ಆ್ಯಪ್ನಗರ

ಚುನಾವಣೆಯಲ್ಲಿ ಸೋತವರಿಗೆ ಬೆಲೆ ಜಾಸ್ತಿನಾ..? ಪಕ್ಷದ ವರಿಷ್ಠರ ವಿರುದ್ಧ ರೇಣುಕಾಚಾರ್ಯ ಗರಂ

ರಾಜ್ಯ ಬಿಜೆಪಿಯಲ್ಲಿ ಈಗ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಚುನಾವಣೆಯಲ್ಲಿ ಸೋತವರಿಗೂ ಮಂತ್ರಿಗಿರಿ ನೀಡುತ್ತಿರುವುದಕ್ಕೆ ಮೂಲ ನಿವಾಸಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಅದರಂತೆ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕೂಡ ಅತೃಪ್ತಿ ಹೊರಹಾಕಿದ್ದಾರೆ.

Vijaya Karnataka Web 24 Nov 2020, 7:13 pm
ದಾವಣಗೆರೆ: ಕಾರ್ಯಕರ್ತರಿಂದ ಪಕ್ಷ ಅಧಿಕಾರಕ್ಕೆ ಬಂದಿದೆ ಹೊರತು, ಸೋತವರಿಂದ ನಮ್ಮ ಸರಕಾರ ಅಧಿಕಾರಕ್ಕೆ ಬಂದಿಲ್ಲ ಎನ್ನುವ ಮೂಲಕ ಶಾಸಕ ಎಂ.ಪಿ.ರೇಣುಕಾಚಾರ್ಯ ಪಕ್ಷದ ವರಿಷ್ಟರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
Vijaya Karnataka Web mp renukacharya upset on party leaders over cabinet expansion
ಚುನಾವಣೆಯಲ್ಲಿ ಸೋತವರಿಗೆ ಬೆಲೆ ಜಾಸ್ತಿನಾ..? ಪಕ್ಷದ ವರಿಷ್ಠರ ವಿರುದ್ಧ ರೇಣುಕಾಚಾರ್ಯ ಗರಂ


ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಹಾಗೂ ಮೂರು ಬಾರು ಗೆದ್ದವರಿಗೆ ಅವಕಾಶ ಕೊಡಬೇಕಿತ್ತು. ಆದರೆ, ಚುನಾವಣೆಗಳಲ್ಲಿ ಸೋತವರಿಗೆ ಉನ್ನತ ಹುದ್ದೆ ನೀಡಿರುವುದು ನಮಗೆ ಬೇಸರ ತರಿಸಿದೆ. ನಾವು ಸಾಂವಿಧಾನಿಕವಾಗಿ ಜನರಿಂದ ಆಯ್ಕೆಯಾಗಿದ್ದೇವೆ ಜನರು ನಮಗೆ ಜನಾದೇಶ ಕೊಟ್ಟಿಲ್ಲವಾ ಎಂದು ಪ್ರಶ್ನಿಸಿದರು.

ಚುನಾವಣೆಗಳಲ್ಲಿ ಸೋತವರು ಅಷ್ಟೇ ಸಮರ್ಥರಾ? ನಮಗೆ ಸಾಮರ್ಥ್ಯ ಇಲ್ಲವಾ? ಪಕ್ಷದಲ್ಲಿ ಸೋತವರಿಗೆ ಬೆಲೆ ಜಾಸ್ತಿನಾ ? ಎಂದು ಪಕ್ಷದ ನಾಯಕರನ್ನು ಪ್ರಶ್ನೆ ಮಾಡಿದ ಶಾಸಕ ರೇಣುಕಾಚಾರ್ಯ ಸಂಪುಟ ವಿಸ್ತರಣೆಯಲ್ಲಿ ಒಂದು, ಎರಡು ಸರಿ ಗೆದ್ದವರಿಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.

ಸಂಪುಟ ವಿಸ್ತರಣೆ: ಕಾಲಗರ್ಭದಲ್ಲಿ ಏನು ಬೇಕಾದರೂ ಆಗಬಹುದು ಎಂದ ರೇಣುಕಾಚಾರ್ಯ

ಕೇವಲ ಸೋತವರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ ಅನ್ನುವುದಾದರೆ ಗೆದ್ದ 105 ಜನ ಶಾಸಕರು ಲೆಕ್ಕಕ್ಕೇ ಇಲ್ಲವೇ. ವರಿಷ್ಟರ ಇಂಥಹ ತೀರ್ಮಾನಗಳಿಂದ ಭಾರತ ಮಾತಾ ಕೀ ಜೈ ಎನ್ನುವ ಮೂಲಕ ನಮ್ಮನ್ನು ಗೆಲ್ಲಿಸಿದ ಕಾರ್ಯಕರ್ತರಿಗೆ ನೋವಾಗುತ್ತದೆ ಎಂದರು.

'ಹೊಸ ಗಾಳಿ ಬೀಸಬೇಕು'; ಸಂಪುಟ ಪುನರ್‌ರಚನೆಗೆ ಹಳ್ಳಿಹಕ್ಕಿ ಇಂಗಿತ, ಇತ್ತ ಹಾಲಿ ಸಚಿವರಿಗೆ ಕೊತಕೊತ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ