ಬ್ರೋಕರ್ ಹಾವಳಿಗೆ ಬೆಚ್ಚಿದ ಜನ
ನೀವು ವಿದ್ಯಾವಂತರೇ ಆಗಿದ್ದರೂ ಸರಿ. ರಿಜಿಸ್ಪ್ರೇಷನ್, ಡಿಎಲ್, ವಿಮೆ, ವಾಹನ ತಪಾಸಣೆ, ರಿನಿವಲ್, ಹೀಗೆ ಏನೇ ಕೆಲಸ ಆಗಬೇಕಾದರೂ ಬ್ರೋಕರ್ ಸಂಪರ್ಕ ಮಾಡಲೇಬೇಕು. ಇಲ್ದೇ ಹೋದರೆ ನಿಮ್ಮ ಯಾವುದೇ ಕೆಲಸ ಆಗಲ್ಲ.
Vijaya Karnataka 26 May 2019, 5:00 am
ನಂದೀಶ್ ಭದ್ರಾವತಿ ದಾವಣಗೆರೆ
ನೀವು ವಿದ್ಯಾವಂತರೇ ಆಗಿದ್ದರೂ ಸರಿ. ರಿಜಿಸ್ಪ್ರೇಷನ್, ಡಿಎಲ್, ವಿಮೆ, ವಾಹನ ತಪಾಸಣೆ, ರಿನಿವಲ್, ಹೀಗೆ ಏನೇ ಕೆಲಸ ಆಗಬೇಕಾದರೂ ಬ್ರೋಕರ್ ಸಂಪರ್ಕ ಮಾಡಲೇಬೇಕು. ಇಲ್ದೇ ಹೋದರೆ ನಿಮ್ಮ ಯಾವುದೇ ಕೆಲಸ ಆಗಲ್ಲ.
ಹೌದು, ನೀವು ನಗರದ ಕೊಂಡಜ್ಜಿ ರಸ್ತೆಯ ಆರ್ಟಿಒ ಕಚೇರಿ ಕಾಂಪೌಂಡ್ ಒಳ ಹೊಕ್ಕರೆ ಸಾಕು. ಬ್ರೋಕರ್ಗಳು ನಿಮ್ಮನ್ನು ಅಡ್ಡಗಟ್ಟುತ್ತಾರೆ. 'ಏನು ಕೆಲಸ ಆಗಬೇಕು, ನಮ್ಮ ಕಮಿಷನ್ ಇಷ್ಟು, ಕೊಟ್ಟರೆ ತಕ್ಷಣ ನಿಮ್ಮ ಕೆಲಸ ಆಗುತ್ತದೆ 'ಎಂದು ಮುಗಿ ಬೀಳುತ್ತಾರೆ. ಹಾಗೇ ಅವರು ಹೇಳಿದಂಗೆ ಕೆಲಸಗಳೂ ಸಲೀಸಾಗಿ ಮುಗಿದು ಹೋಗುತ್ತವೆ. ಆದರೆ ಒಬ್ಬನೇ ಹೋದರೆ ಇಲ್ಲಿನ ಸಿಬ್ಬಂದಿ ನಿಮಗೆ ಸತಾಯಿಸುತ್ತಾರೆ.
ಕೆಲಸ ಆಗೋದಿಲ್ಲ :
ಆರ್ಟಿಒ ಕಚೇರಿಗೆ ದಿನಕ್ಕೆ ನೂರಾರು ಜನ ಬರುತ್ತಾರೆ. ಹಲವರು ಎಲ್ಎಲ್ಆರ್, ಡಿಯಲ್ ಟೇಸ್ಟಿಂಗ್ಗೆ ಬರುತ್ತಿದ್ದು, ಹೆಚ್ಚಿನವರು ಬ್ರೋಕರ್ಸ್ ಕಡೆಯವರೇ ಆಗಿರುತ್ತಾರೆ. ಮಧ್ಯವರ್ತಿಗಳು ಇವರ ಫೈಲ್ ಆರ್ಟಿಒ ಸಿಬ್ಬಂದಿಗೆ ನೀಡುತ್ತಾರೆ. ಫೈಲ್ ಮೇಲೆ ಇರುವ ಹೆಸರನ್ನು ನೋಡಿ ಸಿಬ್ಬಂದಿ ತಕ್ಷಣ ಕೆಲಸ ಮಾಡಿಕೊಡುತ್ತಾರೆ. ಅದೇ ಸಾಮಾನ್ಯ ವ್ಯಕ್ತಿ ಹೋದರೆ ದಿನಗಟ್ಟಲೇ ಕಾಯಬೇಕು.
ಆನ್ಲೈನ್ ವರದಾನ :
ಸರಕಾರ ಎಲ್ಲ ಕೆಲಸಗಳನ್ನು ಆನ್ ಲೈನ್ನಲ್ಲಿ ವ್ಯವಸ್ಥೆ ಮಾಡಿದೆ. ಆದರೆ ಅನೇಕರಿಗೆ ಈಬಗ್ಗೆ ಜಾಗೃತಿ ಇಲ್ಲ, ಸಮಯವೂ ಇಲ್ಲ. ಇದನ್ನೇ ಬ್ರೋಕರ್ಸ್ ಬಂಡವಾಳ ಮಾಡಿಕೊಂಡಿದ್ದಾರೆ. ಅದರಲ್ಲೂ ಹಳ್ಳಿಗರು ಹೋದರೆ ಸಖತ್ ಹಣ ಪೀಕುತ್ತಾರೆ. ಇಡೀ ಆರ್ಟಿಒ ಕಚೇರಿಯಲ್ಲಿ ಅಂದಾಜು 20ಕ್ಕೂ ಹೆಚ್ಚು ಮಧ್ಯವರ್ತಿಗಳಿಂದ ತುಂಬಿದ್ದು, ಒಬ್ಬೊಬ್ಬರ ಕೈಯಲ್ಲಿ ಐದಕ್ಕೂ ಹೆಚ್ಚು ಖಾಕಿ ಫೈಲ್ಗಳು ಇರುತ್ತದೆ. ಇವರ ಮೂಲಕ ಇಲ್ಲಿನ ಸಿಬ್ಬಂದಿ ಕೆಲಸ ಮಾಡಿಕೊಡುತ್ತಾರೆ. ಈ ಬಗ್ಗೆ ಆರ್ಟಿಒ ಅಧಿಕಾರಿಗಳಿಗೆ ಕೇಳಿದರೆ ನಮ್ಮಲ್ಲಿ ಯಾರು ಮಧ್ಯವರ್ತಿಗಳು ಇಲ್ಲ. ಅವರೆಲ್ಲಾ ಶೋರೋಂ ಏಜೆಂಟರು ಎನ್ನುತ್ತಾರೆ.
ಎಲ್ಲ ಗೇಟ್ ಓಪನ್ :
ಮಧ್ಯವರ್ತಿಗಳಿಗೆ ಸಹಾಯವಾಗಲು ಕೆಳಗಿನ ಎಲ್ಲ ಗೇಟ್ ತೆರೆಯಲಾಗಿದೆ. ಈ ಗೇಟ್ಗಳಲ್ಲಿ ಎಲ್ಲರೂ ಓಡಾಡುತ್ತಾರೆ. ಈ ಗೇಟ್ ಮುಖಾಂತರ ಏಜೆಂಟರು ಆರ್ಟಿಒ ಸಿಬ್ಬಂದಿಯನ್ನು ಫೈಲ್ ಇಟ್ಟುಕೊಂಡು ಸಂಪರ್ಕಿಸುತ್ತಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮಿಕಾಂತ್ ನಲ್ವಾರ್ ಕಚೇರಿ ಮುಂಬಾಗಿಲು ಮಾತ್ರ ಬಂದ್ ಆಗಿದ್ದರೆ, ಹಿಂದಿನ ಬಾಗಿಲು ಓಪನ್ ಆಗಿರುತ್ತದೆ. ಹಿಂದಿನ ಬಾಗಿಲಿಂದ ಓಡಾಡುವ ಬ್ರೋಕರ್ ಸುಲಭವಾಗಿ ಕೆಲಸ ಮಾಡಿಕೊಂಡು ಬರುತ್ತಾರೆ ಎಂಬುದು ಸಾರ್ವಜನಿಕರ ಆರೋಪ.
ಹಿಂದಿನ ಆರ್ಟಿಒ :
ಇಲ್ಲಿನ ಡ್ರೈವಿಂಗ್ ಸ್ಕೂಲ್ ಸೇರಿದಂತೆ ವಾಹನ ಶೋರೋಂ ಏಜೆಂಟರಿಗೆ ಈ ಹಿಂದಿನ ಅಧಿಕಾರಿ ವಿ.ಜಿ.ಶ್ರೀನಿವಾಸಯ್ಯ ಮೊದಲ ಬಾರಿಗೆ ಐಡಿ ಕಾರ್ಡ್, ಯೂನಿಫಾರಂ ಕಡ್ಡಾಯಗೊಳಿಸಿದ್ದರು. ಆಗ ಎಲ್ಲ ಗೇಟ್ಗಳಿಗೆ ಬೀಗ ಜಡಿಸಿದ್ದರು. ಆದರೆ ಈಗ ಎಲ್ಲವೂ ಬದಲಾವಣೆಯಾಗಿದೆ.
ಸಿಸಿ ಟಿವಿ ಪ್ರಯೋಜನವಿಲ್ಲ :
ಕೆಲ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಟಿವಿ ಇದ್ದೂ, ಮಧ್ಯವರ್ತಿಗಳು ಓಡಾಡುವುದು ಆರ್ಟಿಓ ಕಣ್ಣಿಗೆ ಬಿದ್ದಿಲ್ಲ. ಮಧ್ಯವರ್ತಿ ಯಾರು ಎಂದು ಕಂಡುಹಿಡಿಯೋದು ಹೇಗೆ ಎಂಬ ಪ್ರಶ್ನೆ ಇಟ್ಟಿದ್ದಾರೆ. ಇನ್ನಾದರೂ ಮೇಲಧಿಕಾರಿಗಳು ಬ್ರೋಕರ್ ಮುಕ್ತ ಕಚೇರಿ ಮಾಡುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
ಸಿಬ್ಬಂದಿ ಕೊರತೆ :
ಆರ್ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದ್ದವರಿಗೆ ಹೆಚ್ಚಿನ ಕೆಲಸದ ಒತ್ತಡ ಇದೆ. ಈ ನಡುವೆಯೂ ಹೆಚ್ಚಿನ ಕಾರ್ಯಭಾರ ಕೆಲ ಸಿಬ್ಬಂದಿ ಹೊತ್ತಿದ್ದಾರೆ. ಸರಕಾರ ಅಗತ್ಯ ಸಿಬ್ಬಂದಿ ನೇಮಿಸಬೇಕೆಂಬದು ಸಾರ್ವಜನಿಕರ ಒತ್ತಾಯ.
ನಮ್ಮ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಇನ್ನೊಂದು ವಾರದೊಳಗೆ ಕಡಿವಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ.
- ಲಕ್ಷ್ಮೇಕಾಂತ್ ಬಿ. ನಲ್ವಾರ್, ಆರ್ಟಿಒ
ನೀವು ವಿದ್ಯಾವಂತರೇ ಆಗಿದ್ದರೂ ಸರಿ. ರಿಜಿಸ್ಪ್ರೇಷನ್, ಡಿಎಲ್, ವಿಮೆ, ವಾಹನ ತಪಾಸಣೆ, ರಿನಿವಲ್, ಹೀಗೆ ಏನೇ ಕೆಲಸ ಆಗಬೇಕಾದರೂ ಬ್ರೋಕರ್ ಸಂಪರ್ಕ ಮಾಡಲೇಬೇಕು. ಇಲ್ದೇ ಹೋದರೆ ನಿಮ್ಮ ಯಾವುದೇ ಕೆಲಸ ಆಗಲ್ಲ.
ಹೌದು, ನೀವು ನಗರದ ಕೊಂಡಜ್ಜಿ ರಸ್ತೆಯ ಆರ್ಟಿಒ ಕಚೇರಿ ಕಾಂಪೌಂಡ್ ಒಳ ಹೊಕ್ಕರೆ ಸಾಕು. ಬ್ರೋಕರ್ಗಳು ನಿಮ್ಮನ್ನು ಅಡ್ಡಗಟ್ಟುತ್ತಾರೆ. 'ಏನು ಕೆಲಸ ಆಗಬೇಕು, ನಮ್ಮ ಕಮಿಷನ್ ಇಷ್ಟು, ಕೊಟ್ಟರೆ ತಕ್ಷಣ ನಿಮ್ಮ ಕೆಲಸ ಆಗುತ್ತದೆ 'ಎಂದು ಮುಗಿ ಬೀಳುತ್ತಾರೆ. ಹಾಗೇ ಅವರು ಹೇಳಿದಂಗೆ ಕೆಲಸಗಳೂ ಸಲೀಸಾಗಿ ಮುಗಿದು ಹೋಗುತ್ತವೆ. ಆದರೆ ಒಬ್ಬನೇ ಹೋದರೆ ಇಲ್ಲಿನ ಸಿಬ್ಬಂದಿ ನಿಮಗೆ ಸತಾಯಿಸುತ್ತಾರೆ.
ಕೆಲಸ ಆಗೋದಿಲ್ಲ :
ಆರ್ಟಿಒ ಕಚೇರಿಗೆ ದಿನಕ್ಕೆ ನೂರಾರು ಜನ ಬರುತ್ತಾರೆ. ಹಲವರು ಎಲ್ಎಲ್ಆರ್, ಡಿಯಲ್ ಟೇಸ್ಟಿಂಗ್ಗೆ ಬರುತ್ತಿದ್ದು, ಹೆಚ್ಚಿನವರು ಬ್ರೋಕರ್ಸ್ ಕಡೆಯವರೇ ಆಗಿರುತ್ತಾರೆ. ಮಧ್ಯವರ್ತಿಗಳು ಇವರ ಫೈಲ್ ಆರ್ಟಿಒ ಸಿಬ್ಬಂದಿಗೆ ನೀಡುತ್ತಾರೆ. ಫೈಲ್ ಮೇಲೆ ಇರುವ ಹೆಸರನ್ನು ನೋಡಿ ಸಿಬ್ಬಂದಿ ತಕ್ಷಣ ಕೆಲಸ ಮಾಡಿಕೊಡುತ್ತಾರೆ. ಅದೇ ಸಾಮಾನ್ಯ ವ್ಯಕ್ತಿ ಹೋದರೆ ದಿನಗಟ್ಟಲೇ ಕಾಯಬೇಕು.
ಆನ್ಲೈನ್ ವರದಾನ :
ಸರಕಾರ ಎಲ್ಲ ಕೆಲಸಗಳನ್ನು ಆನ್ ಲೈನ್ನಲ್ಲಿ ವ್ಯವಸ್ಥೆ ಮಾಡಿದೆ. ಆದರೆ ಅನೇಕರಿಗೆ ಈಬಗ್ಗೆ ಜಾಗೃತಿ ಇಲ್ಲ, ಸಮಯವೂ ಇಲ್ಲ. ಇದನ್ನೇ ಬ್ರೋಕರ್ಸ್ ಬಂಡವಾಳ ಮಾಡಿಕೊಂಡಿದ್ದಾರೆ. ಅದರಲ್ಲೂ ಹಳ್ಳಿಗರು ಹೋದರೆ ಸಖತ್ ಹಣ ಪೀಕುತ್ತಾರೆ. ಇಡೀ ಆರ್ಟಿಒ ಕಚೇರಿಯಲ್ಲಿ ಅಂದಾಜು 20ಕ್ಕೂ ಹೆಚ್ಚು ಮಧ್ಯವರ್ತಿಗಳಿಂದ ತುಂಬಿದ್ದು, ಒಬ್ಬೊಬ್ಬರ ಕೈಯಲ್ಲಿ ಐದಕ್ಕೂ ಹೆಚ್ಚು ಖಾಕಿ ಫೈಲ್ಗಳು ಇರುತ್ತದೆ. ಇವರ ಮೂಲಕ ಇಲ್ಲಿನ ಸಿಬ್ಬಂದಿ ಕೆಲಸ ಮಾಡಿಕೊಡುತ್ತಾರೆ. ಈ ಬಗ್ಗೆ ಆರ್ಟಿಒ ಅಧಿಕಾರಿಗಳಿಗೆ ಕೇಳಿದರೆ ನಮ್ಮಲ್ಲಿ ಯಾರು ಮಧ್ಯವರ್ತಿಗಳು ಇಲ್ಲ. ಅವರೆಲ್ಲಾ ಶೋರೋಂ ಏಜೆಂಟರು ಎನ್ನುತ್ತಾರೆ.
ಎಲ್ಲ ಗೇಟ್ ಓಪನ್ :
ಮಧ್ಯವರ್ತಿಗಳಿಗೆ ಸಹಾಯವಾಗಲು ಕೆಳಗಿನ ಎಲ್ಲ ಗೇಟ್ ತೆರೆಯಲಾಗಿದೆ. ಈ ಗೇಟ್ಗಳಲ್ಲಿ ಎಲ್ಲರೂ ಓಡಾಡುತ್ತಾರೆ. ಈ ಗೇಟ್ ಮುಖಾಂತರ ಏಜೆಂಟರು ಆರ್ಟಿಒ ಸಿಬ್ಬಂದಿಯನ್ನು ಫೈಲ್ ಇಟ್ಟುಕೊಂಡು ಸಂಪರ್ಕಿಸುತ್ತಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮಿಕಾಂತ್ ನಲ್ವಾರ್ ಕಚೇರಿ ಮುಂಬಾಗಿಲು ಮಾತ್ರ ಬಂದ್ ಆಗಿದ್ದರೆ, ಹಿಂದಿನ ಬಾಗಿಲು ಓಪನ್ ಆಗಿರುತ್ತದೆ. ಹಿಂದಿನ ಬಾಗಿಲಿಂದ ಓಡಾಡುವ ಬ್ರೋಕರ್ ಸುಲಭವಾಗಿ ಕೆಲಸ ಮಾಡಿಕೊಂಡು ಬರುತ್ತಾರೆ ಎಂಬುದು ಸಾರ್ವಜನಿಕರ ಆರೋಪ.
ಹಿಂದಿನ ಆರ್ಟಿಒ :
ಇಲ್ಲಿನ ಡ್ರೈವಿಂಗ್ ಸ್ಕೂಲ್ ಸೇರಿದಂತೆ ವಾಹನ ಶೋರೋಂ ಏಜೆಂಟರಿಗೆ ಈ ಹಿಂದಿನ ಅಧಿಕಾರಿ ವಿ.ಜಿ.ಶ್ರೀನಿವಾಸಯ್ಯ ಮೊದಲ ಬಾರಿಗೆ ಐಡಿ ಕಾರ್ಡ್, ಯೂನಿಫಾರಂ ಕಡ್ಡಾಯಗೊಳಿಸಿದ್ದರು. ಆಗ ಎಲ್ಲ ಗೇಟ್ಗಳಿಗೆ ಬೀಗ ಜಡಿಸಿದ್ದರು. ಆದರೆ ಈಗ ಎಲ್ಲವೂ ಬದಲಾವಣೆಯಾಗಿದೆ.
ಸಿಸಿ ಟಿವಿ ಪ್ರಯೋಜನವಿಲ್ಲ :
ಕೆಲ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಟಿವಿ ಇದ್ದೂ, ಮಧ್ಯವರ್ತಿಗಳು ಓಡಾಡುವುದು ಆರ್ಟಿಓ ಕಣ್ಣಿಗೆ ಬಿದ್ದಿಲ್ಲ. ಮಧ್ಯವರ್ತಿ ಯಾರು ಎಂದು ಕಂಡುಹಿಡಿಯೋದು ಹೇಗೆ ಎಂಬ ಪ್ರಶ್ನೆ ಇಟ್ಟಿದ್ದಾರೆ. ಇನ್ನಾದರೂ ಮೇಲಧಿಕಾರಿಗಳು ಬ್ರೋಕರ್ ಮುಕ್ತ ಕಚೇರಿ ಮಾಡುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.
ಸಿಬ್ಬಂದಿ ಕೊರತೆ :
ಆರ್ಟಿಒ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದ್ದವರಿಗೆ ಹೆಚ್ಚಿನ ಕೆಲಸದ ಒತ್ತಡ ಇದೆ. ಈ ನಡುವೆಯೂ ಹೆಚ್ಚಿನ ಕಾರ್ಯಭಾರ ಕೆಲ ಸಿಬ್ಬಂದಿ ಹೊತ್ತಿದ್ದಾರೆ. ಸರಕಾರ ಅಗತ್ಯ ಸಿಬ್ಬಂದಿ ನೇಮಿಸಬೇಕೆಂಬದು ಸಾರ್ವಜನಿಕರ ಒತ್ತಾಯ.
ನಮ್ಮ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಇನ್ನೊಂದು ವಾರದೊಳಗೆ ಕಡಿವಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ.
- ಲಕ್ಷ್ಮೇಕಾಂತ್ ಬಿ. ನಲ್ವಾರ್, ಆರ್ಟಿಒ