ಆ್ಯಪ್ನಗರ

ರಾಗಾ 4 ದಿನ ಮಧ್ಯ ಕರ್ನಾಟಕ ಪ್ರವಾಸ

ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರು 4 ದಿನಗಳ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು, ಮಧ್ಯ ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ. ಚಿತ್ರದುರ್ಗ ಜಿಲ್ಲೆಗಳಿಗೆ ಏಪ್ರಿಲ್‌ 3 ರಂದು ರೋೕಡ್‌ ಶೋ ಹಾಗೂ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.

Vijaya Karnataka 29 Mar 2018, 4:31 pm

ಹೊನ್ನಾಳಿ: ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರು 4 ದಿನಗಳ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದು, ಮಧ್ಯ ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ. ಚಿತ್ರದುರ್ಗ ಜಿಲ್ಲೆಗಳಿಗೆ ಏಪ್ರಿಲ್‌ 3 ರಂದು ರೋೕಡ್‌ ಶೋ ಹಾಗೂ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿಯವರು ಏ.3 ರಂದು ಶಿವಮೊಗ್ಗದಿಂದ ಹೊರಟು ಸವಳಂಗ, ನ್ಯಾಮತಿ ಮಾರ್ಗವಾಗಿ ಸುಮಾರು ಮಧ್ಯಾಹ್ನ 2 ಗಂಟೆಗೆ ಹೊನ್ನಾಳಿಗೆ ರೋಡ್‌ ಶೋ ಮೂಲಕ ಅಗಮಿಸಲಿದ್ದಾರೆ. ನಂತರ ಮಲೆಬೆನ್ನೂರು, ಹರಿಹರ ಮೂಲಕ ದಾವಣಗೆರೆಗೆ ತೆರಳುವರು ಎಂದು ಮಾಹಿತಿ ನೀಡಿದರು.

ರಾಹುಲ್‌ ಗಾಂಧಿಯವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್‌, ವೀಕ್ಷ ಕರಾದ ಮಧುಗೌಡ ಯಾಕ್ಷಿ, ವೇಣುಗೋಪಾಲ್‌, ಹೊನ್ನಾಳಿ ವಿಧಾನಸಭಾ ವೀಕ್ಷ ಕರಾದ ಶ್ರೀನಾಥ್‌ ಸೇರಿದಂತೆ ಪಕ್ಷ ದ ನಾನಾ ಹಂತಗಳ ಮುಖಂಡರು ಕೂಡ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹೊನ್ನಾಳಿ ಬ್ಲಾಕ್‌ ಕಾಂಗ್ರೆಸ್‌ ಅದ್ಯಕ್ಷ ಸಣ್ಣಕ್ಕಿ ಬಸವನಗೌಡ, ಮುಖಂಡರಾದ ಎಚ್‌.ಎ.ಗದ್ದಿಗೇಶ್‌, ಸೋಮಶೇಖರ್‌, ಎ.ಜಿ.ಪ್ರಕಾಶ್‌, ಎಚ್‌.ಎಂ. ಉಮಾಪತಿ, ಡಾ.ಎಲ್‌. ಈಶ್ವರನಾಯ್ಕ, ಬಿ.ಸಿದ್ದಪ್ಪ, ಪ್ರದೀಪ್‌ ಗೌಡ, ತಾಪಂ ಸದಸ್ಯ ಅಬೀದ್‌ ಆಲಿ ಖಾನ್‌, ವಿಜಯಕುಮಾರ್‌ ಇತರರು ಇದ್ದರು.

ಬಿಜೆಪಿಯವರು ಸಂಗ್ರಹ ಶೂರರು

ಕಳೆದ 15 ವರ್ಷಗಳ ಹಿಂದೆ ಬಿಜೆಪಿಯವರು ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಇಟ್ಟಿಗೆಗಳನ್ನು ಸಂಗ್ರಹಿಸಿದ್ದರು. ನಂತರ 10 ವರ್ಷಗಳ ಹಿಂದೆ ಸರ್ದಾರ್‌ ವಲ್ಲಬಾಯ್‌ ಪಟೇಲ್‌ರ ಪುತ್ಥಳಿ ನಿರ್ಮಾಣದ ಹೆಸರಿನಲ್ಲಿ ಜನರಿಂದ ಹಿತ್ತಾಳೆ, ಕಬ್ಬಿಣ ಲೋಹ ಸಂಗ್ರಹಣೆ ಮಾಡಿದ್ದರು. ಇದೀಗ ಮುಷ್ಟಿ ಅಕ್ಕಿ ಸಂಗ್ರಹಣೆ ಮಾಡುತ್ತಿದ್ದಾರೆ. ಇವರು ಕೇವಲ ಜನರಿಂದ ಸಂಗ್ರಹಣೆ ಮಾಡುವುದಷ್ಟೇ ಕಲಿತ್ತಿದ್ದಾರೆಯೇ ಹೊರತು ಬಡ ಜನರಿಗೆ ಯಾವುದೇ ಕೊಡುಗೆ ನೀಡುವುದನ್ನು ಕಲಿತಿಲ್ಲ ಎಂದು ಶಾಸಕ ಶಾಂತನಗೌಡ ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ