ದಾವಣಗೆರೆ : ಯಾರಲ್ಲಿ ಸೋಮಾರಿತನ, ನಿರ್ಲಕ್ಷ ್ಯ ಮನೋಭಾವ ಇರುತ್ತದೆಯೋ ಅವರು ಬಡವರು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ತಿಳಿಸಿದರು.
ನಗರದ ಹದಡಿ ರಸ್ತೆಯ ಮಾಗನೂರು ಬಸಪ್ಪ ಶಾಲಾ ಮೈದಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಗುರು ಮೋಟಾರ್ಸ್ ಸಹಯೋಗದಲ್ಲಿ ಸೋಮವಾರ ನಡೆದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಆಟೋ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಇದುವರೆಗೂ ಸುಮಾರು 40 ಲಕ್ಷ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡಲಾಗಿದೆ. ನೀವು ಯಾರ ಹಂಗೂ ಇಲ್ಲದೇ ಶ್ರೀ ಮಂಜುನಾಥ ಸ್ವಾಮಿಯ ನೆನೆದು ಕೆಲಸ ನಿರ್ವಹಿಸಿ ಸ್ವಾವಲಂಬಿಗಳಾಗಿ ಬಾಳಬೇಕು. ಮನಸ್ಸಿದ್ದರೆ ಮಾರ್ಗ ಇದು ಸಾಧಿಸಿದರೆ ಸಾಧ್ಯ. ಪ್ರಾಮಾಣಿಕತೆಯೇ ನಿಮ್ಮನ್ನು ಕಾಪಾಡುತ್ತದೆ ಎಂದರು.
ದೇವರು ಬೆಲೆ ಬಾಳುವ ಕಣ್ಣು, ಕೈಕಾಲುಗಳನ್ನು ನೀಡಿದ್ದಾನೆ. ನಮಗೇನೂ ಕಡಿಮೆ ಇಲ್ಲ ನಾವು ಬಡವರಲ್ಲ. ಬರೀ ಹಣವಿದ್ದರೆ ಮಾತ್ರ ಶ್ರೀಮಂತರಲ್ಲ. ಇಷ್ಟೆಲ್ಲಾ ಆಸ್ತಿ ಹೊಂದಿರುವ ನಾವು ಬಡವರಲ್ಲ ಶ್ರೀಮಂತರೇ ಎಂದರು.
ಗುರು ಮೋಟಾರ್ಸ್ ಮಾಲೀಕರಾದ ಎನ್.ಜೆ.ಗುರುಸಿದ್ದಯ್ಯ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸುಮಾರು 2,500 ಕೋಟಿ ರೂ.ಗಳನ್ನು ಬಡವರ ಅಭಿವೃದ್ಧಿ, ಮಹಿಳಾ ಸ್ವ ಸಹಾಯ ಸಂಘಟನೆಗಳ ಕಾರ್ಯಕ್ಕೆ, ಕೃಷಿ, ಇತರೆ ವ್ಯವಹಾರಗಳನ್ನು ನಡೆಸಲು ಸಹಕಾರ ನೀಡಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತ ಅತೀ ಕಡಿಮೆ ಬಡ್ಡಿ ದರದಲ್ಲಿ ಸಹಾಯ ಮಾಡುತ್ತಿದೆ ಎಂದರು.
ಯಾರೂ ಸಹ ಹುಟ್ಟುತ್ತಾ ಶ್ರೀಮಂತರಾಗಿ ಬಂದಿರುವುದಿಲ್ಲ. ನಾನು ಕೂಡಾ ಆಟೋ ಓಡಿಸಿ ಜೀವನ ಆರಂಭಿಸಿದ್ದೇನೆ. ಪ್ರತಿ ದಿನ ನಿಮ್ಮ ಆಟೋರಿಕ್ಷಾಗೆ ನಮಸ್ಕರಿಸಿ ಕಾಯಕ ಆರಂಭಿಸಿ, ನಿಮ್ಮನ್ನು ಆ ಮಂಜುನಾಥ ಸ್ವಾಮಿ ಕಾಪಾಡುತ್ತಾನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 32 ಸ್ವಾವಲಂಬಿಗಳಿಗೆ ಆಟೋ ವಿತರಿಸಲಾಯಿತು. ಧರ್ಮಸ್ಥಳ ಸಂಸ್ಥೆ ದೇವನಗರಿ ಯೋಜನಾಧಿಕಾರಿಗಳಾದ ಜಯಂತ್ ಪೂಜಾರ, ಪದ್ಮಯ್ಯ, ಬಾಬು, ಜನಜಾಗೃತಿ ವೇದಿಕೆಯ ಅಣಬೇರು ಮಂಜಣ್ಣ, ಮಾಗನೂರು ಚಂದ್ರಶೇಖರ, ಸರ್ ಎಂವಿ ಕಾಲೇಜಿನ ಎಸ್.ಜೆ. ಶ್ರೀಧರ, ಗುರು ಮೋಟಾರ್ಸ್ನ ಎನ್.ಜಿ. ಚಂದ್ರಶೇಖರ, ಎನ್.ಜಿ. ಸಿದ್ದೇಶ, ಕುಸುಮ ಶೆಟ್ರು, ಗೌಡರ ಚನ್ನಬಸಪ್ಪ, ಸ್ವಸಹಾಯ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ನಗರದ ಹದಡಿ ರಸ್ತೆಯ ಮಾಗನೂರು ಬಸಪ್ಪ ಶಾಲಾ ಮೈದಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಗುರು ಮೋಟಾರ್ಸ್ ಸಹಯೋಗದಲ್ಲಿ ಸೋಮವಾರ ನಡೆದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಆಟೋ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಇದುವರೆಗೂ ಸುಮಾರು 40 ಲಕ್ಷ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡಲಾಗಿದೆ. ನೀವು ಯಾರ ಹಂಗೂ ಇಲ್ಲದೇ ಶ್ರೀ ಮಂಜುನಾಥ ಸ್ವಾಮಿಯ ನೆನೆದು ಕೆಲಸ ನಿರ್ವಹಿಸಿ ಸ್ವಾವಲಂಬಿಗಳಾಗಿ ಬಾಳಬೇಕು. ಮನಸ್ಸಿದ್ದರೆ ಮಾರ್ಗ ಇದು ಸಾಧಿಸಿದರೆ ಸಾಧ್ಯ. ಪ್ರಾಮಾಣಿಕತೆಯೇ ನಿಮ್ಮನ್ನು ಕಾಪಾಡುತ್ತದೆ ಎಂದರು.
ದೇವರು ಬೆಲೆ ಬಾಳುವ ಕಣ್ಣು, ಕೈಕಾಲುಗಳನ್ನು ನೀಡಿದ್ದಾನೆ. ನಮಗೇನೂ ಕಡಿಮೆ ಇಲ್ಲ ನಾವು ಬಡವರಲ್ಲ. ಬರೀ ಹಣವಿದ್ದರೆ ಮಾತ್ರ ಶ್ರೀಮಂತರಲ್ಲ. ಇಷ್ಟೆಲ್ಲಾ ಆಸ್ತಿ ಹೊಂದಿರುವ ನಾವು ಬಡವರಲ್ಲ ಶ್ರೀಮಂತರೇ ಎಂದರು.
ಗುರು ಮೋಟಾರ್ಸ್ ಮಾಲೀಕರಾದ ಎನ್.ಜೆ.ಗುರುಸಿದ್ದಯ್ಯ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸುಮಾರು 2,500 ಕೋಟಿ ರೂ.ಗಳನ್ನು ಬಡವರ ಅಭಿವೃದ್ಧಿ, ಮಹಿಳಾ ಸ್ವ ಸಹಾಯ ಸಂಘಟನೆಗಳ ಕಾರ್ಯಕ್ಕೆ, ಕೃಷಿ, ಇತರೆ ವ್ಯವಹಾರಗಳನ್ನು ನಡೆಸಲು ಸಹಕಾರ ನೀಡಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತ ಅತೀ ಕಡಿಮೆ ಬಡ್ಡಿ ದರದಲ್ಲಿ ಸಹಾಯ ಮಾಡುತ್ತಿದೆ ಎಂದರು.
ಯಾರೂ ಸಹ ಹುಟ್ಟುತ್ತಾ ಶ್ರೀಮಂತರಾಗಿ ಬಂದಿರುವುದಿಲ್ಲ. ನಾನು ಕೂಡಾ ಆಟೋ ಓಡಿಸಿ ಜೀವನ ಆರಂಭಿಸಿದ್ದೇನೆ. ಪ್ರತಿ ದಿನ ನಿಮ್ಮ ಆಟೋರಿಕ್ಷಾಗೆ ನಮಸ್ಕರಿಸಿ ಕಾಯಕ ಆರಂಭಿಸಿ, ನಿಮ್ಮನ್ನು ಆ ಮಂಜುನಾಥ ಸ್ವಾಮಿ ಕಾಪಾಡುತ್ತಾನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 32 ಸ್ವಾವಲಂಬಿಗಳಿಗೆ ಆಟೋ ವಿತರಿಸಲಾಯಿತು. ಧರ್ಮಸ್ಥಳ ಸಂಸ್ಥೆ ದೇವನಗರಿ ಯೋಜನಾಧಿಕಾರಿಗಳಾದ ಜಯಂತ್ ಪೂಜಾರ, ಪದ್ಮಯ್ಯ, ಬಾಬು, ಜನಜಾಗೃತಿ ವೇದಿಕೆಯ ಅಣಬೇರು ಮಂಜಣ್ಣ, ಮಾಗನೂರು ಚಂದ್ರಶೇಖರ, ಸರ್ ಎಂವಿ ಕಾಲೇಜಿನ ಎಸ್.ಜೆ. ಶ್ರೀಧರ, ಗುರು ಮೋಟಾರ್ಸ್ನ ಎನ್.ಜಿ. ಚಂದ್ರಶೇಖರ, ಎನ್.ಜಿ. ಸಿದ್ದೇಶ, ಕುಸುಮ ಶೆಟ್ರು, ಗೌಡರ ಚನ್ನಬಸಪ್ಪ, ಸ್ವಸಹಾಯ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.