ಆ್ಯಪ್ನಗರ

ದಾವಣಗೆರೆ: ಸಡಿಲಿಕೆ ಬೆನ್ನಲ್ಲೇ, ಸಿಟಿಯಲ್ಲಿ ಗರಿಗೆದರಿದ ಜನರ ಓಡಾಟ!

ದಾವಣಗೆರೆ ಲಾಕ್‌ಡೌನ್‌ ತೆರವಾದ ಮೂರು ದಿನದ ನಂತರ ಶನಿವಾರ ನಗರದಲ್ಲಿ ಜನ ಮತ್ತು ವಾಹನ ಓಡಾಟ ಕೊಂಚ ಹೆಚ್ಚಿತ್ತು. ಅದರಲ್ಲೂ ರೈತರ ಓಡಾಟ ಸ್ವಲ್ಪ ಹೆಚ್ಚೇ ಇತ್ತು.

Vijaya Karnataka Web 18 May 2020, 4:29 pm
ದಾವಣಗೆರೆ: ಲಾಕ್‌ಡೌನ್‌ ತೆರವಾದ ಮೂರು ದಿನದ ನಂತರ ಶನಿವಾರ ನಗರದಲ್ಲಿ ಜನ ಮತ್ತು ವಾಹನ ಓಡಾಟ ಕೊಂಚ ಹೆಚ್ಚಿತ್ತು. ಅಂಗಡಿ, ಮುಂಗಟ್ಟುಗಳು ಕೂಡ ಹೆಚ್ಚೇನು ತೆರೆಯದಿದ್ದರೂ ಜನರಿಗೆ ತುರ್ತು ವಸ್ತುಗಳ ಶಾಪ್‌ಗಳು ಬಾಗಿಲು ತೆರೆದಿದ್ದರಿಂದ ಜನತೆ ಖರೀದಿಗೆ ಮುಂದಾಗಿದ್ದರು.
Vijaya Karnataka Web davnagere


ನಗರದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಿದ್ದರಿಂದ ರಾಜ್ಯದ ಇತರೆಡೆ ಲಾಕ್‌ಡೌನ್‌ ತೆರವಾದರೂ ಇಲ್ಲಿ ಮುಂದುವರಿದಿತ್ತು. ಆರ್ಥಿಕ ಚಟುವಟಿಕೆಗೆ ಅನುಕೂಲ ಮಾಡಿಕೊಡಬೇಕು ಎಂದು ವರ್ತಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಗುರುವಾರದಿಂದ ಕೊಂಚ ಸಡಿಲಿಕೆ ಮಾಡಲಾಗಿತ್ತು. ಆದರೂ ಬಹುತೇಕ ಅಂಗಡಿಗಳು ಬಾಗಿಲು ತೆರೆದಿರಲಿಲ್ಲ. ಮೂರು ದಿನಗಳಿಗೆ ಹೋಲಿಸಿದರೆ ಶನಿವಾರ ನಗರದಲ್ಲಿ ಜನರ ಓಡಾಟ ಕಂಡು ಬಂತು.ಆದರೂ ಬೆಳಗ್ಗೆ ಮನೆಯಿಂದ ಹೊರ ಬಂದು ಖರೀದಿ ಮುಗಿಸುವ ಜನ ಇಷ್ಟು ದಿನದಂತೆ ಮಧ್ಯಾಹ್ನದ ನಂತರ ಮನೆ ಸೇರುತ್ತಿದ್ದಾರೆ.

ರೈತರ ಓಡಾಟ ಕೊಂಚ ಹೆಚ್ಚು: ಇನ್ನೂ ಜನರಲ್ಲಿ ಕೊರೊನಾ ಭೀತಿ ಆವರಿಸಿದೆ. ಜತೆಗೆ ವರ್ತಕರಲ್ಲೂಇದು ಕಂಡು ಬಂದಿದ್ದು ಬಹುತೇಕ ಅಂಗಡಿಗಳು ಬಾಗಿಲು ತೆರೆಯುತ್ತಿಲ್ಲ. ನಗರದಲ್ಲಿಈಗ ಸಿಮೆಂಟ್‌, ಕಬ್ಬಿಣ, ಹಾರ್ಡ್‌ವೇರ್‌, ಮೊಬೈಲ್‌ ಶಾಪ್‌ಗಳು, ಕೆಲ ಫುಟ್‌ವೇರ್‌ಗಳು, ಮೆಕ್ಯಾನಿಕ್‌ ಶಾಪ್‌, ಕೆಲ ಬಟ್ಟೆ ಅಂಗಡಿಗಳು ಮಾತ್ರ ಬಾಗಿಲು ತೆರೆದಿವೆ. ಪ್ರಮುಖವಾಗಿ ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸಿರುವ ರೈತರು ಕೃಷಿ ಪರಿಕರ ಖರೀದಿಗೆ ನಗರಕ್ಕೆ ಬಂದು ಹೋಗಲು ಆರಂಭಿ ಸಿದ್ದಾರೆ. ಇದ ರಿಂದ ಭಾನುವಾರ ಬಿತ್ತನೆ ಬೀಜ, ಪೈಪ್‌, ರಸಗೊಬ್ಬರ ತುಂಬಿ ಕೊಂಡು ಹೋಗುವ ಟ್ರ್ಯಾಕ್ಟರ್‌ಗಳು, ಲಗೇಜ್‌ ವಾಹನಗಳು ಓಡಾಟ ಹೆಚ್ಚಿನ ಸಂಖ್ಯೆಯಲ್ಲಿಕಂಡು ಬಂದವು.

ಉದ್ಯಮಗಳ ಆರಂಭಕ್ಕೆ ಸಿದ್ಧತೆ: ಲಾಕ್‌ಡೌನ್‌ ಸಡಿಲಿಕೆ ನಂತರ ಆರಂಭ ಆಗಿರುವ ಹೊಸ ಆರ್ಥಿಕ ಚಟುವಟಿಕೆಗಳು ಇವು. ಕರೂರು ಇಂಡ ಸ್ಟ್ರಿಯಲ್‌ ಏರಿಯಾದಲ್ಲಿನ ಕೆಲ ಉದ್ದಿಮೆಗಳು ಕೂಡ ಆರಂಭಕ್ಕೆ ಸಿದ್ಧತೆ ನಡೆಸಿವೆ. ಪ್ರಮುಖ ವಾಗಿ ಗಾರ್ಮೆಂ ಟ್ಸ್‌ಗಳು ಓಪನ್‌ ಆಗಬೇಕಿದ್ದು ರಾ ಮೆಟಿರಿಯಲ್‌ ಗುಜರಾತ್‌, ಯುಪಿ ಯಿಂದ ಬರಬೇಕಿದೆ. ಮೇ 17 ರ ನಂತರ ದೇಶಾದ್ಯಂತ ಲಾಕ್‌ಡೌನ್‌ನಲ್ಲಿಇನ್ನಷ್ಟು ತೆರವಾಗಲಿರುವ ನಿರೀಕ್ಷೆಯಿದ್ದು, ಹೊರ ರಾಜ್ಯಗಳಿಂದ ಬರಲಿರುವ ರಾ ಮೆಟಿರಿಯಲ್‌ಗಳೂ ಬರಬಹುದು ಎಂಬ ನಿರೀಕ್ಷೆಯಲ್ಲಿ ಗಾರ್ಮೆಂಟ್ಸ್‌ ಉದ್ದಿಮೆದಾರರು ಇದ್ದಾರೆ.

ಇನ್ನು ಈ ಹೊಸ ವಹಿವಾಟಿನ ಜತೆ ದಿನಸಿ ಮತ್ತು ಇನ್ನಿತರೆ ಅಗತ್ಯ ವಸ್ತುಗಳು, ಬೇಕರಿ ಕೆಲ ಪಾರ್ಸಲ್‌ಗೆ ಕೆಲ ಹೋಟೆಲ್‌ಗಳು ಬಾಗಿಲು ತೆರೆದಿದ್ದವು. ಜನ ಎಂದಿನಂತೆ ದಿನಸಿ ಖರೀದಿಗೂ ಓಡಾಟ ಮಾಡುವುದು ಕಂಡು ಬಂತು. ಕೊರೊನಾ ನಂತರದ ಬದುಕು ಸಹಜ ಸ್ಥಿತಿಗೆ ಬರಲು ಇನ್ನೂ ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ ಎನ್ನುವುದನ್ನು ನಾಲ್ಕು ದಿನ ನಿದರ್ಶನ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ