ಆ್ಯಪ್ನಗರ

ಗಣಿತ ಸರಳ ಬೋಧನೆ ಕೌಶಲ್ಯ ರೂಢಿಸಿಕೊಳ್ಳಲಿ

ಗಣಿತ ವಿಷಯ ಕ್ಲಿಷ್ಟ ಎನ್ನುವ ಭೂತ ಪ್ರಾಥಮಿಕ, ಪ್ರೌಢ ಹಂತದ ವಿದ್ಯಾರ್ಥಿಗಳಲ್ಲಿದ್ದು, ಇದರಿಂದ ಹೊರ ಕರೆದಂತು ಇಷ್ಟಪಡುವ ರೀತಿಯಲ್ಲಿ ಸರಳ ಬೋಧನೆಯ ಕೌಶಲ್ಯವನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕು ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ಹೇಳಿದರು.

Vijaya Karnataka 19 Jan 2019, 5:00 am
ದಾವಣಗೆರೆ : ಗಣಿತ ವಿಷಯ ಕ್ಲಿಷ್ಟ ಎನ್ನುವ ಭೂತ ಪ್ರಾಥಮಿಕ, ಪ್ರೌಢ ಹಂತದ ವಿದ್ಯಾರ್ಥಿಗಳಲ್ಲಿದ್ದು, ಇದರಿಂದ ಹೊರ ಕರೆದಂತು ಇಷ್ಟಪಡುವ ರೀತಿಯಲ್ಲಿ ಸರಳ ಬೋಧನೆಯ ಕೌಶಲ್ಯವನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕು ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ಹೇಳಿದರು.
Vijaya Karnataka Web lets practice simple teaching skills in mathematics
ಗಣಿತ ಸರಳ ಬೋಧನೆ ಕೌಶಲ್ಯ ರೂಢಿಸಿಕೊಳ್ಳಲಿ


ನಗರದ ಬಿಐಇಟಿ ಕಾಲೇಜಿನ ಗಣಿತಶಾಸ್ತ್ರ ವಿಭಾಗ ಶ್ರೀನಿವಾಸ ರಾಮಾನುಜಂ ಸಭಾಂಗಣದಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್‌, ಗಣಿತಶಾಸ್ತ್ರ ವಿಭಾಗ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗಣಿತ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಒಂದು ಶಾಲೆಯ ಗಣಿತ ಫಲಿತಾಂಶ ಇಡೀ ಶಾಲೆಯ ಫಲಿತಾಂಶವನ್ನೇ ಸೂಚಿಸುತ್ತದೆ. ಆದ್ದರಿಂದ ಶಿಕ್ಷಕರು ಇಂತಹ ಕಾರ್ಯಾಗಾರಗಳನ್ನು ಸದ್ವಿನಿಯೋಗ ಪಡಿಸಿಕೊಂಡು ಹೊಸ ಕೌಶಲ್ಯ, ತಂತ್ರಗಾರಿಕೆಗಳನ್ನು ತಿಳಿದುಕೊಂಡು ವಿದ್ಯಾರ್ಥಿಗಳಿಗೆ ಸರಳವಾಗಿ ಬೋಧನೆ ಮಾಡಬೇಕು ಎಂದರು.

ತಂತ್ರಜ್ಞಾನ ಬೆಳವಣಿಗೆ:

ಬಿಐಇಟಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್‌. ಸುಬ್ರಮಣ್ಯಸ್ವಾಮಿ ಮಾತನಾಡಿ, ತಂತ್ರಜ್ಞಾನ ಬೆಳವಣಿಗೆ ರೀತಿಯಲ್ಲಿ ಮಕ್ಕಳು ಇರಲಿ, ಕೈಗಾರಿಕೆಗಳು ಸಹ ಬೆಳವಣಿಗೆ ಕಾಣಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ವೇಗದಲ್ಲಿ ತಂತ್ರಜ್ಞಾನ ಬೆಳೆಯುತ್ತಿದೆ. ಇಂಟರ್‌ನೆಟ್‌ ಸದ್ಬಳಕೆ ಮಾಡಿಕೊಂಡು ಇಲ್ಲಿಯೇ ಕುಳಿತುಕೊಂಡು ಕ್ಯಾಲಿಫೋರ್ನಿಯದಲ್ಲಿ ಕಾರು ಚಾಲನೆ ಮಾಡುವ ಕ್ರಿಯೆ ನಡೆಯುತ್ತಿದೆ. ರೊಬೋ ಬಳಸಿಕೊಂಡು ವ್ಯಕ್ತಿಯ ಸಂದರ್ಶನ ಮಾಡುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ ಎಂದರು.

ವಿದ್ಯಾರ್ಥಿಗಳಿಗೆ ಗಣಿತ ವಿಷಯ ಖುಷಿ ಕೊಡುವ ರೀತಿಯಲ್ಲಿ ಶಿಕ್ಷಕರು ಬೋಧನೆ ಮಾಡಬೇಕು. ಗಣಿತ ಎಲ್ಲಾ ಕ್ಷೇತ್ರಕ್ಕೂ ಅವಶ್ಯಕತೆ ಇದೆ. ಆದ್ದರಿಂದ ಈ ವಿಷಯಕ್ಕೆ ಹೆಚ್ಚು ಒತ್ತು ನೀಡಿ ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ ಎಂದರು.

ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಬೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಕೆಗೆ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಕಲಿಕೆಯ ಆಸಕ್ತಿ ಮಕ್ಕಳಲ್ಲಿಯೂ ಇರಬೇಕು. ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಉದಾಹರಣೆ ಸಹಿತವಾಗಿ ವಿವರಣೆ ನೀಡಬೇಕು. ಆಗ ಮಕ್ಕಳು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಈ ಕಾರ್ಯಾಗಾರದಲ್ಲಿ ಶಿಕ್ಷಕರು ಗೊತ್ತಿಲ್ಲದ ವಿಷಯ ಬಗ್ಗೆ ಸಂಕೋಚ ಬಿಟ್ಟು ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಇಎ ಹೈಯರ್‌ ಪ್ರೈಮರಿ ಸ್ಕೂಲ್‌ ಸಂಯೋಜಕ ಜೆ.ಪದ್ಮನಾಭ, ಕರ್ನಾಕಟ ರಾಜ್ಯ ವಿಜ್ಞಾನ ಪರಿಷತ್‌ ಎಂ.ಗುರುಸಿದ್ದಸ್ವಾಮಿ, ಬಿಐಇಟಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್‌. ಬಸವರಾಜಪ್ಪ, ಶಿಕ್ಷಣ ಇಲಾಖೆ ವಿಜ್ಞಾನ ವಿಷಯ ಪರಿವೀಕ್ಷಕಿ ಆರ್‌.ಬಿ.ವಸಂತಕುಮಾರಿ, ಡಾ.ಬಿ.ಇ. ರಂಗಸ್ವಾಮಿ, ಮಂಜುನಾಥ್‌ ರಂಗರಾಜನ್‌ ಇತರರು ಇದ್ದರು.

------

ಬಾಕ್ಸ್‌...

ಲೆಕ್ಕ, ಪ್ರಮೇಯ ಅರ್ಥ ಮಾಡಿಸಿ


ತಂತ್ರಜ್ಞಾನ ಬೆಳೆಯಲು ಗಣಿತವು ಪ್ರಮುಖ ಕಾರಣವಾಗಿದೆ. ಅಂಕಿ, ಅಂಶಗಳು ಇಲ್ಲದೇ ಏನು ಮಾಡುವುದಕ್ಕೆ ಸಾಧ್ಯವಿಲ್ಲ. ಭಾರತ ಶೂನ್ಯ ಪರಿಚಯಿಸಿದ್ದು, ಇಡೀ ವಿಶ್ವವನ್ನೇ ಆಳುತ್ತಿದೆ. ಇದರಿಂದಲೇ ಎಲ್ಲವು ನಡೆಯುತ್ತಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯವಸ್ಥೆಯಲ್ಲಿ ಗಣಿತವನ್ನು ವಿದ್ಯಾರ್ಥಿಗಳು ಭೂತ ಎನ್ನುವ ರೀತಿಯಲ್ಲಿ ನೋಡಲಾಗುತ್ತಿದೆ. ಆದ್ದರಿಂದ ಬೋಧಕರು ವಿದ್ಯಾರ್ಥಿಗಳಿಗೆ ಲೆಕ್ಕ, ಪ್ರಮೇಯ ಅರ್ಥವಾಗುವ ರೀತಿಯಲ್ಲಿ ತಮ್ಮದೇ ಶೈಲಿಯಲ್ಲಿ ತಿಳಿ ಹೇಳುವ ಕೆಲಸ ಮಾಡಬೇಕು ಎಂದು ಬಿಐಇಟಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್‌. ಸುಬ್ರಮಣ್ಯಸ್ವಾಮಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ