ಆ್ಯಪ್ನಗರ

ಪಡಿತರ ಅಕ್ಕಿ ವಶ: ಮೂವರ ಬಂಧನ

ಸ್ಥಳೀಯ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಶುಕ್ರವಾರ ಜಂಟಿ ದಾಳಿ ನಡೆಸಿ ತಾಲೂಕಿನ ದಿಡಗೂರು ಗ್ರಾಮದ ಸಮೀಪದ ಕೃಷ್ಣಪ್ಪ ನಗರದ ಮನೆಯೊಂದರಲ್ಲಿ ಸಂಗ್ರಹಿಸಿದ್ದ 46 ಕ್ವಿಂಟಾಲ್‌ ಪಡಿತರ ಅಕ್ಕಿ, ಬುಲೆರೊ ಪಿಕ್‌ಅಪ್‌ ವಾಹನ ವಶಪಡಿಸಿಕೊಂಡಿದ್ದಾರೆ. ಜತೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

Vijaya Karnataka 1 Dec 2018, 5:00 am
ಹೊನ್ನಾಳಿ: ಸ್ಥಳೀಯ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಶುಕ್ರವಾರ ಜಂಟಿ ದಾಳಿ ನಡೆಸಿ ತಾಲೂಕಿನ ದಿಡಗೂರು ಗ್ರಾಮದ ಸಮೀಪದ ಕೃಷ್ಣಪ್ಪ ನಗರದ ಮನೆಯೊಂದರಲ್ಲಿ ಸಂಗ್ರಹಿಸಿದ್ದ 46 ಕ್ವಿಂಟಾಲ್‌ ಪಡಿತರ ಅಕ್ಕಿ, ಬುಲೆರೊ ಪಿಕ್‌ಅಪ್‌ ವಾಹನ ವಶಪಡಿಸಿಕೊಂಡಿದ್ದಾರೆ. ಜತೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
Vijaya Karnataka Web rice seized three arrested
ಪಡಿತರ ಅಕ್ಕಿ ವಶ: ಮೂವರ ಬಂಧನ


ಖಚಿತ ಮಾಹಿತಿ ಪಡೆದ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆಪಡಿತರ ಅಕ್ಕಿ ಹಾಗೂ ಇತರ ಅಕ್ಕಿಯನ್ನು ಸಂಗ್ರಹಿಸುತ್ತಿದ್ದು, ಪತ್ತೆಯಾಗಿದೆ. 'ಪಡಿತರ ಅಕ್ಕಿ ಚೀಲದ ಮೇಲೆ ಎಫ್‌ಸಿಐ ಗವರ್ನಂಟ್‌ ಆಫ್‌ ಪಂಜಾಬ್‌ ಎಂದು ಪ್ರಿಂಟ್‌ ಆಗಿರುವ 50 ಕೆಜಿ ತೂಕದ 39 ಗೋಣಿ ಚೀಲಗಳು ಕೂಡ ಪತ್ತೆಯಾಗಿವೆ. ಆರೋಪಿಗಳಾದ ವಾಹನ ಚಾಲಕ ರವಿ, ಕಮ್ಮಾರಗಟ್ಟೆಯ ಸಂತೋಷ್‌ ಹಾಗೂ ಈಶ್ವರಪ್ಪರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಶಪಡಿಸಿಕೊಂಡ ಅಕ್ಕಿಯನ್ನು ಎಪಿಎಂಸಿ ಸುಪರ್ದಿಗೆ ನೀಡಲಾಗಿದೆ' ಎಂದು ಸಿಪಿಐ ಬ್ರಿಜೇಶ್‌ ಮ್ಯಾಥ್ಯೂ ತಿಳಿಸಿದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ