ಆ್ಯಪ್ನಗರ

ಚುಚ್ಚು ಮದ್ದಿನಿಂದ ಮಗು ಸಾವು: ದಾವಣಗೆರೆಯಲ್ಲಿ ಪೋಷಕರ ಆರೋಪ

ಆರೋಗ್ಯ ಇಲಾಖೆ ನೀಡಿದ ಚುಚ್ಚು ಮದ್ದಿನಿಂದ ನನ್ನ ನಾಲ್ಕು ತಿಂಗಳ ಮಗು ಜೀವನ್‌ ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.

Vijaya Karnataka Web 24 Jun 2018, 5:18 pm
ದಾವಣಗೆರೆ: ಆರೋಗ್ಯ ಇಲಾಖೆ ನೀಡಿದ ಚುಚ್ಚು ಮದ್ದಿನಿಂದ ನನ್ನ ನಾಲ್ಕು ತಿಂಗಳ ಮಗು ಜೀವನ್‌ ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.
Vijaya Karnataka Web Vaccination


ಈ ಘಟನೆ ನಗರದ ಅರುಣಾ ಸರ್ಕಲ್‌ ಬಳಿ ಇರುವ ಮೈಸೂರು ಕಣದಲ್ಲಿ ಭಾನುವಾರ ನಡೆದಿದ್ದು, ಆರೋಗ್ಯ ಇಲಾಖೆ ವಿರುದ್ಧ ಪೋಷಕರಾದ ಗೀತಮ್ಮ, ಪರಶುರಾಮ ದಂಪತಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಮಧ್ಯಾಹ್ನ ನಮ್ಮ ಮಗುವಿಗೆ ಚುಚ್ಚುಮದ್ದು ಹಾಕಿಸಲಾಗಿತ್ತು. ಸಂಜೆ ವೇಳೆಗೆ ಮಗು ಅಸ್ವಸ್ಥಗೊಂಡು ಮೃತಪಟ್ಟಿತ್ತು ಎಂದು ಪೋಷಕರು ಹೇಳಿದ್ದಾರೆ.

ಆದರೆ ಈ ಆರೋಪವನ್ನು ಡಿಹೆಚ್‌ಒ ತ್ರಿಪುಲಾಂಭ ತಳ್ಳಿಹಾಕಿದ್ದು, ಇಲಾಖೆಯಿಂದ 2,4,6 ತಿಂಗಳಿಗೊಮ್ಮೆ ಮಗುವಿಗೆ ನಾಯಿಕೆಮ್ಮು, ನ್ಯೂಮೇನಿಯಾ, ಹೆಪಟೈಟೀಸ್‌, ಹಿಮೋಪೋಲಿಯಾ ಬಾರದಂತೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪೆಂಟಾವಲೆಂಟ್‌ ಚುಚ್ಚು ಮದ್ದನ್ನು ಹಾಕಲಾಗುತ್ತದೆ. ಸಮಸ್ಯೆ ಆದರೆ ಮೊದಲಿನ ಹಂತದಲ್ಲಿಯೇ ಆಗಬೇಕಿತ್ತು. ಎರಡನೇ ಹಂತದಲ್ಲಿ ಆಗುವುದಿಲ್ಲ ಎಂದು ಹೇಳಿದರು.

ವ್ಯಾಕ್ಸಿನ್‌ ಹಾಕಿದ ವೇಳೆ ಮಗು ಚೆನ್ನಾಗಿತ್ತು. ಆದರೆ 8.30ರೊಳಗೆ ಮಗು ಮೃತಪಟ್ಟಿದೆ. ಕಾರಣ ತಿಳಿಯಲು ಮಗು ಮರಣೋತ್ತರ ಪರೀಕ್ಷೆ ಮಾಡಲು ಪೋಷಕರು ಒಪ್ಪಲಿಲ್ಲ. ಆದ್ದರಿಂದ ಇಲಾಖೆ ಹಂತದಲ್ಲಿ ವಿಚಾರಣೆ ಕೈಗೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ