ಜನರಿಗೆ ಫ್ಲೋರೈಡ್ ನೀರೇ ಗತಿ!
ಆ ಊರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ. ಟ್ಯಾಂಕರ್ ನೀರು ಸಹ ಸಿಗದೇ ಜನರು ಹನಿ ನೀರಿಗಾಗಿ ಪರದಾಡುವಂತಾಗಿದೆ.
Vijaya Karnataka Web 22 Feb 2019, 5:00 am
ಎಚ್.ಆರ್.ಬಸವರಾಜ್ ಜಗಳೂರು
ಆ ಊರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ. ಟ್ಯಾಂಕರ್ ನೀರು ಸಹ ಸಿಗದೇ ಜನರು ಹನಿ ನೀರಿಗಾಗಿ ಪರದಾಡುವಂತಾಗಿದೆ.
ಇದು ತಾಲೂಕಿನ ಹನುಮಂತಾಪುರ ಗ್ರಾಮದ ಶುದ್ಧ ನೀರಿನ ಘಟಕದ ಅವಸ್ಥೆಯ ಚಿತ್ರಣ.
ಈ ಊರು ಸುಮಾರು ಐದು ನೂರು ಕುಟುಂಬಗಳಿರುವ ಗ್ರಾಪಂ ಕೇಂದ್ರ ಕೂಡ. ಇಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿ ಒಂದು ವರ್ಷ ಕಳೆದರೂ ಜನರಿಗೆ ಮಾತ್ರ ಶುದ್ಧ ನೀರಿಲ್ಲ. ಶುದ್ಧ ನೀರಿನ ಘಟಕ ಇದುವರೆಗೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಪಕ್ಕದ ಗ್ರಾಮಗಳಿಗೆ ಹೋಗಿ ಶುದ್ಧ ನೀರು ತರುವಂತಾಗಿದೆ.
ಎ ಗ್ರೇಡ್ ಪಂಚಾಯಿತಿ:
ತಾಲೂಕಿನಲ್ಲಿಯೇ ಎ ಗ್ರೇಡ್ ಪಂಚಾಯಿತಿ. 28 ಮಂದಿ ಸದಸ್ಯರುಳ್ಳ ಗ್ರಾಪಂ ಇದು. ಒಟ್ಟು 8 ಹಳ್ಳಿಗಳ ವ್ಯಾಪ್ತಿಯ ಜನ ಕುಡಿವ ನೀರು, ರಸ್ತೆ, ಚರಂಡಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪದವಿ ಅಧಿಕಾರಕ್ಕಾಗಿ ಕಿತ್ತಾಡುತ್ತಾ ನಾಲ್ಕುವರೆ ವರ್ಷ ಸವೆಸಿದರು. ಇನ್ನು ಪಿಡಿಒ, ಬಿಲ್ಕಲೆಕ್ಟರ್ ಜನರ ಕೈಗೆ ಸಿಗುತ್ತಿಲ್ಲ. ಈ ಬಗ್ಗೆ ತಾಪಂ ಇಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.
ನೆಪ ಮಾತ್ರಕ್ಕೆ ಟ್ಯಾಂಕರ್:
ಗ್ರಾಮದಲ್ಲಿ ವರ್ಷವಿಡೀ ಜನರು ನೀರಿಲ್ಲದೇ ಪರದಾಡುತ್ತಿದ್ದರೂ ಗ್ರಾಪಂನವರಾಗಲಿ, ಅಧಿಕಾರಿಗಳಾಗಲೀ ಗಮನ ಹರಿಸದೇ ಇದ್ದಾಗ ಗ್ರಾಮಸ್ಥರ ಒತ್ತಾಯದ ಮೇರೆಗೆ ಜಿಪಂ ಇಂಜಿನಿಯರ್ ಹನುಮಂತಪ್ಪ ನೀರು ಸಿಗದ ಕಡೆ ಬೋರ್ ಕೊರೆಸಿದರೂ ಫೇಲಾಗಿ ಸರಕಾರದ ಹಣ ಪೋಲಾಗಿದೆ. 3 ಟ್ಯಾಂಕರ್ ಮೂಲಕ ನೀರು ಕೊಡುವುದಾಗಿ ಹೇಳಿ ಕೇವಲ ಬೀದಿಗೊಂದು ಟ್ಯಾಂಕರ್ ಕೊಡುತ್ತಿದ್ದು ನೀರು ಸಿಗದೇ ನಿತ್ಯ ನೀರಿಗಾಗಿ ಜಗಳ ಸಾಮಾನ್ಯವಾಗಿದೆ.
ಫ್ಲೋರೈಡ್ ನೀರೇ ಗತಿ
ತಾಲೂಕಿನ ಹಲವು ಕಡೆ ಸುಮಾರು 130 ಶುದ್ಧ ನೀರಿನ ಘಟಕ ನಿರ್ಮಿಸಿದ್ದರೂ ಕೆಲವು ಕಡೆ ಸಮರ್ಪಕ ನೀರಿಲ್ಲದೇ ಇಂತಹ ಘಟಕಗಳು ಇದ್ದೂ ಇಲ್ಲದಂತಾಗಿದೆ. ಹನುಮಂತಾಪುರ ಸೇರಿ ಅನೇಕ ಗ್ರಾಮಗಳಲ್ಲಿ ಘಟಕಗಳು ಇದ್ದರೂ ಇಲ್ಲದಂತಾಗಿ ಫ್ಲೋರೈಡ್ ನೀರನ್ನೇ ಕುಡಿಯುವಂತಾಗಿದೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿ ವರ್ಷವಾಗುತ್ತಾ ಬಂದರೂ ಇನ್ನು ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿಲ್ಲ . ಗ್ರಾಮದ ಜನರು ಪಕ್ಕದ ಕಸವನಹಳ್ಳಿಗೆ ಹೋಗಿ ನೀರು ತರುವಂತಾಗಿದೆ. ಘಟಕಕ್ಕೆ ಕೂಡಲೇ ಕುಡಿವ ನೀರು ಕೊಡಬೇಕಿದೆ.
-ಬಸವರಾಜ್, ಹನುಮಂತಾಪುರ
ಆ ಊರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ. ಟ್ಯಾಂಕರ್ ನೀರು ಸಹ ಸಿಗದೇ ಜನರು ಹನಿ ನೀರಿಗಾಗಿ ಪರದಾಡುವಂತಾಗಿದೆ.
ಇದು ತಾಲೂಕಿನ ಹನುಮಂತಾಪುರ ಗ್ರಾಮದ ಶುದ್ಧ ನೀರಿನ ಘಟಕದ ಅವಸ್ಥೆಯ ಚಿತ್ರಣ.
ಈ ಊರು ಸುಮಾರು ಐದು ನೂರು ಕುಟುಂಬಗಳಿರುವ ಗ್ರಾಪಂ ಕೇಂದ್ರ ಕೂಡ. ಇಲ್ಲಿ ಶುದ್ಧ ನೀರಿನ ಘಟಕ ನಿರ್ಮಿಸಿ ಒಂದು ವರ್ಷ ಕಳೆದರೂ ಜನರಿಗೆ ಮಾತ್ರ ಶುದ್ಧ ನೀರಿಲ್ಲ. ಶುದ್ಧ ನೀರಿನ ಘಟಕ ಇದುವರೆಗೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಪಕ್ಕದ ಗ್ರಾಮಗಳಿಗೆ ಹೋಗಿ ಶುದ್ಧ ನೀರು ತರುವಂತಾಗಿದೆ.
ಎ ಗ್ರೇಡ್ ಪಂಚಾಯಿತಿ:
ತಾಲೂಕಿನಲ್ಲಿಯೇ ಎ ಗ್ರೇಡ್ ಪಂಚಾಯಿತಿ. 28 ಮಂದಿ ಸದಸ್ಯರುಳ್ಳ ಗ್ರಾಪಂ ಇದು. ಒಟ್ಟು 8 ಹಳ್ಳಿಗಳ ವ್ಯಾಪ್ತಿಯ ಜನ ಕುಡಿವ ನೀರು, ರಸ್ತೆ, ಚರಂಡಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪದವಿ ಅಧಿಕಾರಕ್ಕಾಗಿ ಕಿತ್ತಾಡುತ್ತಾ ನಾಲ್ಕುವರೆ ವರ್ಷ ಸವೆಸಿದರು. ಇನ್ನು ಪಿಡಿಒ, ಬಿಲ್ಕಲೆಕ್ಟರ್ ಜನರ ಕೈಗೆ ಸಿಗುತ್ತಿಲ್ಲ. ಈ ಬಗ್ಗೆ ತಾಪಂ ಇಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಗ್ರಾಮಸ್ಥರು.
ನೆಪ ಮಾತ್ರಕ್ಕೆ ಟ್ಯಾಂಕರ್:
ಗ್ರಾಮದಲ್ಲಿ ವರ್ಷವಿಡೀ ಜನರು ನೀರಿಲ್ಲದೇ ಪರದಾಡುತ್ತಿದ್ದರೂ ಗ್ರಾಪಂನವರಾಗಲಿ, ಅಧಿಕಾರಿಗಳಾಗಲೀ ಗಮನ ಹರಿಸದೇ ಇದ್ದಾಗ ಗ್ರಾಮಸ್ಥರ ಒತ್ತಾಯದ ಮೇರೆಗೆ ಜಿಪಂ ಇಂಜಿನಿಯರ್ ಹನುಮಂತಪ್ಪ ನೀರು ಸಿಗದ ಕಡೆ ಬೋರ್ ಕೊರೆಸಿದರೂ ಫೇಲಾಗಿ ಸರಕಾರದ ಹಣ ಪೋಲಾಗಿದೆ. 3 ಟ್ಯಾಂಕರ್ ಮೂಲಕ ನೀರು ಕೊಡುವುದಾಗಿ ಹೇಳಿ ಕೇವಲ ಬೀದಿಗೊಂದು ಟ್ಯಾಂಕರ್ ಕೊಡುತ್ತಿದ್ದು ನೀರು ಸಿಗದೇ ನಿತ್ಯ ನೀರಿಗಾಗಿ ಜಗಳ ಸಾಮಾನ್ಯವಾಗಿದೆ.
ಫ್ಲೋರೈಡ್ ನೀರೇ ಗತಿ
ತಾಲೂಕಿನ ಹಲವು ಕಡೆ ಸುಮಾರು 130 ಶುದ್ಧ ನೀರಿನ ಘಟಕ ನಿರ್ಮಿಸಿದ್ದರೂ ಕೆಲವು ಕಡೆ ಸಮರ್ಪಕ ನೀರಿಲ್ಲದೇ ಇಂತಹ ಘಟಕಗಳು ಇದ್ದೂ ಇಲ್ಲದಂತಾಗಿದೆ. ಹನುಮಂತಾಪುರ ಸೇರಿ ಅನೇಕ ಗ್ರಾಮಗಳಲ್ಲಿ ಘಟಕಗಳು ಇದ್ದರೂ ಇಲ್ಲದಂತಾಗಿ ಫ್ಲೋರೈಡ್ ನೀರನ್ನೇ ಕುಡಿಯುವಂತಾಗಿದೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿ ವರ್ಷವಾಗುತ್ತಾ ಬಂದರೂ ಇನ್ನು ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿಲ್ಲ . ಗ್ರಾಮದ ಜನರು ಪಕ್ಕದ ಕಸವನಹಳ್ಳಿಗೆ ಹೋಗಿ ನೀರು ತರುವಂತಾಗಿದೆ. ಘಟಕಕ್ಕೆ ಕೂಡಲೇ ಕುಡಿವ ನೀರು ಕೊಡಬೇಕಿದೆ.
-ಬಸವರಾಜ್, ಹನುಮಂತಾಪುರ