ಆ್ಯಪ್ನಗರ

ಪಂಚಮಸಾಲಿ ಶ್ರೀಗಳು ಪುರಪ್ರವೇಶ

ನ್ಯಾಮತಿ ಪಟ್ಟಣ ಮತ್ತು ತಾಲೂಕಿನ ಒಡೆಯಹತ್ತೂರು ಗ್ರಾಮದಲ್ಲಿ ಭಾನುವಾರ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಪುರ ಪ್ರವೇಶ ಮಾಡಿದರು. ಸಮಾಜದ ಭಕ್ತರ ಬೈಕ್‌ ರಾರ‍ಯಲಿ ನಡೆಯಿತು.

Vijaya Karnataka 28 May 2018, 3:25 pm
ನ್ಯಾಮತಿ : ನ್ಯಾಮತಿ ಪಟ್ಟಣ ಮತ್ತು ತಾಲೂಕಿನ ಒಡೆಯಹತ್ತೂರು ಗ್ರಾಮದಲ್ಲಿ ಭಾನುವಾರ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಪುರ ಪ್ರವೇಶ ಮಾಡಿದರು. ಸಮಾಜದ ಭಕ್ತರ ಬೈಕ್‌ ರಾರ‍ಯಲಿ ನಡೆಯಿತು.
Vijaya Karnataka Web panchamasali srees are the entrance
ಪಂಚಮಸಾಲಿ ಶ್ರೀಗಳು ಪುರಪ್ರವೇಶ


ಪ್ರಥಮ ಬಾರಿಗೆ ಆಗಮಿಸಿದ ಪಂಚಮಸಾಲಿ ಪೀಠದ ಶ್ರೀಗಳನ್ನು ಪಟ್ಟಣದ ಶ್ರೀ ಬನಶಂಕರಿ ದೇವಿ ದೇವಾಲಯದ ಹತ್ತಿರ ಪೂರ್ಣಕುಂಭ ಕಳಸಗಳೊಂದಿಗೆ ಸಮಾಜದವರು ಸ್ವಾಗತಿಸಿ ಬರಮಾಡಿಕೊಂಡರು.

ಜೈ ಪಂಚಮಸಾಲಿ, ವೀರರಾಣಿ ಕಿತ್ತೂರು ಚೆನ್ನಮ್ಮ ಮಾತಾಕೀ, ಹರ ಹರ ಮಹಾದೇವ ಎಂಬ ಭಕ್ತರ ಘೋಷಣೆಯೊಂದಿಗೆ ಬೈಕ್‌ ರಾರ‍ಯಲಿಯ ಮೆರವಣಿಗೆ ಹೊನ್ನಾಳಿ ಟಿ.ಬಿ. ವೃತ್ತದಿಂದ ಆರಂಭಗೊಂಡು ಮಾದನಬಾವಿ, ಸುರಹೊನ್ನೆ, ನ್ಯಾಮತಿ ಪಟ್ಟಣ, ದೊಡ್ಡೇತ್ತಿನಹಳ್ಳಿ, ಕುಂಕುವ ಗ್ರಾಮಗಳ ಮಾರ್ಗಗಳ ಮೂಲಕ ನಡೆದು ಒಡೆಯಹತ್ತೂರು ಗ್ರಾಮಕ್ಕೆ ತೆರಳಿ ಮುಕ್ತಾಯಗೊಂಡಿತು.

ಶ್ರೀ ವಚನಾನಂದ ಸ್ವಾಮೀಜಿಯವರ ಪುರ ಪ್ರವೇಶ ಬೈಕ್‌ ರಾರ‍ಯಲಿಯ ಕಾರ್ಯಕ್ರಮ ನಿಮ್ಮಿತ್ತ ಇಡೀ ಒಡೆಯಹತ್ತೂರು ಗ್ರಾಮದ ಮನೆಗಳು ತಳಿರು, ತೊರಣ, ಅಂಗಳದಲ್ಲಿ ಬಗೆಯ ರಂಗೋಲಿಯಿಂದ ಶೃಂಗಾರಗೊಂಡಿದ್ದವು. ಸಮಾಜದ ಮುಖಂಡರಾದ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ