ಆ್ಯಪ್ನಗರ

ಮಳೆಗಾಗಿ ಪ್ರಾರ್ಥಿಸಿ ಈಶ್ವರನಿಗೆ ಮಕ್ಕಳಿಂದ ಪೂಜೆ

ಹರಿಹರ ತಾಲೂಕು ಧೂಳೆಹೊಳೆ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ, ಮಕ್ಕಳು ಹಾಗೂ ಗ್ರಾಮಸ್ಥರು ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಮಳೆ ಮಲ್ಲಪ್ಪನನ್ನು ಕರುಣಿಸುವಂತೆ ಕೋರಿದರು.

Vijaya Karnataka 4 Jun 2019, 5:00 am
ಮಲೆಬೆನ್ನೂರು : ಹರಿಹರ ತಾಲೂಕು ಧೂಳೆಹೊಳೆ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ, ಮಕ್ಕಳು ಹಾಗೂ ಗ್ರಾಮಸ್ಥರು ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಮಳೆ ಮಲ್ಲಪ್ಪನನ್ನು ಕರುಣಿಸುವಂತೆ ಕೋರಿದರು.
Vijaya Karnataka Web pray for rain and worship ishwar from children
ಮಳೆಗಾಗಿ ಪ್ರಾರ್ಥಿಸಿ ಈಶ್ವರನಿಗೆ ಮಕ್ಕಳಿಂದ ಪೂಜೆ


ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ 21 ಮಕ್ಕಳು, ಬಿಂದಿಗೆಯಲ್ಲಿ ಹೊಳೆ ನೀರು ಹೊತ್ತು ತಂದು ಸಾಲಾಗಿ ಬಂದು ಕರಿಗಲ್ಲಿಗೆ ಹಾಗೂ ಈಶ್ವರನಿಗೆ ಅಭಿಷೇಕ ಮಾಡುವ ಮೂಲಕ ಮಳೆಗಾಗಿ ಕೈಮುಗಿದು ಪ್ರಾರ್ಥಿಸಿದರು.

ಪುಟ್ಟ, ಪುಟ್ಟ ಮಕ್ಕಳು ವಿಭೂತಿ ಧರಿಸಿ, ತುಂಬಿದ ಬಿಂದಿಗೆಯಿಂದ ಈಶ್ವರನಿಗೆ ಗಂಗೆಯ ಅಭಿಷೇಕ ಮಾಡುತ್ತಿದ್ದ ದೃಶ್ಯ ಈಶ್ವರನನ್ನೂ ಮೆಚ್ಚಿಸುವಂತಿತ್ತು. ಈಶ್ವರನಿಗೆ ಮಕ್ಕಳು ಅಭಿಷೇಕ ಮಾಡಿದ ಬಳಿಕ ಗ್ರಾಮಸ್ಥರು, ಈಶ್ವರನಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ ನೆರವೇರಿಸಿದರು. ಗಂಟೆಗಳ ಸದ್ದು ಮೊಳಗಿಸಿ, ಮಹಾಮಂಗಳಾರತಿ ನೆರವೇರಿಸಿದರು.

ಜಗತ್ತು ಪ್ರಕೃತಿ ವಿಕೋಪದಿಂದ ಮಳೆಯಿಲ್ಲದೆ, ಬರದಿಂದ ತಾಂಡವವಾಡುತ್ತಿದೆ. ಇಂತಹ ಸಂದರ್ಭ ಬಂದಾಗ, ಈಶ್ವರನಿಗೆ ಮಕ್ಕಳಿಂದ ಗಂಗಾಭಿಷೇಕ ಮಾಡಿಸಿ, ವಿಶೇಷ ಪೂಜೆ ಮಾಡುತ್ತಿದ್ದರು. ಪರಮಾತ್ಮನ ಧ್ಯಾನದಿಂದ ಸಕಲವೂ ಸಿದ್ಧಿಸುತ್ತದೆ ಎಂಬುದು ನಮ್ಮ ಹಿರಿಯರ ಮತ್ತು ನಮ್ಮ ನಂಬಿಕೆಯಾಗಿದೆ. ಈ ಪದ್ಧತಿ ನಮ್ಮೂರಿನಲ್ಲಿ ಬಹಳ ಹಿಂದಿನಿಂದಲೂ ನಮ್ಮ ಹಿರಿಯರೂ ಆಚರಣೆ ಮಾಡಿಕೊಂಡು ಬಂದಿರುವ ಸಂಪ್ರದಾಯ. ಇದೇ ಸಂಪ್ರದಾಯವನ್ನು ನಾವು ಮುಂದುವರೆಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ