ಆ್ಯಪ್ನಗರ

ಅರ್ಚಕರ 6ನೇ ವೇತನ ಅನುದಾನ ಶೀಘ್ರ ಬಿಡುಗಡೆ

ರಾಜ್ಯದ ದೇವಸ್ಥಾನಗಳ ಅರ್ಚಕರ 5ನೇ ಆಯೋಗದ ಶಿಫಾರಸಿನಂತೆ ಈಗಾಗಲೇ ವೇತನ ನೀಡಲಾಗುತ್ತಿದ್ದು, ಶೀಘ್ರದಲ್ಲಿಯೇ 6ನೇ ಆಯೋಗದ ವೇತನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ತಿಳಿಸಿದರು

Vijaya Karnataka 20 Jun 2019, 5:00 am
ಹರಪನಹಳ್ಳಿ : ರಾಜ್ಯದ ದೇವಸ್ಥಾನಗಳ ಅರ್ಚಕರ 5ನೇ ಆಯೋಗದ ಶಿಫಾರಸಿನಂತೆ ಈಗಾಗಲೇ ವೇತನ ನೀಡಲಾಗುತ್ತಿದ್ದು, ಶೀಘ್ರದಲ್ಲಿಯೇ 6ನೇ ಆಯೋಗದ ವೇತನ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ತಿಳಿಸಿದರು
Vijaya Karnataka Web quick release of priests 6th pay grants
ಅರ್ಚಕರ 6ನೇ ವೇತನ ಅನುದಾನ ಶೀಘ್ರ ಬಿಡುಗಡೆ


ಪಟ್ಟಣದ ಗೋಕರ್ಣೇಶ್ವರ ಮತ್ತು ಕೋಟೆ ಆಂಜನೇಯಸ್ವಾಮಿ ದೇವಸ್ಥಾನಗಳಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.

ತಾಲೂಕಿನ ಐತಿಹಾಸಿಕ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಸ್ಥಾನ, ಕೂಲಹಳ್ಳಿ ಗ್ರಾಮದ ಗೋಣಿಬಸವೇಶ್ವರ, ಪಟ್ಟಣದ ಗೋಕರ್ಣೇಶ್ವರ ದೇವಸ್ಥಾನಗಳ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ತಹಸೀಲ್ದಾರ್‌ ಗ್ರೇಡ್‌ನ ಪ್ರತ್ಯೇಕ ಕಾರ್ಯನಿರ್ವಾಹಕ ಅಧಿಕಾರಿ ನೇಮಕ ಮಾಡಲಾಗುವುದು ಎಂದರು.

ಐತಿಹಾಸಿಕ ಗೋಕರ್ಣೇಶ್ವರ ದೇವಾಲಯ ಅಭಿವೃದ್ಧಿ ಮತ್ತು ಛಾವಣೆ ದುರಸ್ತಿಗಾಗಿ ಸುಮಾರು 20 ಲಕ್ಷ ರೂ. ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸುವಂತೆ ಹಾಗೂ ದೇವಾಲಯಕ್ಕೆ ಆರ್ಚಕರ ನೇಮಕ ಮಾಡಿಕೊಂಡು ಆದೇಶ ಪತ್ರ ವಿತರಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಮಹೇಶ್‌ಗೆ ಸೂಚಿಸಿದರು.

ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಂಬಂಧಿಸಿದಂತೆ ದೇವಾಲಯ ಸುತ್ತಲು ಕಾಂಪೌಂಡ್‌ ಮತ್ತು ಮೇಲ್ಛಾವಣೆ ನಿರ್ಮಾಣಕ್ಕೆ ದೇವಸ್ಥಾನದ ಉಳಿತಾಯ ನಿಧಿ 20 ಲಕ್ಷ ರೂ. ಮತ್ತು ಈಗಿರುವ ಕಾಣಿಕೆ ಹುಂಡಿ ಹಣ ಸೇರಿಕೊಂಡು ದೇವಾಲಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಅಂದಾಜು ಪಟ್ಟಿ ಸಲ್ಲಿಸುವಂತೆ ದೇವಾಲಯ ಸಮಿತಿ ಪದಾಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರ ಭಟ್‌, ಬಳ್ಳಾರಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವಯೋಗಿ, ಜಿಪಂ ಸದಸ್ಯ ಎಚ್‌.ಬಿ. ಪರುಶುರಾಮಪ್ಪ, ಮುಖಂಡರಾದ ಶಶಿಧರ ಪೂಜಾರ್‌, ಎಂ.ರಾಜಶೇಖರ್‌, ಪುರಸಭೆ ಮಾಜಿ ಅಧ್ಯಕ್ಷ ಎಚ್‌.ಕೆ. ಹಾಲೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಲೂರು ಅಂಜಪ್ಪ, ಎಂ.ಟಿ. ಬಸವನಗೌಡ, ಎನ್‌.ಮಜೀದ್‌, ಬಾಣದ ಅಂಜಿನಪ್ಪ, ಆರ್‌.ಜಾಕೀರ, ಪಟ್ನಾಮದ ನಾಗರಾಜ್‌, ಚಿರಸ್ತಹಳ್ಳಿ ಮರಿಯಪ್ಪ, ಪುರಸಭೆ ಸದಸ್ಯರಾದ ಎಸ್‌.ಜಾಕೀರ ಹುಸೇನ್‌, ಗೊಂಗಡಿ ನಾಗರಾಜ್‌, ಭರತೇಶ್‌, ಗಣೇಶ್‌, ತಹಸೀಲ್ದಾರ್‌ ಡಾ.ನಾಗವೇಣಿ, ಮುಖ್ಯಾಧಿಕಾರಿ ನಾಗರಾಜನಾಯ್ಕ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ