ಆ್ಯಪ್ನಗರ

ರಾಷ್ಟ್ರೀಯ ಕುಸ್ತಿಪಟು ನಿಧನ

ರಾಷ್ಟ್ರೀಯ ಕುಸ್ತಿಪಟು ತೋಳಹುಣಸೆಯ ಸುರೇಂದ್ರನಾಯ್ಕ ಮಂಗಳವಾರ ಸಂಜೆ ನಿಧನರಾಗಿದ್ದಾರೆ.

Vijaya Karnataka 21 Aug 2019, 5:00 am
Vijaya Karnataka Web national wrestler dies
ರಾಷ್ಟ್ರೀಯ ಕುಸ್ತಿಪಟು ನಿಧನ
ದಾವಣಗೆರೆ : ರಾಷ್ಟ್ರೀಯ ಕುಸ್ತಿಪಟು ತೋಳಹುಣಸೆಯ ಸುರೇಂದ್ರನಾಯ್ಕ ಮಂಗಳವಾರ ಸಂಜೆ ನಿಧನರಾಗಿದ್ದಾರೆ.

ಇವರಿಗೆ ಒಬ್ಬ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಮೃತರ ಅಂತ್ಯಕ್ರಿಯೆ ತೋಳಹುಣಸೆಯ ರುದ್ರಭೂಮಿಯಲ್ಲಿ ಆ. 21ರ ಬುಧವಾರ ಮಧ್ಯಾಹ್ನ 12 ಕ್ಕೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕುಸ್ತಿ ಆಡಿ ಗೆಲುವು ಸಾಧಿಸಿ ಅನೇಕ ಬಿರುದುಗಳನ್ನು ಪಡೆದು ದಾವಣಗೆರೆ ಕೀರ್ತಿ ಮೆರೆದಿದ್ದರು. 1997ರಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಇವರು ಎಲ್ಲ ಪೈಲ್ವಾನರನ್ನು ಚಿತ್‌ ಮಾಡಿ ಗದೆಯೊಂದಿಗೆ ಕರ್ನಾಟಕ ಕಂಠೀರವ ಎಂಬ ಬಿರುದು ಪಡೆದಿದ್ದರು. ಇವರ ನಿಧನಕ್ಕೆ ಪೈಲ್ವಾನ್‌ ವೀರೇಶ್‌ ಸೇರಿದಂತೆ ಅನೇಕ ಪೈಲ್ವಾನರು ಕಂಬನಿ ಮಿಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ