ದಾವಣಗೆರೆ: ಜನರ ಆರೋಗ್ಯ ವಿಚಾರವಾಗಿ ರಾಜಕೀಯ ಮಾಡುವುದು ನೀಚತನ ಎಂದು ಕಾಂಗ್ರೆಸ್ ವಿರುದ್ಧ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಭಾನುವಾರ ಮಾತನಾಡಿದ ಅವರು, ಇದೀಗ ದಿಢೀರ್ ಲಸಿಕೆ ಎಲ್ಲಿಂದ ಬಂತು? ಮೋದಿ ಹುಟ್ಟುಹಬ್ಬದ ಹೆಸರಿನಲ್ಲಿ ಲಸಿಕೆ ನೀಡುವ ಉದ್ದೇಶ ಇದರ ಹಿಂದೆ ಇದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು. ಅಂತಹ ಯಾವುದೇ ಉದ್ದೇಶ ಇದರ ಹಿಂದೆ ಇಲ್ಲ. ಆರಂಭದಲ್ಲಿ ಕೋವಿಡ್ ಲಸಿಕೆ ಬರೋದೆ ಇಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದ್ರು. ಲಸಿಕೆ ಬಂದ ಬಳಿಕ ಗುಣಮಟ್ಟ ಇಲ್ಲ ಎಂದರು.ಅಲ್ಲದೆ ಇದು ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಆರೋಪ ಮಾಡಿದರು. ಲಸಿಕೆ ಪಡೆದುಕೊಂಡ ಬಳಿಕ ಕಡಿಮೆ ಬರ್ತಾ ಇದ್ಯಲ್ಲ ಎಂದು ಆರೋಪ ಮಾಡಿದ್ರು. ಅವರಿಗೆ ಬದ್ಧತೆ ಇಲ್ಲ. ಜನರ ಆರೋಗ್ಯ ವಿಚಾರವಾಗಿ ರಾಜಕೀಯ ನೀಚತನ ಸಲ್ಲದು ಎಂದು ಹೇಳಿದರು.
ಬಿಜೆಪಿ ಕಾರ್ಯಕಾರಿಣಿಗೆ ದೇವನಗರಿ ಸಜ್ಜು: ಸಿಎಂ ಬದಲಾವಣೆ ನಂತರ ಮೊದಲ ಸಭೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಎಲ್ಲ ಅಧಿಕಾರಿಗಳ ಸಹಕಾರದಿಂದ ರಾಜ್ಯದಲ್ಲಿ ಲಸಿಕೆ ಅಭಿಯಾನ ಯಶಸ್ವಿ ಆಗಲು ಸಾಧ್ಯವಾಗಿದೆ. ಜನರೂ ಕೂಡ ಸ್ವಯಂ ಪ್ರೇರಣೆಯಿಂದ ಬಂದು ಲಸಿಕೆ ಪಡೆದುಕೊಂಡಿದ್ದಾರೆ. ಒಂದೇ ದಿನ ರಾಜ್ಯದಲ್ಲಿ 31,61,000 ಲಸಿಕೆ ನೀಡಿದ್ದೇವೆ. ಬಿಹಾರ ನಮಗಿಂತ ಹೆಚ್ಚಿನ ಪ್ರಮಾಣದ ಲಸಿಕೆ ನೀಡಿದೆ. ಆದರೆ ಜನಸಂಖ್ಯೆಯಲ್ಲಿ ಅದು ದೊಡ್ಡ ರಾಜ್ಯ ಎಂದರು ತಿಳಿಸಿದರು.
ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರವಾಗಿ ಲಸಿಕೆ ನೀಡುವ ಗುರಿ ಇದೆ. ಸೆಪ್ಟಂಬರ್ ತಿಂಗಳು ಅಂತ್ಯದ ವೇಳೆಗೆ ನೂರು ಶೇ. ಮೊದಲ ಡೋಸ್ ನೀಡುವ ಹಾಗೂ ಡಿಸೆಂಬರ್ ತಿಂಗಳಲ್ಲಿ ಎರಡು ಡೋಸ್ ಎಲ್ಲ ಜನರಿಗೆ ನೀಡುವ ಗುರಿ ಇದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಜ್ವರ ಕಾಣಿಸಿಗೊಳ್ಳುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಾಮಾನ್ಯ ಜ್ವರ ಇದಾಗಿದೆ ಅಷ್ಟೇ, ಕೋವಿಡ್ ಪರೀಕ್ಷೆಗಳನ್ನು ಮಕ್ಕಳಿಗೆ ಮಾಡುತ್ತಿದ್ದೇವೆ. ಯಾವುದೇ ಆತಂಕ ಇಲ್ಲ. ಸಾಮಾನ್ಯ ಜ್ವರಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ ಚಟುವಟಿಕೆ ಆರಂಭ ಆಗಿರುವುದರಿಂದ ಇದು ಸ್ವಾಭಾವಿಕ. ಸೂಕ್ತ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ಮಕ್ಕಳಿಗೆ ಕೋವಿಡ್ ಲಸಿಕೆ ಪ್ರಾಯೋಗಿಕ ಹಂತದಲ್ಲಿ ಇದೆ. ಲಸಿಕೆ ಇನ್ನೂ ಬಂದಿಲ್ಲ. ಆದಷ್ಟು ಶೀಘ್ರದಲ್ಲಿ ಮಕ್ಕಳಿಗೂ ನೀಡುವ ಲಸಿಕೆ ಬರುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕಾರಿಣಿಗೆ ದೇವನಗರಿ ಸಜ್ಜು: ಸಿಎಂ ಬದಲಾವಣೆ ನಂತರ ಮೊದಲ ಸಭೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಎಲ್ಲ ಅಧಿಕಾರಿಗಳ ಸಹಕಾರದಿಂದ ರಾಜ್ಯದಲ್ಲಿ ಲಸಿಕೆ ಅಭಿಯಾನ ಯಶಸ್ವಿ ಆಗಲು ಸಾಧ್ಯವಾಗಿದೆ. ಜನರೂ ಕೂಡ ಸ್ವಯಂ ಪ್ರೇರಣೆಯಿಂದ ಬಂದು ಲಸಿಕೆ ಪಡೆದುಕೊಂಡಿದ್ದಾರೆ. ಒಂದೇ ದಿನ ರಾಜ್ಯದಲ್ಲಿ 31,61,000 ಲಸಿಕೆ ನೀಡಿದ್ದೇವೆ. ಬಿಹಾರ ನಮಗಿಂತ ಹೆಚ್ಚಿನ ಪ್ರಮಾಣದ ಲಸಿಕೆ ನೀಡಿದೆ. ಆದರೆ ಜನಸಂಖ್ಯೆಯಲ್ಲಿ ಅದು ದೊಡ್ಡ ರಾಜ್ಯ ಎಂದರು ತಿಳಿಸಿದರು.
ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರವಾಗಿ ಲಸಿಕೆ ನೀಡುವ ಗುರಿ ಇದೆ. ಸೆಪ್ಟಂಬರ್ ತಿಂಗಳು ಅಂತ್ಯದ ವೇಳೆಗೆ ನೂರು ಶೇ. ಮೊದಲ ಡೋಸ್ ನೀಡುವ ಹಾಗೂ ಡಿಸೆಂಬರ್ ತಿಂಗಳಲ್ಲಿ ಎರಡು ಡೋಸ್ ಎಲ್ಲ ಜನರಿಗೆ ನೀಡುವ ಗುರಿ ಇದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಜ್ವರ ಕಾಣಿಸಿಗೊಳ್ಳುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಾಮಾನ್ಯ ಜ್ವರ ಇದಾಗಿದೆ ಅಷ್ಟೇ, ಕೋವಿಡ್ ಪರೀಕ್ಷೆಗಳನ್ನು ಮಕ್ಕಳಿಗೆ ಮಾಡುತ್ತಿದ್ದೇವೆ. ಯಾವುದೇ ಆತಂಕ ಇಲ್ಲ. ಸಾಮಾನ್ಯ ಜ್ವರಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ ಚಟುವಟಿಕೆ ಆರಂಭ ಆಗಿರುವುದರಿಂದ ಇದು ಸ್ವಾಭಾವಿಕ. ಸೂಕ್ತ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ಮಕ್ಕಳಿಗೆ ಕೋವಿಡ್ ಲಸಿಕೆ ಪ್ರಾಯೋಗಿಕ ಹಂತದಲ್ಲಿ ಇದೆ. ಲಸಿಕೆ ಇನ್ನೂ ಬಂದಿಲ್ಲ. ಆದಷ್ಟು ಶೀಘ್ರದಲ್ಲಿ ಮಕ್ಕಳಿಗೂ ನೀಡುವ ಲಸಿಕೆ ಬರುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.