ಆ್ಯಪ್ನಗರ

​ವೀರಶೈವ, ಲಿಂಗಾಯತ ಒಟ್ಟಾಗೋಣ: ಶಾಮನೂರು

ಪ್ರತ್ಯೇಕ ಲಿಂಗಾಯತ ಮನವಿಯನ್ನು ವಾಪಸ್‌ ಕಳಿಸಿರುವುದು ಒಳ್ಳೆಯದಾಗಿದೆ. ಈ ಬಗ್ಗೆ ಸಂಪೂರ್ಣ ಗೊತ್ತಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

Vijaya Karnataka Web 10 Jun 2018, 2:44 pm
ದಾವಣಗೆರೆ: ಪ್ರತ್ಯೇಕ ಲಿಂಗಾಯತ ಮನವಿಯನ್ನು ವಾಪಸ್‌ ಕಳಿಸಿರುವುದು ಒಳ್ಳೆಯದಾಗಿದೆ. ಈ ಬಗ್ಗೆ ಸಂಪೂರ್ಣ ಗೊತ್ತಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
Vijaya Karnataka Web shamanur


ವೀರಶೈವ-ಲಿಂಗಾಯತ ಒಂದಾಗುವುದಿದ್ದರೆ ಆಗಲಿ, ನಮ್ಮ ಬೆಂಬಲವಿದೆ. ಎಲ್ಲರೂ ಒಟ್ಟಾಗಿ ಹೋದರೆ ಒಳ್ಳೆಯದು. ಹೆಚ್ಚಿನ ಬೇಡಿಕೆಗಳನ್ನು ಇಟ್ಟರೆ ಯಾವುದು ಇಲ್ಲ ಎಂದರು.

ಜಾಮದಾರ್ ಓರ್ವ ಅಧಿಕಾರಿ, ಅವರು ಯಾರಿಗೂ ಒಳ್ಳೆಯದು ಮಾಡಿಲ್ಲ. ಈಗ ವೀರಶೈವ ಲಿಂಗಾಯತರ ಬಗ್ಗೆ ಮಾತನಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಮಹಾಸಭಾ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಒಂದಾಗುವುದಿದ್ದರೆ ಕುಳಿತು ಚರ್ಚೆ ಮಾಡೋಣ. ನಂತರ ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡೋಣ ಎಂದು ಅವರು ಹೇಳಿದರು.

ಪ್ರತ್ಯೇಕ ಲಿಂಗಾಯತ ಧರ್ಮ ಘೋಷಣೆಗೆ ಆಗ್ರಹಿಸಿ ಈ ಹಿಂದೆ ರಾಜ್ಯ ಸರಕಾರ ಕೇಂದ್ರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಸಾಕಷ್ಟು ಪರ -ವಿರೋಧ ಚರ್ಚೆಗೆ ಕಾರಣವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ