ಆ್ಯಪ್ನಗರ

ದಾವಣಗೆರೆ: ಮಾಗಾನಹಳ್ಳಿಯ ಜಾತ್ರೆಯಲ್ಲಿ ಕಿಸ್‌ ಕೊಡೊದೇ ವಿಶೇಷ!

ಊರ ಗೌಡ ಹಾಗೂ ಗ್ರಾಮದ ಶೋಷಿತ ಸಮಾಜದ ಮಹಿಳೆ ಸೇರಿ ನೃತ್ಯ ಮಾಡುತ್ತಾರೆ. ಇದೊಂದು ಸಂಪ್ರದಾಯ. ಇದಕ್ಕೆ ಜಾನಪದಿಯ ಭಾಷೆಯಲ್ಲಿ ಆಶಾದಿ ಎಂದು ಕರೆಯುತ್ತಾರೆ. ಜಾತ್ರೆಯಲ್ಲಿ ಸಣ್ಣ ಮಕ್ಕಳು, ವಯಸ್ಕರು ಹಾಗೂ ವೃದ್ಧರು ಮೂರು ಪ್ರಕಾರಗಳಿವೆ.

Vijaya Karnataka Web 28 Feb 2020, 9:03 pm
ದಾವಣಗೆರೆ: ಸಾಮಾನ್ಯವಾಗಿ ಜಾತ್ರೆ ಎಂದರೆ ಸಾಕು ಮಹಿಳೆಯರು, ಪುರುಷರು ರಥ ಎಳೆಯುವುದು, ಪಲ್ಲಕ್ಕಿಯಲ್ಲಿ ದೇವರನ್ನು ಕೂರಿಸುವುದು, ಕುರಿ, ಕೋಣಗಳನ್ನು ಬಲಿಕೊಡುವುದು, ಹೀಗೆ ಹತ್ತಾರು ಸಂಪ್ರದಾಯಗಳನ್ನು ಕಾಣಬಹುದು. ಆದರೆ ಇಲ್ಲೊಂದು ದೇವಿ ಜಾತ್ರೆಯಲ್ಲಿ ಪರಸ್ಪರ ಮುತ್ತನ್ನಿಡಬೇಕು.

ಹೌದು.. ಇಂತಹದೊಂದು ಸಂಪ್ರದಾಯ ತಾಲೂಕಿನ ಮಾಗಾನಹಳ್ಳಿ ಗ್ರಾಮದ ಊರಮ್ಮದೇವಿ ಜಾತ್ರೆಯಲ್ಲಿ ನಡೆಯುತ್ತದೆ. ಇದೊಂದು ವಿಚಿತ್ರ ಮತ್ತು ವಿಶೇಷ ಸಂಪ್ರದಾಯವಾಗಿದೆ.

ಶತ ಶತಮಾನಗಳಿಂದ ಇದು ಜೀವಂತವಿದೆ. ಮಾಮೂಲಿ ಹೆಣ್ಣು ದೇವರು ಅಂದ್ರೆ ಕುರಿ, ಕೋಳಿಗಳನ್ನು ಭಕ್ತರು ಬಲಿ ಕೊಡುತ್ತಾರೆ. ಆದರೆ ಈ ದೇವಿಗೆ ಮಾತ್ರ ಬೈಗುಳ ಹಾಗೂ ಮಾದಕ ನೃತ್ಯವೇ ನೈವೇದ್ಯ.

ಈ ಜಾತ್ರೆಯಲ್ಲಿ ಭಕ್ತರು ಮೈಚಳಿ ಬಿಟ್ಟು ಕುಣಿಯುತ್ತಾರೆ. ಹಾಡೊಂದು ಪ್ಲೇ ಆದ ತಕ್ಷಣ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಬೇಕು. ಪರಸ್ಪರ ಅಪ್ಪಿಕೊಳ್ಳುವುದು ಓಡೋಡಿ ಬಂದು ಮುತ್ತು ಕೊಡಬೇಕಿರುವುದು ಪದ್ದತಿ.

ಗ್ರಾಮ ದೇವತೆ ಜಾತ್ರೆಯಲ್ಲಿ ನೃತ್ಯದ ಮೂಲಕ ದೇವಿಗೆ ಸೇವೆ ಅರ್ಪಿಸುವ ಪದ್ದತಿ ಶತಮಾನಗಳಿಂದ ಜೀವಂತವಾಗಿ ಉಳಿದು ಬಂದಿದೆ. ಜನಜಾತ್ರೆಯಲ್ಲಿಯೇ ಮುತ್ತಿಕ್ಕುವುದು ಈ ಸಂಪ್ರದಾಯದ ವಿಶೇಷ. ಊರಮ್ಮದೇವಿ ಜಾತ್ರೆಯಲ್ಲಿ ಇಂದಿಗೂ ಈ ಆಚರಣೆ ಜೀವಂತವಾಗಿದೆ.

ಪ್ರತಿ ಹತ್ತು ವರ್ಷಕೊಮ್ಮೆ ನಡೆಯುವ ಊರಮ್ಮ ದೇವಿ ಜಾತ್ರೆ ಮಹೋತ್ಸವದಲ್ಲಿ ಮಕ್ಕಳು, ವಯಸ್ಕರು ಹಾಗೂ ವೃದ್ದ ಜೋಡಿ ನೃತ್ಯ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಊರ ಗೌಡ ಹಾಗೂ ಗ್ರಾಮದ ಶೋಷಿತ ಸಮಾಜದ ಮಹಿಳೆ ಸೇರಿ ನೃತ್ಯ ಮಾಡುತ್ತಾರೆ. ಇದೊಂದು ಸಂಪ್ರದಾಯ. ಇದಕ್ಕೆ ಜಾನಪದಿಯ ಭಾಷೆಯಲ್ಲಿ ಆಶಾದಿ ಎಂದು ಕರೆಯುತ್ತಾರೆ.

ಮೂರು ಪ್ರಕಾರದ ನೃತ್ಯಗಳು

ಜಾತ್ರೆಯಲ್ಲಿ ಸಣ್ಣ ಮಕ್ಕಳು, ವಯಸ್ಕರು ಹಾಗೂ ವೃದ್ಧರು ಮೂರು ಪ್ರಕಾರಗಳಿವೆ. ಹೀಗೆ ಮೂರು ಹೆಣ್ಣು-ಗಂಡು ಸೇರಿ ನೃತ್ಯ ಮಾಡುವುದೇ ಆಶಾದಿ ಆಚರಣೆ.

ಈ ಜಾತ್ರೆಯಲ್ಲಿ ಹತ್ತಾರು ಪ್ರಕಾರದ ಆಚರಣೆಗಳು ಜೀವಂತವಿದೆ. ಇದಲ್ಲದೇ ಇನ್ನೊಂದು ಸಂಪ್ರದಾಯವಿದ್ದು, ಗ್ರಾಮದ ಶೋಷಿತ ಸಮಾಜದ ಮಹಿಳೆಯರು ಗ್ರಾಮದ ಕೆಲವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.

ಜೊತೆಗೆ ಊರಮ್ಮನಿಗೂ ಬೈಯುವುದು ಇಲ್ಲಿನ ಸಂಪ್ರದಾಯ. ಹೀಗೆ ಬೈಸಿಕೊಂಡರೇ ಊರಮ್ಮ ಬಡವರ ಸಂಕಷ್ಟಕ್ಕೆ ಸ್ಪಂದಿಸಲು ಮನಸ್ಸು ಮಾಡುತ್ತಾಳೆ ಎಂಬುದು ಸಂಪ್ರದಾಯ. ಆದ್ರೆ ಆಶಾದಿ ಸಂಪ್ರದಾಯ ಮಾತ್ರ ವಿಚಿತ್ರವಾಗಿದೆ ಎಂದು ಗ್ರಾಮದ ಮುಖಂಡ ಪರುಶುರಾಮ ಹೇಳುತ್ತಾರೆ.

ಮಹಿಳೆ ಜತೆ ನೃತ್ಯ ಮಾಡಿದ ರಾಜಶೇಖರ ಗೌಡ, ಹೀಗೆ ಶತಮಾನಗಳ ಹಿಂದಿನಿಂದ ಹತ್ತಾರು ಆಚರಣೆಗಳು ಜೀವಂತವಾಗಿವೆ. ಇವುಗಳನ್ನು ಈಗಲೂ ಜನ ಆಚರಿಸುತ್ತಾರೆ. ಹಿಂದಿನ ಕಾಲದಲ್ಲಿ ಶೋಷಿತ ಜನಾಂಗದ ಮಹಿಳೆಯನ್ನು ಶೋಷಣೆ ಮಾಡಲೆಂದು ಸಂಪ್ರದಾಯ ಹುಟ್ಟುಹಾಕಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತವೆ. ಹೀಗೆ ನಾಲ್ಕು ದಿನಗಳ ಕಾಲ ನಡೆಯುವ ಊರಮ್ಮನ ಜಾತ್ರೆ ಗಮ್ಮತ್ತೇ ಬೇರೆ ಎನ್ನುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ