ಆ್ಯಪ್ನಗರ

ರಾಜ್ಯಮಟ್ಟದ ಕೇರಂ ಪಂದ್ಯಾವಳಿಗೆ ತೆರೆ

ಜಿಲ್ಲಾ ಕೇರಂ ಅಸೋಸಿಯೇಷನ್‌ ಹಾಗೂ ಹಂಸ ಕೇರಂ ಗ್ರೂಪ್‌ ಆಶ್ರಯದಲ್ಲಿ ನಗರದ ಗುರುಭವನದಲ್ಲಿ ಕಳೆದ 4 ದಿನಗಳಿಂದ ನಡೆದ ರಾಜ್ಯಮಟ್ಟದ ರಾರ‍ಯಕಿಂಗ್‌ ಕೇರಂ ಪಂದ್ಯಾವಳಿಗೆ ಸೋಮವಾರ ತೆರೆ ಬಿದ್ದಿದೆ.

Vijaya Karnataka 8 Jan 2019, 5:00 am
ದಾವಣಗೆರೆ: ಜಿಲ್ಲಾ ಕೇರಂ ಅಸೋಸಿಯೇಷನ್‌ ಹಾಗೂ ಹಂಸ ಕೇರಂ ಗ್ರೂಪ್‌ ಆಶ್ರಯದಲ್ಲಿ ನಗರದ ಗುರುಭವನದಲ್ಲಿ ಕಳೆದ 4 ದಿನಗಳಿಂದ ನಡೆದ ರಾಜ್ಯಮಟ್ಟದ ರಾರ‍ಯಕಿಂಗ್‌ ಕೇರಂ ಪಂದ್ಯಾವಳಿಗೆ ಸೋಮವಾರ ತೆರೆ ಬಿದ್ದಿದೆ.
Vijaya Karnataka Web open state level caramel tournament
ರಾಜ್ಯಮಟ್ಟದ ಕೇರಂ ಪಂದ್ಯಾವಳಿಗೆ ತೆರೆ


ಜಿಲ್ಲಾ ಕೇರಂ ಅಸೋಸಿಯೇಷನ್‌ ಅಧ್ಯಕ್ಷ ದಿನೇಶ್‌ ಕೆ.ಶೆಟ್ಟಿ ಅವರು ಬಹುಮಾನ ವಿತರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳು ನಡೆಯಲಿ ಎಂದರು.

ಪುರುಷರ ವಿಭಾಗ ಸಿಂಗಲ್ಸ್‌ನಲ್ಲಿ ವರ್ಲ್ಡ್‌ ಕಪ್‌ನಲ್ಲಿ 3ನೇ ಸ್ಥಾನ ಗಳಿಸಿದ ಜಹೀರ್‌ ಬಾಷಾ ಅವರು ವರ್ಲ್ಡ್‌ ಕಪ್‌ನಲ್ಲಿ 2 ಬಾರಿ ವಿಜೇತರಾದ ಆರ್‌.ಎಂ.ಶಂಕರ್‌ ಮಣಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿದರು.

ಪುರುಷರ ವಿಭಾಗ ಸಿಂಗಲ್ಸ್‌: ಜಹೀರ್‌ ಬಾಷಾ (ಪ್ರಥಮ), ಆರ್‌.ಎಂ.ಶಂಕರ್‌ (ದ್ವಿತೀಯ) ಆರ್‌.ಶಿವಕುಮಾರ್‌ (ತೃತೀಯ). ನಾನ್‌ ಮೆಡ್‌ಲಿಸ್ಟ್‌ : ಎನ್‌.ಶ್ರೀನಿವಾಸ್‌ ಮೂರ್ತಿ (ಪ್ರಥಮ), ಫಯಾಜ್‌ (ದ್ವಿತೀಯ). ಮಹಿಳೆಯರ ವಿಭಾಗ ಸಿಂಗಲ್ಸ್‌: ಅಂಬಿಕಾ (ಪ್ರಥಮ), ಕವಿತಾ (ದ್ವಿತೀಯ). ಪುರುಷರ ವೆಟರನ್ಸ್‌ ವಿಭಾಗ : ಮುಕ್ತಿಯಾರ್‌ (ಪ್ರಥಮ), ಜೆ.ಎನ್‌.ಶ್ಯಾಮಸುಂದರ್‌ (ದ್ವಿತೀಯ). ಪುರುಷರ ಜ್ಯೂನಿಯರ್‌ ವಿಭಾಗ : ಕಾರ್ತೀಕ್‌ ಭಟ್‌(ಪ್ರಥಮ), ಆಶೀಫ್‌ ಅನ್ವರ್‌ (ದ್ವಿತೀಯ), ಪುರುಷರ ಸಬ್‌ ಜ್ಯೂನಿಯರ್‌ ವಿಭಾಗ : ನಿಖಿಲ್‌ ಭಂಡಾರಿ (ಪ್ರಥಮ), ಆಶೀಫ್‌ ಅನ್ವರ್‌ (ದ್ವಿತೀಯ).

ಸಮಾರೋಪ ಸಮಾರಂಭದಲ್ಲಿ ಆಲ್‌ ಇಂಡಿಯಾ ಕೇರಂ ಅಸೋಸಿಯೇಷನ್‌ ಕಾರ್ಯದರ್ಶಿ ವಿ.ಸುಬ್ರಹ್ಮಣ್ಯ, ಉಪಾಧ್ಯಕ್ಷ ರಾದ ವಿ.ಗಣೇಶ್‌ ಕೇರಂ, ಕಾರ್ಯದರ್ಶಿ ಶಿರಾಜುದ್ದೀನ್‌, ಮುಖ್ಯ ತೀರ್ಪುಗಾರರಾದ ಶಿವಾಜಿರಾವ್‌, ಮುಖಂಡರಾದ ಎ.ನಾಗರಾಜ್‌, ಗಡಿಗುಡಾಳ್‌ ಮಂಜುನಾಥ್‌, ಟಾರ್ಗೆಟ್‌ ಅಸ್ಲಾಂ, ಶ್ರೀನಿವಾಸ್‌ ದಾಸಕರಿಯಪ್ಪ, ಇಮ್ರಾನ್‌, ಸಾಗರ್‌, ಕಬಡ್ಡಿ ನಾಗರಾಜ್‌, ಪರಮೇಶ್ವರಪ್ಪ, ಎಚ್‌.ಮಹೇಶ್‌, ಮಹಾಂತೇಶ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ