ಆ್ಯಪ್ನಗರ

ಅಜ್ಜಯ್ಯನ ಗುಡಿ ಸುತ್ತ ನದಿ ನೀರು

ಕಳೆದ ಎರಡು ದಿನಗಳಿಂದ ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ತುಂಗಾ ಡ್ಯಾನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಿದ ಹಿನ್ನೆಲೆ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ನದಿ ತೀರದ ಜಮೀನುಗಳು ಹಾಗೂ ತೋಟಗಳು ಜಲಾವೃತವಾಗಿವೆ. ಕರಿಬಸಜ್ಜಯ್ಯನ ದೇಗುಲದ ಸುತ್ತಲೂ ಮಂಗಳವಾರ ನೀರು ಆವರಿಸಿದ್ದು, ಅಪಾಯದ ಭೀತಿ ಎದುರಾಗಿದೆ.

Vijaya Karnataka 7 Aug 2019, 5:00 am
ಮಲೆಬೆನ್ನೂರು : ಕಳೆದ ಎರಡು ದಿನಗಳಿಂದ ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ತುಂಗಾ ಡ್ಯಾನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಿದ ಹಿನ್ನೆಲೆ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ನದಿ ತೀರದ ಜಮೀನುಗಳು ಹಾಗೂ ತೋಟಗಳು ಜಲಾವೃತವಾಗಿವೆ. ಕರಿಬಸಜ್ಜಯ್ಯನ ದೇಗುಲದ ಸುತ್ತಲೂ ಮಂಗಳವಾರ ನೀರು ಆವರಿಸಿದ್ದು, ಅಪಾಯದ ಭೀತಿ ಎದುರಾಗಿದೆ.
Vijaya Karnataka Web river water around ajjayyas hut
ಅಜ್ಜಯ್ಯನ ಗುಡಿ ಸುತ್ತ ನದಿ ನೀರು


ತುಂಗಭದ್ರಾ ನದಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಭಾರೀ ಪ್ರಮಾಣದ ಪ್ರವಾಹ ಬಂದ ಹಿನ್ನೆಲೆಯಲ್ಲಿ ತುಮ್ಮಿನಕಟ್ಟೆ ರಸ್ತೆ ಹಾಗೂ ಪತ್ತೇಪುರ ರಸ್ತೆಗಳ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಮೆಕ್ಕೆಜೋಳ, ಭತ್ತ, ತರಕಾರಿ ಬೆಳೆ, ತೆಂಗಿನ ತೋಟಗಳು, ಕೃಷಿ ಪಂಪ್‌ಸೆಟ್‌ಗಳು ಜಲಾವೃತಗೊಂಡಿದ್ದು, ಲಕ್ಷಾಂತರ ರೂ.ಹಾನಿಯಾಗಿದೆ ಎಂದು ರೈತರು ಗೋಳಿಡುತ್ತಿದ್ದಾರೆ.

ಶ್ರೀ ಕರಿಬಸವೇಶ್ವರ ಅಜ್ಜಯ್ಯನ ದೇವಾಲಯವನ್ನು ನದಿ ನೀರು ಸುತ್ತುವರಿದಿದ್ದು, ಇನ್ನೂ 8 ಮೆಟ್ಟಿಲುಗಳು ಮಾತ್ರ ಮುಳುಗಡೆಯಾಗಲು ಬಾಕಿ ಇವೆ. ನದಿ ಪಾತ್ರದಲ್ಲಿದ್ದ ಜವಳ ಮಂದಿರ ಹಾಗೂ ಸ್ನಾನ ಘಟ್ಟಗಳು ಮುಳುಗಡೆಯಾಗಿವೆ. ದೇವಾಲಯ ಎತ್ತರದ ಸ್ಥಳದಲ್ಲಿರುವುದರಿಂದ ನದಿ ಈ ಹಿಂದೆ ಅಪಾಯ ಮಟ್ಟ ಮೀರಿದಾಗಲೂ ಇದುವರೆಗೂ ನದಿ ನೀರು ದೇವಾಲಯ ಪ್ರವೇಶಿಸಿಲ್ಲ. ಅಪಾಯ ತಡೆಗಟ್ಟಲು ಭಕ್ತರು ನದಿಗೆ ಇಳಿಯದಂತೆ ಧ್ವನಿವರ್ಧಕದ ಮೂಲಕ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ರಸ್ತೆ ಕಡಿತ ಸಾಧ್ಯತೆ
ಇದೇ ರೀತಿ ಮಳೆ ಮುಂದುವರೆದರೆ, ಯಾವುದೇ ಕ್ಷ ಣದಲ್ಲಿ ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುವ ಸಾಧ್ಯತೆಯಿದ್ದು, ಉಕ್ಕಡಗಾತ್ರಿ- ಪತ್ತೇಪುರ ರಸ್ತೆ ಹಾಗೂ ಉಕ್ಕಡಗಾತ್ರಿ-ತುಮ್ಮಿನಕಟ್ಟೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ