಇಲ್ಲಿ ಹಾಕಬೇಕಾಗುತ್ತದೆ.
ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಅವರು 2013ರ ಚುನಾವಣೆಯಲ್ಲಿ ಬಿಜೆಪಿಯ ಎಸ್.ಎ. ರವೀಂದ್ರನಾಥ್ ಅವರನ್ನು 57 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಮಲ್ಲಿಕಾರ್ಜುನ ಅವರು 2008ರ ಚುನಾವಣೆಯಲ್ಲಿ ರವೀಂದ್ರನಾಥ್ ವಿರುದ್ಧ ಸೋತಿದ್ದರು.
“2013ರ ಚುನಾವಣೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ ಅವರು 88,101 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಎಸ್.ಎ.ರವೀಂದ್ರನಾಥ್ 30,821 ಮತ, ಜೆಡಿಎಸ್ನ ಟಿ.ಗಣೇಶ ದಾಸಕರಿಯಪ್ಪ 3,537 ಮತಗಳನ್ನು ಪಡೆದಿದ್ದರು. 2018 ರ ಚುನಾವಣೆಯಲ್ಲಿ 72469 ಮತಗಳನ್ನು ಎಸ್.ಎಸ್.ಮಲ್ಲಿಕಾರ್ಜುನ್ ಪಡೆದರೆ, ಎಸ್.ಎ.ರವೀಂದ್ರನಾಥ್ 76,540 ಮತಗಳನ್ನು ಪಡೆದಿದ್ದರು. ಜೆಡಿಎಸ್ ನ ವಡ್ಡನಹಳ್ಳಿ ಶಿವಕುಮಾರ್ 5381 ಮತಗಳನ್ನು ಪಡೆದಿದ್ದರು.ಯಾವ ಅಭ್ಯರ್ಥಿಯೂ ಇಷ್ಟವಿಲ್ಲ ಎಂದು 1071 ಮತಗಳು ಬಿದ್ದಿದ್ದವು. ಒಟ್ಟಾರೆ ಶ್ರೀಮಂತ ಕ್ಷೇತ್ರದಲ್ಲಿ ಮತದಾರ ಪ್ರಭು ಯಾರ ಮನೆಗೆ ಕಾಲಿಡುತ್ತಾನೆ’’ ಎಂದು ಕಾದು ನೋಡಬೇಕಾಗಿದೆ.