ಆ್ಯಪ್ನಗರ

ಎಂಪಿ ಸಾಧನೆ ಬಸ್‌ ತಂಗುದಾಣಕ್ಕೆ ಸೀಮಿತ

ಅರೆ ಮಲೆನಾಡು ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮದಿಂದ ಲೋಕಸಭಾ ಚುನವಣೆಯ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ.ಮಂಜಪ್ಪ ಪರವಾಗಿ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತೆರೆದ ವಾಹನದಲ್ಲಿ ಮಂಗಳವಾರ ಭರ್ಜರಿ ಪ್ರಚಾರ ಆರಂಭಿಸಿದರು.

Vijaya Karnataka 10 Apr 2019, 5:00 am
ಹೊನ್ನಾಳಿ : ಅರೆ ಮಲೆನಾಡು ಹೊನ್ನಾಳಿ ತಾಲೂಕಿನ ಚೀಲೂರು ಗ್ರಾಮದಿಂದ ಲೋಕಸಭಾ ಚುನವಣೆಯ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ.ಮಂಜಪ್ಪ ಪರವಾಗಿ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತೆರೆದ ವಾಹನದಲ್ಲಿ ಮಂಗಳವಾರ ಭರ್ಜರಿ ಪ್ರಚಾರ ಆರಂಭಿಸಿದರು.
Vijaya Karnataka Web limited to mp performance bus shelter
ಎಂಪಿ ಸಾಧನೆ ಬಸ್‌ ತಂಗುದಾಣಕ್ಕೆ ಸೀಮಿತ


ಚೀಲೂರು ಗ್ರಾಮದಲ್ಲಿನ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಎಸ್‌ಎಸ್‌ಎಂ, ಕಳೆದ 25 ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸಿ ಗೆದ್ದಿರುವ ಬಿಜೆಪಿಯವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳ ಮಾಡಿಲ್ಲ. ಅಂತವರಿಗೆ ನೀವು ಏಕೆ ಮತ ಹಾಕುತ್ತಿರಿ ಎಂದು ಪ್ರಶ್ನಿಸಿದರು.

ಸಂಸದರ ಅನುದಾನದಲ್ಲಿ ಜಿಲ್ಲೆಗೆ ಬಂದಿರುವ ಅನುದಾನದಲ್ಲಿ ಒಂದು ಗುಂಡಿಗೂ ಮಣ್ಣು ಹಾಕಿಲ್ಲ. ಜಿಲ್ಲೆಯ ಯಾವುದೇ ಊರುಗಳಿಗೂ ಒಂದು ತುಂಡು ಕೆಲಸ ಮಾಡಿಲ್ಲ. ಅವರ ಸಾಧನೆಗಳು ಏನಿದ್ದರೂ ಬಸ್‌ ತಂಗುದಾಣ ಕಟ್ಟುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದು ಸಂಸದ ಸಿದ್ದೇಶ್ವರ ಹೆಸರು ಹೇಳದೆ ಹರಿಹಾಯ್ದರು.

ಮಾತನಾಡುವ ಮೋದಿ:
ಯುಪಿಎ ಸರಕಾರವಿದ್ದಾಗ ಮನಮೋಹನ್‌ ಸಿಂಗ್‌ ಅವರು ಏನೂ ಮಾತನಾಡದೇ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ಆದರೆ, ಸಿಕ್ಕಾಪಟ್ಟೆ ಮಾತನಾಡುವ ಮೋದಿ ರೈತರ ಒಂದೇ ಒಂದು ರೂಪಾಯಿ ಸಾಲ ಮನ್ನಾ ಮಾಡಲಿಲ್ಲ. ಬದಲಿಗೆ ಉದ್ಯಮಿಗಳ 3 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು ಎಂದು ಟೀಕಿಸಿದರು.

ಜನರಿಗೆ ಬೇಕಾಗಿರುವುದು ಮೂಲ ಸೌಕರ್ಯಗಳು, ಇವುಗಳನ್ನು ಒದಗಿಸುವ ಕೆಲಸ ದೇಶದಲ್ಲಿ 60 ವರ್ಷಗಳಿಂದ ಕಾಂಗ್ರೆಸ್‌ ಪಕ್ಷ ಮಾಡಿದೆ. ಅದರಲ್ಲೂ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದಿನ ಸರಕಾರ ಅತಿ ಹೆಚ್ಚು ಮಾಡಿದೆ ಎಂದರು.

ಉತ್ತಮ ನಡೆ ನುಡಿ, ಪಕ್ಷ ದ ನಿಷ್ಟಾವಂತ ಕಾರ್ಯಕರ್ತ ಮತ್ತು ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವುದಕ್ಕಾಗಿ ಜಿಲ್ಲಾ ಕಾಂಗ್ರೆಸ್‌ ಪಕ್ಷ ವು ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಎಚ್‌.ಬಿ. ಮಂಜಪ್ಪರನ್ನು ಆಯ್ಕೆ ಮಾಡಿದೆ. ತಾಲೂಕಿನಿಂದ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಕಾಣುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಜಿಲ್ಲೆಯಲ್ಲಿ 1800ಕ್ಕೂ ಹೆಚ್ಚು ಹಳ್ಳಿಗಳನ್ನು ಸುತ್ತ ಬೇಕಾಗಿರುವುದರಿಂದ ಉಳಿದ ಹಳ್ಳಿಗಳ ಪ್ರಚಾರ ಕಾರ್ಯಕ್ಕೆ ಶಾಂತನಗೌಡರು ಹಾಗೂ ಇತರೆ ಕಾರ್ಯಕರ್ತರಿಗೆ ಬಿಟ್ಟು ಉಳಿದ ತಾಲೂಕುಗಳಿಗೆ ಹೆಚ್ಚು ಭೇಟಿ ನೀಡುವಂತೆ ಸಲಹೆ ನೀಡಿದರು.

ಜಿಪಂ ಸದಸ್ಯ ಡಿ.ಜಿ. ವಿಶ್ವನಾಥ್‌, ಅಭ್ಯರ್ಥಿ ಎಚ್‌.ಬಿ. ಮಂಜಪ್ಪ, ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ತಾ.ಕಾಂಗ್ರೆಸ್‌ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಎಚ್‌.ಎ. ಗದ್ದಿಗೇಶ್‌, ಅಲ್ಪಸಂಖ್ಯಾತ ಘಟಕದ ವಾಜೀದ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ವೀರೇಶ್‌, ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ