ಆ್ಯಪ್ನಗರ

ಆಪರೇಷನ್‌ ಕಮಲಕ್ಕೆ ಬಲಿಯಾಗಲ್ಲ: ಸಚಿವ ಮನಗೂಳಿ

ಕಾಮಗಾರಿ ಶಂಕುಸ್ಥಾಪನೆ, ಉದ್ಘಾಟನೆಗೆ ಹೋಗುವ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹೋಗುವ ದಾರಿಯಲ್ಲಿ ಸಿಗುವ ದೇವಸ್ಥಾನಕ್ಕೆ ಹೋಗುವುದು ಸಂಪ್ರದಾಯ, ಅದನ್ನು ಬೇರೆ ರೀತಿ ಆರ್ಥ ಮಾಡಿಕೊಂಡರೇ ಏನು ಮಾಡಲಾಗುವುದಿಲ್ಲ ಎಂದು ಸಚಿವ ಮನಗೂಳಿ ಹೇಳಿದರು.

Vijaya Karnataka Web 22 Sep 2018, 5:41 pm
ದಾವಣಗೆರೆ: ನಾನು ದೇವೇಗೌಡರ ಪರಮಶಿಷ್ಯನಾಗಿದ್ದು, ಯಾವುದೇ ಕಾರಣಕ್ಕೂ ಆಪರೇಷನ್‌ ಕಮಲಕ್ಕೆ ಬಲಿಯಾಗುವುದಿಲ್ಲ ಎಂದು ತೋಟಗಾರಿಕೆ ಸಚಿವ ಎಂ. ಸಿ. ಮನಗೂಳಿ ಹೇಳಿದರು.
Vijaya Karnataka Web M C Managuli


ನಗರದ ತೋಟಗಾರಿಕೆ ಇಲಾಖೆಯಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಮ್ಮಿಶ್ರ ಸರಕಾರ ಭದ್ರವಾಗಿದೆ. ಯಾರಿಂದಲೂ ಸರಕಾರ ಬೀಳಿಸುವುದಕ್ಕೆ ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಜೆಡಿಎಸ್‌ ಬಿಟ್ಟು ಹೋಗೋಲ್ಲ. ಬೇಲೂರಿನಲ್ಲಿ ನಡೆಯುವ ಜೆಡಿಎಸ್‌ ಪಕ್ಷದ ಸಭೆಯಲ್ಲಿ ಶನಿವಾರ ಭಾಗವಹಿಸುತ್ತಿದ್ದೇನೆ. ಆಯಾ ಪಕ್ಷದವರು ಸಭೆ ಮಾಡುವ ಅಧಿಕಾರವಿದೆ, ಅದೇ ರೀತಿ ಜೆಡಿಎಸ್‌ ಸಹ ಮಾಡುತ್ತಿದೆ.

ಯಡಿಯೂರಪ್ಪ ಮಾತ್ರ ಅಭಿವೃದ್ಧಿಯಾಗಿಲ್ಲ ಎಂದು ಮಾತನಾಡುತ್ತಿದ್ದಾರೆ. ಅವರಿಗೆ ಅದೇ ಅಭ್ಯಾಸವಾಗಿದ್ದು, ಆಪರೇಷನ್‌ ಕಮಲ ಮಾಡಲು ಕೆಲವರಿಗೆ ಆಮಿಷ ಹೂಡಿದ್ದಾರೆ. ಆದರೆ ಇದಕ್ಕೆ ಯಾರೊಬ್ಬರು ಬಗ್ಗುವುದಿಲ್ಲ. ಐದು ವರ್ಷ ಸಂಪೂರ್ಣ ಆಡಳಿತ ನಡೆಸುತ್ತೇವೆ. ಮುಂದಿನ ಬಾರಿಯೂ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಚ್‌ಡಿಕೆ ದಂಗೆಗೆ ವಿಶೇಷ ಅರ್ಥವಿಲ್ಲ:

ದಂಗೆ ಎಂಬ ಪದಕ್ಕೆ ವಿಶೇಷ ಅರ್ಥ ಕೊಡುವುದು ಬೇಡ. ಸಿಎಂ ಕುಮಾರಸ್ವಾಮಿ ಜನರೆಲ್ಲ ದಂಗೆ ಏಳಲಿ ಎನ್ನುವ ದೃಷ್ಟಿಯಿಂದ ಹೇಳಿಲ್ಲ. ನಮ್ಮ ಭಾಷೆಯಲ್ಲಿ ಅನ್ಯಾಯವಾದ್ರೆ ಪ್ರಶ್ನಿಸುವುದು ಎನ್ನುತ್ತಾರೆ. ಇನ್ನು ಉತ್ತರ ಕರ್ನಾಟಕದ ಭಾಗದಲ್ಲಿ ದಂಗೆ ಎಂದರೆ ಬಾಯಿ ಬಡಿದುಕೊಳ್ಳುವುದು ಎಂದು ಅರ್ಥ. ಹೀಗೆ ಒಂದೊಂದು ಕಡೆ ಒಂದು ಅರ್ಥ ಇದೆ. ಇನ್ನು ಸರಕಾರವನ್ನು ಬೀಳಿಸಿ ತಾವು ಮುಖ್ಯಮಂತ್ರಿಯಾಗುವ ಯಡಿಯೂರಪ್ಪ ಅವರ ಕನಸು ಈಡೇರುವುದಿಲ್ಲ. ಯಡಿಯೂರಪ್ಪ ಸ್ವಭಾವವೇ ಹೋರಾಟ ಮಾಡುವುದು. ನಮ್ಮ ಸರಕಾರ ಉರುಳಿಸಿ ಅವರು ಎಂದಿಗೂ ಸಿಎಂ ಆಗುವುದಕ್ಕೆ ಸಾಧ್ಯವಿಲ್ಲ. ಬಿಜೆಪಿಯಲ್ಲಿಯೇ ಗುಂಪುಗಾರಿಕೆ ಇದ್ದು, ಅವರೇ ಅವರನ್ನು ಸಿಎಂ ಆಗಲು ಬಿಡುವುದಿಲ್ಲ ಎಂದರು.

ದೇವಸ್ಥಾನಕ್ಕೆ ಭೇಟಿ ಸಮರ್ಥನೆ:
ಕಾಮಗಾರಿ ಶಂಕುಸ್ಥಾಪನೆ, ಉದ್ಘಾಟನೆಗೆ ಹೋಗುವ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹೋಗುವ ದಾರಿಯಲ್ಲಿ ಸಿಗುವ ದೇವಸ್ಥಾನಕ್ಕೆ ಹೋಗುವುದು ಸಂಪ್ರದಾಯ, ಅದನ್ನು ಬೇರೆ ರೀತಿ ಆರ್ಥ ಮಾಡಿಕೊಂಡರೇ ಏನು ಮಾಡಲಾಗುವುದಿಲ್ಲ ಎಂದು ಸಚಿವ ಮನಗೂಳಿ ಹೇಳಿದರು.

ಸಾಯೋರನ್ನು ಹಿಡಿಯೋದಕ್ಕೆ ಆಗೋಲ್ಲ:

ಮಂಡ್ಯದಲ್ಲಿ ನಾಲ್ವರು ರೈತರು ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಡೆತ್‌ ನೋಟ್‌ ಒಂದೇ ಅಂತಿಮವಲ್ಲ. ಅವರು ಏತಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದರ ಕುರಿತು, ವೈದ್ಯರ ವರದಿ , ಎಫ್‌ಐಆರ್‌ನ ಮಾಹಿತಿಯಿಂದ ತಿಳಿಯಬೇಕಿದೆ. ಅಧಿಕಾರಿಗಳ ಪರಿಶೀಲನೆ ನಂತರ ಸ್ಪಷ್ಟ ಕಾರಣ ಗೊತ್ತಾಗಲಿದೆ. ಸಾಯುವವರನ್ನು ನಾವು ಹಿಡಿಯುವುದಕ್ಕೆ ಆಗುವುದಿಲ್ಲ. ಗೊತ್ತಿಲ್ಲದಂತೆ ವಿಷ ಕುಡಿದರೆ ಕುಮಾರಣ್ಣನವರು ಏನು ಮಾಡುವುದಕ್ಕಾಗುವುದಿಲ್ಲ. ನಾವು ಏನು ಮಾಡುವುದಕ್ಕಾಗುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಸರಕಾರ ಐದರಿಂದ ಆರು ಲಕ್ಷ ಪರಿಹಾರ ನೀಡುತ್ತಿದೆ. ಇನ್ನು ಶೀಘ್ರವೇ ಸಂಪೂರ್ಣ ರೈತರ ಸಾಲಮನ್ನಾವಾಗಲಿದೆ ಎಂದು ಸಚಿವ ಮನಗೂಳಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ