ಆ್ಯಪ್ನಗರ

ಮಳೆಗಾಗಿ ಪ್ರಾರ್ಥಿಸಿ ಕರಿಗಲ್ಲು ಪೂಜೆ

ಮಳೆಗಾಗಿ ಪ್ರಾರ್ಥಿಸಿ ಕರಿಗಲ್ಲು ಪೂಜೆ

Vijaya Karnataka 5 Jul 2018, 5:00 am
ಕಾರಿಗನೂರು : ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ಸಮೀಪದ ಕೈದಾಳೆ ಗ್ರಾಮದಲ್ಲಿ ಗ್ರಾಮದೇವರುಗಳ ಸಮಕ್ಷ ಮದಲ್ಲಿ ಮಂಗಳವಾರ ಕರಿಗಲ್ಲು ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಲಾಯಿತು.
Vijaya Karnataka Web pray for the rain and pray for rain
ಮಳೆಗಾಗಿ ಪ್ರಾರ್ಥಿಸಿ ಕರಿಗಲ್ಲು ಪೂಜೆ


ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅಪ್ಪಣೆ ಪಡೆದು, ಗ್ರಾಮಸ್ಥರು ಮೂರು ದಿನಗಳ ಕರಗಲ್ಲು ಪೂಜೆ, ಸೇವಾ ಕಾರ್ಯ ಆರಂಭಿಸಿದರು.

ಗ್ರಾಮದ ಕರಗಲ್ಲು ಸುತ್ತಲು ಸೆಗಣಿಯಿಂದ ಕಟ್ಟೆ ಕಟ್ಟಲಾಗುತ್ತದೆ. ನಂತರ ಹಾಲು, ತುಪ್ಪದಿಂದ ಕರಗಲ್ಲಿಗೆ ನೂರೊಂದು ಸಲ ಪೂಜೆ ಮಾಡಲಾಗುತ್ತದೆ. ಇಂದಿನಿಂದ ಮೂರು ದಿನಗಳ ಕಾಲ ಈ ರೀತಿ ಆಚರಣೆ ನಡೆಯುತ್ತದೆ.

ಇದು ಅನಾದಿಯಿಂದಲೂ ಇಲ್ಲಿ ನಡೆದುಕೊಂಡು ಬಂದಿದ್ದು, ಮಳೆ ಕೈಕೊಟ್ಟಾಗಲ್ಲೆಲ್ಲಾ ಶ್ರೀಸ್ವಾಮಿ ಅಪ್ಪಣೆ ಪಡೆದು, ಕರಗಲ್ಲುಗೆ ಹಾಲು, ತುಪ್ಪದ ಅಭಿಷೇಕ ಮಾಡುವ ಪದ್ಧತಿ ಇಲ್ಲಿ ನಡೆದುಕೊಂಡು ಬಂದಿದೆ ಎಂದು ಗ್ರಾಮದ ಭಕ್ತರೊಬ್ಬರು ತಿಳಿಸಿದರು.

10-12 ವರ್ಷ ಮಳೆ ಬಾರದಿದ್ದಾಗ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪಲ್ಲಕ್ಕಿ ಜತೆಗೆ ಈ ಸಲ ಕೊಂಬಿ ಮಲ್ಲಪ್ಪನ ಉತ್ಸವವೂ ನಡೆಯಿತು. ಗ್ರಾಮದ ಪ್ರತಿ ಮನೆಯಿಂದಲೂ ತಂದ ಹಾಲು, ತುಪ್ಪದಿಂದ ಕರಗಲ್ಲಿಗೆ ಪೂಜೆ ನಡೆಸಲಾಯಿತು. ಇಡೀ ಗ್ರಾಮಸ್ಥರು ಊರಿನಲ್ಲಿ ಸಂಚರಿಸುವಾಗ, ಪೂಜೆ, ಅಭಿಷೇಕ ಪ್ರದೇಶದಲ್ಲಿ ಸಾಗುವವರು ಯಾವುದೇ ಕಾರಣಕ್ಕೂ ಪಾದರಕ್ಷೆ ಧರಿಸುವಂತಿಲ್ಲ.

ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಸ್‌.ಎನ್‌. ಮಲ್ಲಿಕಾರ್ಜುನ, ಖಜಾಂಚಿ ಸಿ.ಕೃಷ್ಣಮೂರ್ತಿ, ವೈ.ಆರ್‌. ಮಲ್ಲಿಕಾರ್ಜುನ, ಗುರುಪ್ರಸಾದ, ರುದ್ರಸ್ವಾಮಿ, ಕೋಟೆ ಓಂಕಾರಪ್ಪ, ಮಲ್ಲಪ್ಪ, ಚಾಮರಾಜಪ್ಪ, ಬಸವರಾಜಪ್ಪ, ಗೌಡ್ರ ರಾಜಪ್ಪ, ಮುತ್ತು ರಾಜ, ಅರ್ಚಕರಾದ ಮಲ್ಲಪ್ಪ ಸೇರಿದಂತೆ ಗ್ರಾಮಸ್ಥರು ಈ ಆಚರಣೆಯಲ್ಲಿ ಭಾಗಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ