ಆ್ಯಪ್ನಗರ

ಜಿಲ್ಲೆಯ ಅಲ್ಲಲ್ಲಿ ಪುಷ್ಯಾ ಮಳೆ

ಎರಡು ದಿನದಿಂದ ಜಿಲ್ಲೆಯಲ್ಲಿ ಪೂರ್ಣ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ತುಂತುರು ಮಳೆ ಸುರಿಯುತ್ತಿದೆ. ಬಿತ್ತನೆ, ಬಿತ್ತಿದ ಮಳೆಗೆ ಹದ ಆಗುವಷ್ಟು ಮಳೆಯಿಲ್ಲವಾದರೂ ಆಗಾಗ ತುಂತುರು ಹನಿಯುತ್ತಿದ್ದು ದಾವಣಗೆರೆ ತಾಲೂಕಲ್ಲಿ ಅತಿ ಹೆಚ್ಚು ಎರಡು ದಿನದಿಂದ 13 ಮಿಮೀ ವರೆಗೂ ಮಳೆಯಾಗಿದೆ

Vijaya Karnataka 25 Jul 2019, 5:00 am
ದಾವಣಗೆರೆ : ಎರಡು ದಿನದಿಂದ ಜಿಲ್ಲೆಯಲ್ಲಿ ಪೂರ್ಣ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ತುಂತುರು ಮಳೆ ಸುರಿಯುತ್ತಿದೆ. ಬಿತ್ತನೆ, ಬಿತ್ತಿದ ಮಳೆಗೆ ಹದ ಆಗುವಷ್ಟು ಮಳೆಯಿಲ್ಲವಾದರೂ ಆಗಾಗ ತುಂತುರು ಹನಿಯುತ್ತಿದ್ದು ದಾವಣಗೆರೆ ತಾಲೂಕಲ್ಲಿ ಅತಿ ಹೆಚ್ಚು ಎರಡು ದಿನದಿಂದ 13 ಮಿಮೀ ವರೆಗೂ ಮಳೆಯಾಗಿದೆ.
Vijaya Karnataka Web pushya rains scattered throughout the district
ಜಿಲ್ಲೆಯ ಅಲ್ಲಲ್ಲಿ ಪುಷ್ಯಾ ಮಳೆ


ಬಂದೇ ಬರುತ್ತೇನೆ ಎಂದು ರೈತರಿಗೆ ಭರವಸೆ ನೀಡಿದ ಮಳೆ ಪುಷ್ಯಾ ಎಂಬುದು ಜನಪದರ ನಂಬಿಕೆ. ಪುಷ್ಯಾ ಮಳೆ ಆಗಾಗ ಸುರಿಯುತ್ತಿದೆಯಾದರೂ ಹದ ಮಳೆಗಾಗಿ ರೈತರು ಎದುರು ನೋಡುತ್ತಿದ್ದಾರೆ. ಇದೇ ಮಳೆ ಎಲ್ಲ ಕಡೆಯೂ ಸುರಿದರೆ ಕನಿಷ್ಟ ಬಾಡುತ್ತಿರುವ ಮೆಕ್ಕೆಜೋಳ ಬೆಳೆಗಾದರೂ ಅನುಕೂಲ ಆಗುತ್ತದೆ.

ಬುಧವಾರ ಬೆಳಗ್ಗೆಯಿಂದ ಮೋಡ ಮುಚ್ಚಿದ ವಾತಾವರಣವಿದ್ದು ಆಗಾಗ ತುಂತುರು ಮಳೆಯಾಗಿದೆ. ದಾವಣಗೆರೆ ತಾಲೂಕಲ್ಲಿ 10 ಮಿಮೀ, ಹರಿಹರ ತಾಲೂಕಲ್ಲೂ ಚದುರಿಂದಂತೆ ಮಳೆಯಾಗಿದ್ದು ಸರಾಸರಿ 6, ಹೊನ್ನಾಳಿ ತಾಲೂಕಿನ ಅಲ್ಲಲ್ಲಿ ಮಳೆಯಾಗಿದ್ದು ಕೆಲವೆಡೆ 9 ಮಿಮೀ, ಜಗಳೂರಿನ ಕೆಲ ಭಾಗದಲ್ಲಿ 6, ಚನ್ನಗಿರಿ ತಾಲೂಕಿನ ಅಲ್ಲಲ್ಲಿ 5 ಮಿಮೀವರೆಗೂ ಮಳೆ ಸುರಿದಿದೆ. ಜು.23ರ ಮಂಗಳವಾರವೂ ಅಲ್ಲಲ್ಲಿ ಮಳೆ ಸುರಿದಿದೆ. ದಾವಣಗೆರೆ ತಾಲೂಕಲ್ಲಿ 3, ಚನ್ನಗಿರಿ 6, ಹರಿಹರ 2, ಹೊನ್ನಾಳಿ 4, ಜಗಳೂರು ತಾಲೂಕಲ್ಲಿ 3 ಮಿಮೀ ಸುರಿದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ತಿಳಿಸಿದ್ದಾರೆ.

ವಾರ್ಡ್‌ ವೈಸ್‌ ಮಳೆ:
ಮಳೆಯ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವುದು ಜನರಲ್ಲಿ ಅಚ್ಚರಿ, ಆತಂಕ ಮೂಡಿಸಿದೆ. ಈ ಹಿಂದೆ ನಿಮ್ಮ ಊರು, ನಿಮ್ಮ ಕಡೆ ಮಳೆ ಆಗಿದೆಯಾ ಎಂದು ಕೇಳುವ ವಾಡಿಕೆಯಿತ್ತು. ಆದರೀಗ ನಿಮ್ಮ ವಾರ್ಡ್‌ನಲ್ಲಿ ಮಳೆ ಆಗಿದೆಯಾ ಎಂಬಷ್ಟು ಮಳೆ ಅನಿಶ್ಚಿತವಾಗಿ ಸುರಿಯುತ್ತಿದೆ. ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿ ಮಳೆ ಬಂದರೆ ಪಿಬಿ ರಸ್ತೆಯಲ್ಲಿ ಮಳೆಯಿಲ್ಲ ಎಂಬಷ್ಟು ಚದುರಿದಂತೆ ಮಳೆ ಸುರಿಯುತ್ತಿದೆ. ಈ ಊರಿಗೆ ಬಂದರೆ ನೂರಿನ್ನೂರು ಮೀಟರ್‌ ದೂರದ ಮತ್ತೊಂದು ಊರಿಗೇ ಮಳೆಯೇ ಇಲ್ಲ ಎಂಬಂತೆ ಚದುರಿ ಹೋಗಿದೆ ಎಂದು ಜನ ಹೇಳುವಂತಾಗಿದೆ.

ಇನ್ನು ಬೀಳುವ ಮಳೆಯ ಪ್ರಮಾಣವಂತೂ ಹೇಳುವುದೇ ಬೇಡ ಎಂಬಂತಾಗಿದೆ. ನಗರದ ಮಳೆ, ಟಾರ್‌ರೋಡ್‌ ಮಳೆ ಎಂದು ರೈತರು, ಹಳ್ಳಿ ಭಾಗದ ಜನ ಹೇಳುತ್ತಿದ್ದಾರೆ. ಈವರೆಗೂ ಇಡೀ ಭೂಮಿಯೇ ಹಸಿಯಾಗುವಂತೆ ಮಳೆ ಸುರಿದಿಲ್ಲ. ಮಳೆ ಚದುರುತ್ತಿರುವುದರ ಜತೆ ಪ್ರಮಾಣವೂ ಕಡಿಮೆ ಆಗುತ್ತಿದೆ. ಇನ್ನೊಂದೆಡೆ ಒಂದು ದಿನದಲ್ಲಿ ಕನಿಷ್ಟ 2 ಮಿಮೀ ಮಳೆ ಸುರಿದರೆ ಆದನ್ನು ಮಳೆ ದಿನಗಳಾಗಿ ತಾಂತ್ರಿಕವಾಗಿ ಪರಿಗಣಿಸಲಾಗುತ್ತದೆ. ಈಗ ಮಳೆ ದಿನಗಳು ಹೆಚ್ಚಿದ್ದರೂ ಒಟ್ಟು ಸೇರಿಸಿದರೆ ವಾಡಿಕೆ ಮಳೆಗಿಂತ ಅರ್ಧದಷ್ಟು ಕಡಿಮೆ ಆಗಿದೆ ಎಂದು ಅಂಕಿ ಸಂಖ್ಯೆಗಳು ಹೇಳುತ್ತಿವೆ.

ಎರಡು ದಿನದಿಂದ ಜಿಲ್ಲೆಯಲ್ಲಿ ಚದುರಿದಂತೆ ಮಳೆ ಆಗುತ್ತಿದೆ. ಭೂಮಿ ಹಸಿ ಆಗುವಷ್ಟು ಮಳೆಯಿಲ್ಲ, ಮಳೆಯ ಬಿರುಸು ಕೂಡ ಕಡಿಮೆ ಆಗಿದೆ.
- ಡಾ. ಶರಣಪ್ಪ ಮುದಗಲ್‌, ಕೃಷಿ ಜಂಟಿ ನಿರ್ದೇಶಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ