ಆ್ಯಪ್ನಗರ

ಮೋದಿ ನೈಸ್‌ ಮಾತು ನಂಬಿ ಮೋಸ ಹೋಗಬೇಡಿ

ಪ್ರತಿ ವಿಷಯದಲ್ಲಿ ಬರೀ ಸುಳ್ಳುಗಳನ್ನೆ ಸೃಷ್ಟಿಸಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳನ್ನು ನಂಬಿ ಮೋಸ ಹೋಗಬೇಡಿ ಎಂದು ಶಾಸಕ ಎಸ್‌.ರಾಮಪ್ಪ ಹೇಳಿದರು.

Vijaya Karnataka 11 Apr 2019, 5:00 am
ಹರಿಹರ : ಪ್ರತಿ ವಿಷಯದಲ್ಲಿ ಬರೀ ಸುಳ್ಳುಗಳನ್ನೆ ಸೃಷ್ಟಿಸಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳನ್ನು ನಂಬಿ ಮೋಸ ಹೋಗಬೇಡಿ ಎಂದು ಶಾಸಕ ಎಸ್‌.ರಾಮಪ್ಪ ಹೇಳಿದರು.
Vijaya Karnataka Web modi does not believe in good words and do not cheat
ಮೋದಿ ನೈಸ್‌ ಮಾತು ನಂಬಿ ಮೋಸ ಹೋಗಬೇಡಿ


ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಪರ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ಮೋದಿಜಿ ನಯವಾಗಿ ಮಾತನಾಡುವ ಬಹುಪಾಲು ವಿಷಯಗಳು ತಿರುಚಿದ, ಸುಳ್ಳಿನಿಂದ ಕೂಡಿದ ಸಂಗತಿಗಳಾಗಿರುತ್ತವೆ. ಅವರು ಹೇಳುವುದನ್ನೆಲ್ಲಾ ನಿಜವೆಂದು ನಂಬಿದರೆ ಭವಿಷ್ಯದಲ್ಲಿ ಪಾಶ್ಚಾತಾಪ ಪಡಬೇಕಾಗುತ್ತದೆ ಎಂದರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ, ರಾಷ್ಟ್ರೀಯತೆ, ಸೈನ್ಯ, ಜಾತಿ, ಧರ್ಮ, ಭಾಷೆ ಮುಂತಾದ ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಮಾಡುವುದು ಮಾತ್ರ ಗೊತ್ತು. ಮೋದಿ ಸರಕಾರದಿಂದ ಯಾರಿಗೂ ಸುಖವಿಲ್ಲ. ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ದೇಶದ ಜನರ ನೆಮ್ಮದಿ ಹಾಳಾಗುವುದರಿಂದ ಮೈತ್ರಿ ಅಭ್ಯರ್ಥಿ ಎಚ್‌.ಬಿ.ಮಂಜಪ್ಪರನ್ನು ಗೆಲ್ಲಿಸುವ ಮೂಲಕ ದೇಶದ ಹಿತ ಕಾಯಬೇಕೆಂದು ಕೋರಿದರು.

ಜಿಪಂ ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ ಮಾತನಾಡಿ, ನೋಟು ಅಮಾನ್ಯೀಕರಣ ಮೋದಿ ಸರಕಾರದ ಬಹುದೊಡ್ಡ ಪ್ರಮಾದ. ಇದರಿಂದ ಕೃಷಿ, ಕೈಗಾರಿಕೋತ್ಪಾದನೆ ಕುಸಿದು, ಆರ್ಥಿಕತೆ ನೆಲಕಚ್ಚಿದೆ. ನಿರುದ್ಯೋಗ ಮುಗಿಲು ಮುಟ್ಟಿದೆ. ಆದರೆ ಮೋದಿಯವರು ಇದನ್ನೆಲ್ಲಾ ಮುಚ್ಚಿಕೊಳ್ಳಲು ದೇಶದ ಜಿಡಿಪಿ ಅಳತೆಗೋಲನ್ನೆ ತಿರುಚಿ ಅಭಿವೃದ್ಧಿಯ ಸುಳ್ಳು ಅಂಕಿ ಅಂಶ ನೀಡುತ್ತಿದ್ದಾರೆ. ಮೋದಿ ಮಾತಿನ ಮೋಡಿಗೆ ಬಲಿಯಾಗದೆ ಕಾಂಗ್ರೆಸ್‌ ಪಕ್ಷ ವನ್ನು ಬೆಂಬಲಿಸಿ ಎಂದರು.

ಮುಖಂಡರಾದ ಎಲ್‌.ಬಿ.ಹನುಮಂತಪ್ಪ, ಕೊಂಡಜ್ಜಿ ಪರಮೇಶ್ವರಪ್ಪ, ನಿಖಿಲ್‌ ಕೆ., ಸಿ.ಎನ್‌. ಹುಲಿಗೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ರಾದ ದೊಡ್ಡಬಸಪ್ಪ, ಭರಮಪ್ಪ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ