ದಾವಣಗೆರೆ: ಹಣ ಬಿಡಿಸಲು ಎಟಿಎಂಗೆ ಬರುವ ವೃದ್ಧರನ್ನೇ ಟಾರ್ಗೆಟ್ ಮಾಡಿ ಹಣ ದೋಚುತ್ತಿದ್ದ ಖತರ್ನಾಕ್ ವ್ಯಕ್ತಿಯೊಬ್ಬನನ್ನು ಬಸವನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದು, 78 ಎಟಿಎಂ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಯೋಗಾನಂದ ಬಂಧಿತ ಆರೋಪಿ. ಬಂಧಿತನಿಂದ ಸುಮಾರು 8,58,800 ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ನೂರಕ್ಕೆ ನೂರರಷ್ಟು ಜಫ್ತಿ ಮಾಡಲಾಗಿದೆ. 18 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ದಾವಣಗೆರೆ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ಹಿರಿಯೂರು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಚನ್ನಗಿರಿ, ತರೀಕೆರೆ, ತುಮಕೂರು, ಶಿಗ್ಗಾಂವಿ, ಹಿರೇಕೆರೂರು ಸೇರಿದಂತೆ ವಿವಿಧೆಡೆ ಹಣ ದೋಚಿದ್ದ.
ಉಕ್ರೇನ್ನಿಂದ ತಾಯ್ನಾಡಿಗೆ ಮರಳಿದ ದಾವಣಗೆರೆಯ ವಿನಯ್: ನವೀನ್ ಬಗ್ಗೆ ಹೇಳಿದ್ದೇನು?
ಈತ ಎಂ.ಎ. ಓದಿ ಪಿಎಚ್ಡಿ ಪದವಿ ಪಡೆದಿದ್ದ. ಈತನಿಗೆ 47 ವರ್ಷ ವಯಸ್ಸು. ಸಿಸಿಟಿವಿಯ ದೃಶ್ಯಾವಳಿ ಪರಿಶೀಲಿಸಿದ ಬಸವನಗರ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣ ಬಿಡಿಸಿಕೊಳ್ಳಲು ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಅನ್ನು ಉಪಯೋಗಿಸಿ ಅವರಿಗೆ ನಕಲಿ ಎಟಿಎಂ ಕಾರ್ಡ್ ಕೊಡುತ್ತಿದ್ದ. ಅಸಲಿ ಎಟಿಎಂ ಕಾರ್ಡ್ ಪಡೆದು ಹಣ ಪಡೆಯುತ್ತಿದ್ದ. 17 ಸಾವಿರ ರೂಪಾಯಿಯಿಂದ 3 ಲಕ್ಷದವರೆಗೆ ವಂಚಿಸಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.
ಮುಚ್ಚುನೂರು ಗ್ರಾಮದ 75 ವರ್ಷದ ಪಾಪಣ್ಣ ಎಂಬುವವರು ಕಳೆದ ವರ್ಷದ ನವೆಂಬರ್ 30ರಂದು ದಾವಣಗೆರೆ ಮಂಡಿಪೇಟೆಯ ಎಸ್ ಬಿ ಐ ಬ್ಯಾಂಕ್ ನ ಎಟಿಎಂ ಕೇಂದ್ರಕ್ಕೆ ಹಣ ಬಿಡಿಸಿಕೊಳ್ಳಲು ಹೋಗಿದ್ದರು. ಈ ವೇಳೆ ಸಹಾಯ ಮಾಡುವ ನೆಪದಲ್ಲಿ ಯೋಗಾನಂದ ಎಟಿಎಂ ಕಾರ್ಡ್ ಪಡೆದು ಅದಕ್ಕೆ ಹೋಲಿಕೆಯಾಗುವ ನಕಲಿ ಕಾರ್ಡ್ ಕೊಟ್ಟಿದ್ದ. ಬೇರೆ ಕಡೆ ಹೋಗಿ ಹಣ ಪಡೆದಿದ್ದ. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಯೋಗಾನಂದನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದು ಆರೋಪಿ ಹಿಡಿಯಲು ಸಹಕಾರಿಯಾಯಿತು ಎಂದು ಮಾಹಿತಿ ನೀಡಿದರು.
ದಾವಣಗೆರೆ ಉಪ ಕಾರಾಗೃಹದ ಮುಂದೆ ಮುತಾಲಿಕ್ ಹಾಗೂ ಪೊಲಿಸ್ ಸಿಬ್ಬಂದಿ ನಡುವೆ ವಾಗ್ವಾದ!
ವಯಸ್ಸಾದವರು ಎಟಿಎಂ ಕೇಂದ್ರಕ್ಕೆ ಬರುವುದನ್ನೇ ಕಾಯುತ್ತಿದ್ದ. ಅವರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಪಿನ್ ಪಡೆದು ಕಾರ್ಡ್ನಿಂದ ಹಣ ತೆಗೆದುಕೊಡುತ್ತೇನೆ ಎಂದು ಹೇಳುತ್ತಿದ್ದ. ಕಾರ್ಡ್ ಕೊಟ್ಟ ಬಳಿಕ ಅದೇ ರೀತಿಯಲ್ಲಿ ಹೋಲುವ ನಕಲಿ ಡೆಬಿಟ್ ಕಾರ್ಡ್ ಕೊಟ್ಟು ಹೋಗಿ ಬೇರೆಡೆ ಹಣ ತೆಗೆದುಕೊಳ್ಳುತ್ತಿದ್ದ. ನಗರ ಉಪವಿಭಾಗದ ಡಿವೈಎಸ್ಪಿ ನರಸಿಂಹ ವಿ. ತಾಮ್ರ ಧ್ವಜ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಾಗಪ್ಪ ಬಂಕಾಳಿ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರಕರಣದಲ್ಲಿ ಆರೋಪಿ, ಹಣ ವಶಪಡಿಸಿಕೊಳ್ಳಲು ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಪಿ ಶ್ಲಾಘಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಯೋಗಾನಂದ ಬಂಧಿತ ಆರೋಪಿ. ಬಂಧಿತನಿಂದ ಸುಮಾರು 8,58,800 ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ನೂರಕ್ಕೆ ನೂರರಷ್ಟು ಜಫ್ತಿ ಮಾಡಲಾಗಿದೆ. 18 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು. ದಾವಣಗೆರೆ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ಹಿರಿಯೂರು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಚನ್ನಗಿರಿ, ತರೀಕೆರೆ, ತುಮಕೂರು, ಶಿಗ್ಗಾಂವಿ, ಹಿರೇಕೆರೂರು ಸೇರಿದಂತೆ ವಿವಿಧೆಡೆ ಹಣ ದೋಚಿದ್ದ.
ಉಕ್ರೇನ್ನಿಂದ ತಾಯ್ನಾಡಿಗೆ ಮರಳಿದ ದಾವಣಗೆರೆಯ ವಿನಯ್: ನವೀನ್ ಬಗ್ಗೆ ಹೇಳಿದ್ದೇನು?
ಈತ ಎಂ.ಎ. ಓದಿ ಪಿಎಚ್ಡಿ ಪದವಿ ಪಡೆದಿದ್ದ. ಈತನಿಗೆ 47 ವರ್ಷ ವಯಸ್ಸು. ಸಿಸಿಟಿವಿಯ ದೃಶ್ಯಾವಳಿ ಪರಿಶೀಲಿಸಿದ ಬಸವನಗರ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಣ ಬಿಡಿಸಿಕೊಳ್ಳಲು ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಅನ್ನು ಉಪಯೋಗಿಸಿ ಅವರಿಗೆ ನಕಲಿ ಎಟಿಎಂ ಕಾರ್ಡ್ ಕೊಡುತ್ತಿದ್ದ. ಅಸಲಿ ಎಟಿಎಂ ಕಾರ್ಡ್ ಪಡೆದು ಹಣ ಪಡೆಯುತ್ತಿದ್ದ. 17 ಸಾವಿರ ರೂಪಾಯಿಯಿಂದ 3 ಲಕ್ಷದವರೆಗೆ ವಂಚಿಸಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ.
ಮುಚ್ಚುನೂರು ಗ್ರಾಮದ 75 ವರ್ಷದ ಪಾಪಣ್ಣ ಎಂಬುವವರು ಕಳೆದ ವರ್ಷದ ನವೆಂಬರ್ 30ರಂದು ದಾವಣಗೆರೆ ಮಂಡಿಪೇಟೆಯ ಎಸ್ ಬಿ ಐ ಬ್ಯಾಂಕ್ ನ ಎಟಿಎಂ ಕೇಂದ್ರಕ್ಕೆ ಹಣ ಬಿಡಿಸಿಕೊಳ್ಳಲು ಹೋಗಿದ್ದರು. ಈ ವೇಳೆ ಸಹಾಯ ಮಾಡುವ ನೆಪದಲ್ಲಿ ಯೋಗಾನಂದ ಎಟಿಎಂ ಕಾರ್ಡ್ ಪಡೆದು ಅದಕ್ಕೆ ಹೋಲಿಕೆಯಾಗುವ ನಕಲಿ ಕಾರ್ಡ್ ಕೊಟ್ಟಿದ್ದ. ಬೇರೆ ಕಡೆ ಹೋಗಿ ಹಣ ಪಡೆದಿದ್ದ. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಯೋಗಾನಂದನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದು ಆರೋಪಿ ಹಿಡಿಯಲು ಸಹಕಾರಿಯಾಯಿತು ಎಂದು ಮಾಹಿತಿ ನೀಡಿದರು.
ದಾವಣಗೆರೆ ಉಪ ಕಾರಾಗೃಹದ ಮುಂದೆ ಮುತಾಲಿಕ್ ಹಾಗೂ ಪೊಲಿಸ್ ಸಿಬ್ಬಂದಿ ನಡುವೆ ವಾಗ್ವಾದ!
ವಯಸ್ಸಾದವರು ಎಟಿಎಂ ಕೇಂದ್ರಕ್ಕೆ ಬರುವುದನ್ನೇ ಕಾಯುತ್ತಿದ್ದ. ಅವರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಪಿನ್ ಪಡೆದು ಕಾರ್ಡ್ನಿಂದ ಹಣ ತೆಗೆದುಕೊಡುತ್ತೇನೆ ಎಂದು ಹೇಳುತ್ತಿದ್ದ. ಕಾರ್ಡ್ ಕೊಟ್ಟ ಬಳಿಕ ಅದೇ ರೀತಿಯಲ್ಲಿ ಹೋಲುವ ನಕಲಿ ಡೆಬಿಟ್ ಕಾರ್ಡ್ ಕೊಟ್ಟು ಹೋಗಿ ಬೇರೆಡೆ ಹಣ ತೆಗೆದುಕೊಳ್ಳುತ್ತಿದ್ದ. ನಗರ ಉಪವಿಭಾಗದ ಡಿವೈಎಸ್ಪಿ ನರಸಿಂಹ ವಿ. ತಾಮ್ರ ಧ್ವಜ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಾಗಪ್ಪ ಬಂಕಾಳಿ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರಕರಣದಲ್ಲಿ ಆರೋಪಿ, ಹಣ ವಶಪಡಿಸಿಕೊಳ್ಳಲು ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಪಿ ಶ್ಲಾಘಿಸಿದ್ದಾರೆ.