ದಾವಣಗೆರೆ : ಜಿಲ್ಲಾ ಬಿಜೆಪಿಯಲ್ಲಿ ತಲೆ ದೋರಿರುವ ಬಂಡಾಯದ ಶಮನಕ್ಕೆ ಸ್ವತಃ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಕಣಕ್ಕಿಳಿದಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಅವರು ಕರೆದಿದ್ದ ಸಭೆಗೂ ಬಂಡಾಯಗಾರರು ಗೈರಾದ ಹಿನ್ನೆಲೆಯಲ್ಲಿ ಅವರ ಜತೆ ಮಾತನಾಡಲು ಮಂಗಳವಾರ ದಾವಣಗೆರೆಗೆ ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಾವಣಗೆರೆ ಲೋಕಸಭೆ ಕ್ಷೇತ್ರಕ್ಕೆ ಸಂಸದ ಜಿಎಂ ಸಿದ್ದೇಶ್ವರ್ ಪತ್ನಿ ಗಾಯತ್ರಿಗೆ ಟಿಕೆಟ್ ನೀಡಿರುವುದನ್ನು ಜಿಲ್ಲೆಯ ಮಾಜಿ ಸಚಿವರು ಸೇರಿ ಪ್ರಮುಖ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಬದಲಿಸದಿದ್ದರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದರು. ಹಾಗಾಗಿ ಬಂಡಾಯ ಶಮನ ಮಾಡುವ ಕಸರತ್ತು ಪಕ್ಷದಲ್ಲಿ ಶುರುವಾಗಿದೆ. ದಾವಣಗೆರೆ ಲೋಕಸಭೆ ಕ್ಷೇತ್ರದ ಹರಿಹರ, ಜಗಳೂರು ವಿಧಾನಸಭೆ ಕ್ಷೇತ್ರ ಹೊರತು ಪಡಿಸಿ ಉಳಿದ ಎಲ್ಲ ಆರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ನಾನಾ ಮುಖಂಡರು ಬಂಡಾಯದ ಟೀಮ್ನಲ್ಲಿದ್ದಾರೆ.
ನಾಲ್ಕು ಸಭೆ:
ಮಾಜಿ ಸಚಿವ, ಹಿರಿಯ ನಾಯಕ ಎಸ್.ಎ. ರವೀಂದ್ರನಾಥ್, ಮಾಜಿ ಸಚಿವರಾದ ಹೊನ್ನಾಳಿಯ ಎಂ.ಪಿ. ರೇಣುಕಾಚಾರ್ಯ, ಹರಪನಹಳ್ಳಿ ಜಿ. ಕರುಣಾಕರರೆಡ್ಡಿ, ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಜಗಳೂರಿನ ಗುರು ಸಿದ್ಧನಗೌಡ, ಮಾಜಿ ಎಂಎಲ್ಸಿ ಡಾ.ಎ.ಎಚ್. ಶಿವಯೋಗಿಸ್ವಾಮಿ, ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ವಿಧಾನಸಭೆ ಪರಾಜಿತ ಅಭ್ಯರ್ಥಿಗಳಾದ ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಪಕ್ಷದಲ್ಲಿ ಹಾವೇರಿ ಉಸ್ತುವಾರಿ ಹೊತ್ತಿರುವ ಮುಖಂಡ ಕಲ್ಲೇಶ್, ದೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್ ಬಂಡಾಯ ಎದ್ದಿರುವ ಪ್ರಮುಖ ನಾಯಕರು.
ಅಭ್ಯರ್ಥಿ ಘೋಷಣೆ ಆದಾಗಿನಿಂದ ಈವರೆಗೂ ನಾಲ್ಕು ಬಾರಿ ಸಭೆ ನಡೆಸಿ ದಿನೇ ದಿನೇ ಬಂಡಾಯ ತೀವ್ರಗೊಳಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಪೋನ್ನಲ್ಲಿ ಮಾತನಾಡುವ ಪ್ರಯತ್ನಕ್ಕೆ ಬಂಡಾಯದ ಟೀಮ್ ಮನ್ನಣೆ ನೀಡಿರಲಿಲ್ಲ, ಹಾಗಾಗಿ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸೋಮವಾರ ಸಭೆ ಕರೆದಿದ್ದರು. ಈ ಸಭೆಗೂ ಬಂಡಾಯದ ಯಾವ ನಾಯಕರೂ ಹಾಜರಾಗಲಿಲ್ಲ, ದಾವಣಗೆರೆಗೆ ಬಂದು ಎಲ್ಲ ನಾಯಕರ ಸಮಕ್ಷಮದಲ್ಲಿ ಸಭೆ ನಡೆಯಲಿ ಎಂದು ಒತ್ತಾಯಿಸಿದ್ದರು. ಹಾಗಾಗಿ ಅವರು ಮಂಗಳವಾರ ದಾವಣಗೆರೆಗೆ ಆಗಮಿಸಿ ಇಲ್ಲಿ ಬಂಡಾಯಗಾರರ ಜತೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಪೂರ್ವ ರೆಸಾರ್ಟ್ನಲ್ಲಿ ಇಂದು ಸಭೆ!
ಮಾಜಿ ಸಿಎಂ ಯಡಿಯೂರಪ್ಪ ಮಂಗಳವಾರ ದಾವಣಗೆರೆಗೆ ಆಗಮಿಸಲಿದ್ದು, ಮಧ್ಯಾಹ್ನ 3 ಗಂಟೆಗೆ ಅಪೂರ್ವ ರೆಸಾರ್ಟ್ನಲ್ಲಿ ಬಂಡಾಯ ನಾಯಕರ ಜತೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಏನಾಗಬಹುದು, ಒಮ್ಮೆ ಅಭ್ಯರ್ಥಿ ಘೋಷಣೆ ಆದ ನಂತರ ಬದಲಿಸುವುದು ಕಷ್ಟ ಸಾಧ್ಯ. ಹಾಗಾಗಿ ಬೇಡಿಕೆ ಈಡೇರದಿದ್ದರೆ ಬಂಡಾಯಗಾರರ ತೀರ್ಮಾನ ಏನಾಗಿರಲಿದೆ. ಒಂದೊಮ್ಮೆ ರಾಜಿಯಾದರೂ ಅಭ್ಯರ್ಥಿ ಗೆಲುವಿಗೆ ಶ್ರಮಿಸುವರೇ ಎಂಬ ಕುತೂಹಲವಂತೂ ಇದ್ದೇ ಇದೆ.
ದಾವಣಗೆರೆ ಲೋಕಸಭೆ ಕ್ಷೇತ್ರಕ್ಕೆ ಸಂಸದ ಜಿಎಂ ಸಿದ್ದೇಶ್ವರ್ ಪತ್ನಿ ಗಾಯತ್ರಿಗೆ ಟಿಕೆಟ್ ನೀಡಿರುವುದನ್ನು ಜಿಲ್ಲೆಯ ಮಾಜಿ ಸಚಿವರು ಸೇರಿ ಪ್ರಮುಖ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ಬದಲಿಸದಿದ್ದರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದರು. ಹಾಗಾಗಿ ಬಂಡಾಯ ಶಮನ ಮಾಡುವ ಕಸರತ್ತು ಪಕ್ಷದಲ್ಲಿ ಶುರುವಾಗಿದೆ. ದಾವಣಗೆರೆ ಲೋಕಸಭೆ ಕ್ಷೇತ್ರದ ಹರಿಹರ, ಜಗಳೂರು ವಿಧಾನಸಭೆ ಕ್ಷೇತ್ರ ಹೊರತು ಪಡಿಸಿ ಉಳಿದ ಎಲ್ಲ ಆರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ನಾನಾ ಮುಖಂಡರು ಬಂಡಾಯದ ಟೀಮ್ನಲ್ಲಿದ್ದಾರೆ.
ನಾಲ್ಕು ಸಭೆ:
ಮಾಜಿ ಸಚಿವ, ಹಿರಿಯ ನಾಯಕ ಎಸ್.ಎ. ರವೀಂದ್ರನಾಥ್, ಮಾಜಿ ಸಚಿವರಾದ ಹೊನ್ನಾಳಿಯ ಎಂ.ಪಿ. ರೇಣುಕಾಚಾರ್ಯ, ಹರಪನಹಳ್ಳಿ ಜಿ. ಕರುಣಾಕರರೆಡ್ಡಿ, ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಜಗಳೂರಿನ ಗುರು ಸಿದ್ಧನಗೌಡ, ಮಾಜಿ ಎಂಎಲ್ಸಿ ಡಾ.ಎ.ಎಚ್. ಶಿವಯೋಗಿಸ್ವಾಮಿ, ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ವಿಧಾನಸಭೆ ಪರಾಜಿತ ಅಭ್ಯರ್ಥಿಗಳಾದ ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಪಕ್ಷದಲ್ಲಿ ಹಾವೇರಿ ಉಸ್ತುವಾರಿ ಹೊತ್ತಿರುವ ಮುಖಂಡ ಕಲ್ಲೇಶ್, ದೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್ ಬಂಡಾಯ ಎದ್ದಿರುವ ಪ್ರಮುಖ ನಾಯಕರು.ಅಭ್ಯರ್ಥಿ ಘೋಷಣೆ ಆದಾಗಿನಿಂದ ಈವರೆಗೂ ನಾಲ್ಕು ಬಾರಿ ಸಭೆ ನಡೆಸಿ ದಿನೇ ದಿನೇ ಬಂಡಾಯ ತೀವ್ರಗೊಳಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಪೋನ್ನಲ್ಲಿ ಮಾತನಾಡುವ ಪ್ರಯತ್ನಕ್ಕೆ ಬಂಡಾಯದ ಟೀಮ್ ಮನ್ನಣೆ ನೀಡಿರಲಿಲ್ಲ, ಹಾಗಾಗಿ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸೋಮವಾರ ಸಭೆ ಕರೆದಿದ್ದರು. ಈ ಸಭೆಗೂ ಬಂಡಾಯದ ಯಾವ ನಾಯಕರೂ ಹಾಜರಾಗಲಿಲ್ಲ, ದಾವಣಗೆರೆಗೆ ಬಂದು ಎಲ್ಲ ನಾಯಕರ ಸಮಕ್ಷಮದಲ್ಲಿ ಸಭೆ ನಡೆಯಲಿ ಎಂದು ಒತ್ತಾಯಿಸಿದ್ದರು. ಹಾಗಾಗಿ ಅವರು ಮಂಗಳವಾರ ದಾವಣಗೆರೆಗೆ ಆಗಮಿಸಿ ಇಲ್ಲಿ ಬಂಡಾಯಗಾರರ ಜತೆ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.