ಆ್ಯಪ್ನಗರ

ಹಳೆ ಸೇತುವೆ ಗ್ಯಾರಂಟಿ ಕೊಡದೆ ಕಾಲ್ಕಿತ್ತ ಎಇಇ!

ತುಂಗಭದ್ರ ಹಳೆ ಸೇತುವೆ ಮೇಲೆ ಜಲಸಿರಿ ನೀರು ಸರಬರಾಜು ಪೈಪುಗಳನ್ನು ಅಳವಡಿಸಿರುವುದರಿಂದ ಸೇತುವೆಗೆ ಯಾವುದೆ ಧಕ್ಕೆ ಆಗುವುದಿಲ್ಲ ಎಂದು ಬರೆದು ಕೊಡುವುದಾಗಿ ಹೇಳಿದ ಇಲ್ಲಿನ ಪಿಡಬ್ಲ್ಯುಡಿ ಎಇಇ, ಊಟ ಮಾಡಿ ಬರುತ್ತೇನೆಂದು ಪೇರಿ ಕಿತ್ತ ಘಟನೆ ಮಂಗಳವಾರ ನಡೆಯಿತು.

Vijaya Karnataka 31 Jul 2019, 8:46 pm
ಹರಿಹರ : ತುಂಗಭದ್ರ ಹಳೆ ಸೇತುವೆ ಮೇಲೆ ಜಲಸಿರಿ ನೀರು ಸರಬರಾಜು ಪೈಪುಗಳನ್ನು ಅಳವಡಿಸಿರುವುದರಿಂದ ಸೇತುವೆಗೆ ಯಾವುದೆ ಧಕ್ಕೆ ಆಗುವುದಿಲ್ಲ ಎಂದು ಬರೆದು ಕೊಡುವುದಾಗಿ ಹೇಳಿದ ಇಲ್ಲಿನ ಪಿಡಬ್ಲ್ಯುಡಿ ಎಇಇ, ಊಟ ಮಾಡಿ ಬರುತ್ತೇನೆಂದು ಪೇರಿ ಕಿತ್ತ ಘಟನೆ ಮಂಗಳವಾರ ನಡೆಯಿತು.
Vijaya Karnataka Web old bridge aee without guaranteeing old bridge
ಹಳೆ ಸೇತುವೆ ಗ್ಯಾರಂಟಿ ಕೊಡದೆ ಕಾಲ್ಕಿತ್ತ ಎಇಇ!


ಈ ಕುರಿತು ಮಾಹಿತಿ ಪಡೆಯಲು ಕಚೇರಿಗೆ ತೆರಳಿದ ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರ ನಿಯೋಗ, ಈಗ್ಗೆ ಒಂದೂವರೆ ತಿಂಗಳ ಹಿಂದೆ ಸೇತುವೆ ಮೇಲೆ ಪೈಪ್‌ ಅಳವಡಿಕೆ ಬೇಡ. ಶತಮಾನ ಕಂಡ ಸೇತುವೆಯಾಗಿದ್ದು ಅದು ಹರಿಹರದ ಒಂದು ಪ್ರಮುಖ ಸ್ಮಾರಕವಾಗಿದೆ ಎಂದು ನಾನಾ ಸಂಘ, ಸಂಸ್ಥೆಗಳಿಂದ ಇಲಾಖೆಗೆ ಮನವಿ ನೀಡಲಾಗಿತ್ತು.

ಜತೆಗೆ ಎಕ್ಸ್‌ಪರ್ಟ್‌ ಅಭಿಪ್ರಾಯದಲ್ಲಿ ಸೇತುವೆಯು 1886 ರಲ್ಲಿ ಸ್ಥಾಪನೆಯಾಗಿರುವುದು ಎನ್ನುವ ಬದಲು 1965ರಲ್ಲಿ ಸ್ಥಾಪನೆಯಾಗಿದೆ ಎಂದು ಸುಳ್ಳಾಗಿ ನಮೂದಿಸಿದ್ದಾರೆ. ಸುಳ್ಳು ಮಾಹಿತಿಯ ಎಕ್ಸ್‌ಪರ್ಟ್‌ ಅಭಿಪ್ರಾಯವನ್ನೆ ಪಿಡಬ್ಲ್ಯುಡಿ ಇಲಾಖೆ ಹೇಗೆ ಒಪ್ಪಿತು ಎಂಬ ಬಗ್ಗೆಯೂ ಸ್ಪಷ್ಟೀಕರಣ ಕೇಳಲಾಗಿತ್ತು ಎಂದರು.

ಆದರೆ ನೀವು ಈವರೆಗೆ ಏನೂ ಪ್ರಗತಿ ಮಾಡಿಲ್ಲ. ನಾವು ಕೊಟ್ಟ ಮನವಿಯನ್ನು ವಿಭಾಗೀಯ ಕಚೇರಿ ಇಇರವರಿಗೆ ಕಳಿಸಿದ್ದೇವೆ. ಅಲ್ಲಿಂದ ಯಾವುದೆ ಉತ್ತರ ಬಂದಿಲ್ಲ ಎನ್ನುತ್ತಿದ್ದೀರಿ ಎಂದು ತರಾಟೆ ತೆಗೆದುಕೊಂಡರು.

ಆಗ ಎಇಇ ದಳವಾಯಿ ಮಾತನಾಡಿ, ನೋಡ್ರೀ ಆ ಸೇತುವೆಗೆ ಏನೂ ಆಗಲ್ಲ, ಇದರ ಬಗ್ಗೆ ನಾನು ಗ್ಯಾರಂಟಿ ಕೊಡುತ್ತೇನೆ ಎಂದರು. ನೀವು ಸರಕಾರಿ ಅಧಿಕಾರಿಯಾಗಿದ್ದೀರಿ, ಇವತ್ತು ಈ ಊರು, 6 ತಿಂಗಳ ನಂತರ ಇನ್ನೊಂದು ಊರು. ನೀವು ಕೊಡುವ ಗ್ಯಾರಂಟಿಯನ್ನು ಬರೆದು ಸೀಲು, ಸಹಿ ಹಾಕಿ ಕೊಟ್ಟು ಬಿಡಿ ಎಂದು ಕಾರ್ಯಕರ್ತರು ಪಟ್ಟು ಹಿಡಿದರು.

ಆಗ ಪೇಚಿಗೆ ಸಿಲುಕಿದ ಎಇಇ ದಳವಾಯಿ ಊಟದ ಸಮಯವಾಗಿದೆ ಊಟ ಮಾಡಿ ಬರುತ್ತೇನೆ ಇರಿ ಎಂದು ಕಾರು ಏರಿ ಕಚೇರಿಯಿಂದ ಹೊರಟರು. ಎಇಇ ಈಗ ಬರುತ್ತಾರೆ, ಆಗ ಬರುತ್ತಾರೆಂದು ಕಾಯುತ್ತಾ ಗಂಟೆ, ಗಟ್ಟಲೆ ಕುಳಿತ ಕಾರ್ಯಕರ್ತರು ಶಪಿಸುತ್ತಾ ಕಚೇರಿಯಿಂದ ತೆರಳಿದ ಪ್ರಸಂಗ ನಡೆಯಿತು.

ನಿಯೋಗದಲ್ಲಿ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್‌, ಚೌಡಪ್ಪ ಸಿ., ಮಂಜುನಾಥ ಡಿ.ಎಂ., ರಾಜಪ್ಪ, ಹರೀಶ್‌, ಗಂಗಾಧರ, ಪ್ರಶಾಂತ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ