ಆ್ಯಪ್ನಗರ

ಕ್ಷ ಯರೋಗ ಮುಕ್ತ ಜಿಲ್ಲೆಯಾಗಿಸಲು ಕೈಜೋಡಿಸಿ

ಕ್ಷ ಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ ಕೈಜೋಡಿಸಬೇಕು ಎಂದು ಕೇಂದ್ರದ ಆಡಳಿತ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮಂತ್ರಾಲಯದ ಹಿರಿಯ ಪ್ರಾದೇಶಿಕ ನಿರ್ದೇಶಕ ಡಾ.ಕೆ. ರವಿಕುಮಾರ್‌ ಸಲಹೆ ನೀಡಿದರು.

Vijaya Karnataka 27 Mar 2019, 5:00 am
ದಾವಣಗೆರೆ : ಕ್ಷ ಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ ಕೈಜೋಡಿಸಬೇಕು ಎಂದು ಕೇಂದ್ರದ ಆಡಳಿತ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮಂತ್ರಾಲಯದ ಹಿರಿಯ ಪ್ರಾದೇಶಿಕ ನಿರ್ದೇಶಕ ಡಾ.ಕೆ. ರವಿಕುಮಾರ್‌ ಸಲಹೆ ನೀಡಿದರು.
Vijaya Karnataka Web join in to become an x free district
ಕ್ಷ ಯರೋಗ ಮುಕ್ತ ಜಿಲ್ಲೆಯಾಗಿಸಲು ಕೈಜೋಡಿಸಿ


ನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷ ಯರೋಗ ನಿಯಂತ್ರಣ ಕೇಂದ್ರ ಹಾಗೂ ನಾನಾ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಕ್ಷ ಯರೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷ ಯರೋಗವನ್ನು ನಿಯಂತ್ರಿಸುವಲ್ಲಿ ಇಲ್ಲಿನ ವೈದ್ಯರು, ಸಿಬ್ಬಂದಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುವ ಪರಿಣಾಮ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ. ಸರಕಾರವು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಕ್ಷ ಯರೋಗ ನಿರ್ಮೂಲನೆಗಾಗಿ ಉಚಿತ ಚಿಕಿತ್ಸೆ ನೀಡುತ್ತಿದೆ. ಕ್ಷ ಯ ಹೊಂದಿದ ರೋಗಿಯ ಬಗ್ಗೆ ಖಾಸಗಿ ಆಸ್ಪತ್ರೆಯಲ್ಲೂ ಮಾಹಿತಿ ಪಡೆದು ಉಚಿತ ಚಿಕಿತ್ಸೆಗೆ ಸಹಕರಿಸಲಾಗುವುದು ಎಂದರು.

ಜಿಲ್ಲಾ ಕ್ಷ ಯ ರೋಗ ನಿಯಂತ್ರಣಾಧಿಕಾರಿ ಡಾ.ಜಿ.ಡಿ ರಾಘವನ್‌ ಮಾತನಾಡಿ, ಜರ್ಮನ್‌ ವಿಜ್ಞಾನಿ ಡಾ. ರಾಬರ್ಟ್‌ ಕಾಖ್‌ 1882ರ ಮಾ.24 ರಂದು ಕ್ಷ ಯ ರೋಗವನ್ನು ಉಂಟುಮಾಡುವ ಮೈಕೊ ಬ್ಯಾಕ್ಟೀರಿಯಂ ಟ್ಯೂಬರ್‌ಕುಲೋಸಿಸ್‌ ಎಂಬ ಸ್ಮೂಕ್ಷಾಣು ಕಂಡುಹಿಡಿದ ದಿನವನ್ನು ವಿಶ್ವ ಕ್ಷ ಯರೋಗ ದಿನವನ್ನಾಗಿ ಪ್ರತಿ ವರ್ಷ ಮಾ.24 ರಂದು ಆಚರಿಸಲಾಗುತ್ತಿದೆ ಎಂದರು.

ವರ್ಷ 4.35 ಲಕ್ಷ ಜನ ಸಾವು:
ದೇಶದಲ್ಲಿ ವರ್ಷಕ್ಕೆ 2.79 ದಶಲಕ್ಷ ರೋಗಿಗಳು ಕ್ಷ ಯರೋಗಕ್ಕೆ ಒಳಗಾಗಿ ದಾಖಲಾಗುತ್ತಿದ್ದಾರೆ. ಅದರಲ್ಲಿ 4.35 ಲಕ್ಷ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಪ್ರತಿದಿನ ಭಾರತದಲ್ಲಿ 6 ಸಾವಿರಕ್ಕಿಂತಲೂ ಹೆಚ್ಚಿನ ಜನರು ಕ್ಷ ಯರೋಗದ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದರಲ್ಲಿ ದಿನಕ್ಕೆ 600ಕ್ಕಿಂತ ಹೆಚ್ಚು ಅಂದರೆ ಪ್ರತಿ 5 ನಿಮಿಷಕ್ಕೆ ಇಬ್ಬರಂತೆ ಮರಣ ಹೊಂದುತ್ತಿದ್ದಾರೆ ಎಂದರು.

ಎನ್‌ಎಚ್‌ಎಂ ಯೋಜನೆ:
ಡಿಎಚ್‌ಒ ಡಾ. ತ್ರಿಪುಲಾಂಭ ಮಾತನಾಡಿ, ಪ್ರತಿದಿನ ವಿಶ್ವದಾದ್ಯಂತ ಕ್ಷ ಯರೋಗಕ್ಕೆ ಒಳಗಾಗಿ 4,500 ಜನರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ಅವರಲ್ಲಿ ಕ್ಷ ಯರೋಗದ ಬಗ್ಗೆ ಅರಿವಿನ ಕೊರತೆ. ಹಿಂದೆ ಕ್ಷ ಯರೋಗ ಇದೆ ಎಂದಾದರೆ ಅವರನ್ನು ಸಾಮಾಜಿಕವಾಗಿ ಅಸಮಾನತೆಯಿಂದ ಕಾಣುತ್ತಿದ್ದರು. 2005 ರಲ್ಲಿ ಎನ್‌ಎಚ್‌ಎಂ ಯೋಜನೆ ಬಂದಾಗಿನಿಂದ ಇದು ಬದಲಾಯಿತು ಎಂದು ಹೇಳಿದರು.

ಜಿಲ್ಲೆಯಾದ್ಯಂತ ಪರಿಷ್ಕೃತ ರಾಷ್ಟ್ರೀಯ ಕ್ಷ ಯರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಿಜಿ ಆಸ್ಪತ್ರೆ ಅಧೀಕ್ಷಕಿ ಡಾ.ಎಚ್‌.ಡಿ.ನೀಲಾಂಬಿಕೆ, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಯು.ಸಿದ್ದೇಶಿ, ಆರ್‌ಸಿಎಚ್‌ಒ ಡಾ.ಇ ಶಿವಕುಮಾರ್‌, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸರೋಜ ಬಾಯಿ, ಜಿಲ್ಲಾ ಸರ್ವೇಕ್ಷ ಣಾಧಿಕಾರಿ ಡಾ.ಗಂಗಾಧರ್‌, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಡಾ.ಪ್ರಕಾಶ್‌ ಇತರರು ಇದ್ದರು.

ಮಾಸಿಕ ಭತ್ಯ 500 ರೂ.
ಭಾರತದಲ್ಲಿ 5 ಜನರಲ್ಲಿ ಒಬ್ಬರು ಕ್ಷ ಯ ರೋಗದಿಂದ ಮೃತಪಡುತ್ತಿದ್ದಾರೆ. ಇದಕ್ಕಾಗಿ ಜಿಲ್ಲೆಯಲ್ಲಿ ಕ್ಷ ಯ ರೋಗ ಹೊಂದಿದ ವ್ಯಕ್ತಿಗಳಿಗೆ ನಿಕ್ಷ ಯ್‌ ಯೋಜನೆಯಡಿ ಮಾಸಿಕ ಭತ್ಯೆ 500 ರೂ. ನೀಡಲಾಗುತ್ತಿದೆ ಎಂದು ಡಾ.ಕೆ. ರವಿಕುಮಾರ್‌ ತಿಳಿಸಿದರು.

152 ರೋಗಿಗಳ ಸಾವು
ದಾವಣಗೆರೆ ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ 1994 ಕ್ಷ ಯರೋಗಿಗಳು ಪತ್ತೆಯಾಗಿದ್ದಾರೆ. 1616 ರೋಗಿಗಳು ಗುಣಮುಖರಾಗಿದ್ದು, 152 ರೋಗಿಗಳು ಸಾವನ್ನಪ್ಪಿದ್ದಾರೆ. 59 ರೋಗಿಗಳು ಅರ್ಧದಲ್ಲೆ ಚಿಕಿತ್ಸೆ ನಿಲ್ಲಿಸಿದ್ದಾರೆ. ಇಂತಹ ರೋಗಿಗಳನ್ನು ಪುನಃ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಕ್ಷ ಯ ರೋಗ ನಿಯಂತ್ರಣಾಧಿಕಾರಿ ಡಾ.ಜಿ.ಡಿ ರಾಘವನ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ