ಆ್ಯಪ್ನಗರ

ಕೊಟ್ಟ ಮಾತು ಉಳಿಸಿಕೊಂಡ ರೇಣುಕಾಚಾರ್ಯ; ಆನ್‌ಲೈನ್‌ ಕ್ಲಾಸ್‌ಗೆ ವಿದ್ಯಾರ್ಥಿನಿಯರಿಗೆ ಮೊಬೈಲ್‌ ಗಿಫ್ಟ್‌

ವಿದ್ಯಾರ್ಥಿನಿಯರಾದ ಬಿಂದು ಹಾಗೂ ನರ್ಮದಾಳಿಗೆ ಶಾಸಕ ರೇಣುಕಾಚಾರ್ಯ 14 ಸಾವಿರ ಮೌಲ್ಯದ ಒಂದರಂತೆ 28 ಸಾವಿರ ಮೌಲ್ಯದ ಎರಡು ಮೊಬೈಲ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೊಬೈಲ್ ಪಡೆದುಕೊಂಡ ಬಳಿಕ ವಿದ್ಯಾರ್ಥಿನಿಯರು ಸಂತಸಗೊಂಡಿದ್ದು, ವಿದ್ಯಾರ್ಜನೆಗಾಗಿ ಶಾಸಕರು ಮೊಬೈಲ್‌ ನೀಡಿದ್ದು ಸಂತೋಷವಾಗಿದೆ ಎಂದರಲ್ಲದೇ, ಶಾಸಕರ ಕೆಲಸವನ್ನು ವಿದ್ಯಾರ್ಥಿನಿಯರು ಕೊಂಡಾಡಿದರು.

Vijaya Karnataka 13 Oct 2021, 2:00 pm
ಹೊನ್ನಾಳಿ: ಆನ್‌ಲೈನ್‌ ತರಗತಿಯಲ್ಲಿ ಪಾಲ್ಗೊಳ್ಳಲು ಮೊಬೈಲ್‌ ಇಲ್ಲದೆ ತೊಂದರೆ ಅನುಭವಿಸುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಮೊಬೈಲ್‌ ಕೊಡಿಸುವ ಮೂಲಕ ಸಹಾಯ ಮಾಡಿದ್ದಾರೆ.
Vijaya Karnataka Web Renukacharya


ನ್ಯಾಮತಿ ತಾಲೂಕಿನ ಟಿ. ಗೋಪಗೊಂಡನಹಳ್ಳಿ ಗ್ರಾಮದ ಯೋಗೇಂದ್ರ -ವನಜಾಕ್ಷಮ್ಮನವರ ಪುತ್ರಿ ಬಿಂದು ಶಿವಮೊಗ್ಗದ ಸರಕಾರಿ ಪದವಿ ಕಾಲೇಜಿನಲ್ಲಿ ಬಿಎ ಓದುತ್ತಿದ್ದರೆ, ಸುಂಕದಕಟ್ಟೆ ಗ್ರಾಮದ ಶಾಂತರಾಜ್‌- ಶಾಂತಮ್ಮ ಪುತ್ರಿ ನರ್ಮದಾ ಹೊನ್ನಾಳಿಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಇವರ ಶಿಕ್ಷಣಕ್ಕೆ ಬಡತನ ಅಡ್ಡಿಯಾಗಿತ್ತು. ಆನ್‌ಲೈನ್‌ ವಿದ್ಯಾಭ್ಯಾಸಕ್ಕೆ ಸ್ಮಾರ್ಟ ಪೋನ್‌ ಇಲ್ಲದೇ ವಿದ್ಯಾರ್ಥಿನಿಯರಿಬ್ಬರು ಸಂಕಷ್ಟ ಅನುಭವಿಸುತ್ತಿದ್ದರು. ಈ ವಿದ್ಯಾರ್ಥಿನಿಯರಿಗೆ ತಾನು ಸಹಾಯ ಮಾಡೋದಾಗಿ ಈ ಹಿಂದೆ ಶಾಸಕರು ಹೇಳಿದ್ದರು. ಇದೀಗ ತಾನು ಕೊಟ್ಟ ಮಾತಿನಂತೆ ರೇಣುಕಾಚಾರ್ಯ ನಡೆದುಕೊಂಡಿದ್ದಾರೆ.
ಓಟ್ ಬ್ಯಾಂಕ್ ಗಾಗಿ ಆರ್ ಎಸ್ ಎಸ್ ವಿರುದ್ಧ ಹೇಳಿಕೆ; ಎಂಪಿ ರೇಣುಕಾಚಾರ್ಯ ಆರೋಪ!
ವಿದ್ಯಾರ್ಥಿನಿಯರಾದ ಬಿಂದು ಹಾಗೂ ನರ್ಮದಾಳಿಗೆ ಶಾಸಕ ರೇಣುಕಾಚಾರ್ಯ 14 ಸಾವಿರ ಮೌಲ್ಯದ ಒಂದರಂತೆ 28 ಸಾವಿರ ಮೌಲ್ಯದ ಎರಡು ಮೊಬೈಲ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೊಬೈಲ್ ಪಡೆದುಕೊಂಡ ಬಳಿಕ ವಿದ್ಯಾರ್ಥಿನಿಯರು ಸಂತಸಗೊಂಡಿದ್ದು, ವಿದ್ಯಾರ್ಜನೆಗಾಗಿ ಶಾಸಕರು ಮೊಬೈಲ್‌ ನೀಡಿದ್ದು ಸಂತೋಷವಾಗಿದೆ ಎಂದರಲ್ಲದೇ, ಶಾಸಕರ ಕೆಲಸವನ್ನು ವಿದ್ಯಾರ್ಥಿನಿಯರು ಕೊಂಡಾಡಿದರು.

ಕೊರೊನಾ ಸಮಯದಲ್ಲೂ ನೈತಿಕ ಧೈರ್ಯ ತುಂಬಿದ್ದ ರೇಣುಕಾಚಾರ್ಯ
ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಕೊರೊನಾ ಸಮಯದಲ್ಲೂ ರೋಗಿಗಳೊಂದಿಗೆ ಬೆರೆತು ಶ್ಲಾಘನೆಗೆ ಒಳಗಾಗಿದ್ದರು. ಕೋವಿಡ್ ಲಾಕ್‌ಡೌನ್‌ ವೇಳೆ ತನ್ನ ಕ್ಷೇತ್ರದಲ್ಲಿಯೇ ಹೆಚ್ಚಾಗಿ ತೊಡಗಿಸಿಕೊಂಡಿದ್ದ ರೇಣುಕಾಚಾರ್ಯ, ತನ್ನ ಊರಿನ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಕೊರೊನಾ ಸೋಂಕಿತ ರೋಗಿಗಳೊಂದಿಗೆ ಬೆರೆತು ಅವರಿಗೆ ಧೈರ್ಯ ತುಂಬಿದ್ದರು. ಆಸ್ಪತ್ರೆ ಆವರಣದಲ್ಲಿ ರೋಗಿಗಳ ಜೊತೆ ಯೋಗ ಅಭ್ಯಾಸ ಮಾಡಿರೋದು ಮಾತ್ರವಲ್ಲದೇ ಅನೇಕ ಕುಟುಂಬಗಳಿಗೆ ಆಹಾರ ಕಿಟ್‌ಗಳನ್ನೂ ನೀಡಿ ಸುದ್ದಿಯಾಗಿದ್ದರು.
ಎಚ್ ಡಿ ಕುಮಾರಸ್ವಾಮಿ ಲಾಟರಿ ಸಿಎಂ; ಎಂಪಿ ರೇಣುಕಾಚಾರ್ಯ ವ್ಯಂಗ್ಯ!
ಇದಲ್ಲದೇ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಕೊವಿಡ್ ಕೇರ್ ಸೆಂಟರ್ನಲ್ಲಿ ಹಲವರು ಕೆಲಸ ಮಾಡಿದ್ದರು. ಈ ಕೊರೊನಾ ಚಿಕಿತ್ಸಾ ಕೇಂದ್ರದಲ್ಲಿ ಅನೇಕ ತಿಂಗಳುಗಳ ಕಾಲ 500ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿತ್ತು. ಕೊವಿಡ್ ಕೇರ್ ಸೆಂಟರ್ನಲ್ಲಿ ಸೇವೆ ಸಲ್ಲಿಸಿದ ನರ್ಸ್ಗಳು, ಅಡುಗೆ ಸಹಾಯಕಿಯರು, ಪೌರಕಾರ್ಮಿಕರಿಗೆ ರೇಣುಕಾಚಾರ್ಯ ತಲಾ ಒಂದು ಸಾವಿರದಂತೆ ಹಣ ಹಂಚಿಕೆ ಮಾಡಿದ್ದರು. ಸುಮಾರು 1 ತಿಂಗಳ ಕಾಲ ಕೊವಿಡ್ ಕೇರ್ ಸೆಂಟರ್ನಲ್ಲೇ ಉಳಿದಿದ್ದ ಎಂ. ಪಿ. ರೇಣುಕಾಚಾರ್ಯ ಎಲ್ಲರಿಗೂ ಹಣ ಹಂಚಿ ತೆರಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ