ಆ್ಯಪ್ನಗರ

ಶಾಸಕ ಶಿವಶಂಕರ್‌ ಅಪಾಯದಿಂದ ಪಾರು

ಸಮೀಪದ ಲಕ್ಕಶೆಟ್ಟಿಹಳ್ಳಿ ಬಳಿ ಮಂಗಳವಾರ ಸಂಜೆ ಭಾರಿ ಬಿರುಗಾಳಿಯಿಂದ 66 ಕೆವಿ ವಿದ್ಯುತ್‌ ಮಾರ್ಗದ ಟವರ್‌ ನೆಲಕ್ಕುರುಳಿದ ವೇಳೆ, ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಶಾಸಕ ಎಚ್‌.ಎಸ್‌.ಶಿವಶಂಕರ್‌ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ನಡೆದಿದೆ.

Vijaya Karnataka 12 May 2018, 2:43 pm
ಮಲೆಬೆನ್ನೂರು: ಸಮೀಪದ ಲಕ್ಕಶೆಟ್ಟಿಹಳ್ಳಿ ಬಳಿ ಮಂಗಳವಾರ ಸಂಜೆ ಭಾರಿ ಬಿರುಗಾಳಿಯಿಂದ 66 ಕೆವಿ ವಿದ್ಯುತ್‌ ಮಾರ್ಗದ ಟವರ್‌ ನೆಲಕ್ಕುರುಳಿದ ವೇಳೆ, ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಶಾಸಕ ಎಚ್‌.ಎಸ್‌.ಶಿವಶಂಕರ್‌ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ನಡೆದಿದೆ.
Vijaya Karnataka Web mla shivashankar rescues from danger
ಶಾಸಕ ಶಿವಶಂಕರ್‌ ಅಪಾಯದಿಂದ ಪಾರು


ಶಾಸಕ ಲಕ್ಕಶೆಟ್ಟಿಹಳ್ಳಿಯಲ್ಲಿ ಚುನಾವಣಾ ಪ್ರಚಾರ ಮುಗಿಸಿಕೊಂಡು ಗ್ರಾಮದಿಂದ ಸ್ವಲ್ಪ ದೂರದಲ್ಲಿ ವಾಪಾಸ್‌ ಹರಿಹರದ ಕಡೆ ತೆರಳುವಾಗ ಈ ಘಟನೆ ನಡೆದಿದೆ. ಇನ್ನೇನು ಅವರ ಕಾರು ಪಾಸ್‌ ಆಗಿ ಕೆಲವೇ ಕ್ಷ ಣಗಳಲ್ಲಿ 66 ಕೆವಿ ಟವರ್‌ ನೆಲಕ್ಕುರುಳಿ ಹೊಲದಲ್ಲಿ ಬಿದ್ದಿದ್ದು, ವಿದ್ಯುತ್‌ ತಂತಿ ರಸ್ತೆಗೆ ಬಿದ್ದಿದೆ. ಕಾರು ಪಾಸ್‌ ಆಗಿ ಸ್ವಲ್ಪ ದೂರ ಸಾಗಿದ್ದರಿಂದ ಶಾಸಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಕಣ್ಣಾರೆ ದೃಶ್ಯ ಕಂಡ ಶಾಸಕ ತಕ್ಷ ಣ ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ ಎನ್ನಲಾಗಿದೆ.
150 ಕಂಬ ಧರೆಗೆ, 50 ಲಕ್ಷ ನಷ್ಟ

ಮಲೆಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಭಾರೀ ಬಿರುಗಾಳಿ ಮಳೆಗೆ 150 ವಿದ್ಯುತ್‌ ಕಂಬಗಳು, 8 ಟ್ರಾನ್ಸ್‌ಫರ್‌ಮರ್‌ಗಳು, ಒಂದು 66 ಕೆವಿ ವಿದ್ಯುತ್‌ ಮಾರ್ಗದ ಟವರ್‌ ನೆಲಕ್ಕುರುಳಿದ್ದು, ಸುಮಾರು 50 ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಹರಿಹರದ ಬೆಸ್ಕಾಂ ಇಇ ವಿಜಯಲಕ್ಷ್ಮಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ