ಆ್ಯಪ್ನಗರ

ಅಕ್ಕಿ ವ್ಯಾಪಾರಿಗೆ 15 ಲಕ್ಷ ರೂ. ವಂಚನೆ

ಅಹಮದಾಬಾದಿನ ವ್ಯಾಪಾರಿಯೊಬ್ಬ ದಾವಣಗೆರೆ ಅಕ್ಕಿ ವ್ಯಾಪಾರಿಯಿಂದ ಬರೋಬ್ಬರಿ 15 ಲಕ್ಷ ರೂ. ಮೌಲ್ಯದ ಅಕ್ಕಿ ಖರಿದೀಸಿ ಹಣ ನೀಡದೆ ತಲೆ ಮರೆಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 3 Dec 2018, 5:00 am
ದಾವಣಗೆರೆ : ಅಹಮದಾಬಾದಿನ ವ್ಯಾಪಾರಿಯೊಬ್ಬ ದಾವಣಗೆರೆ ಅಕ್ಕಿ ವ್ಯಾಪಾರಿಯಿಂದ ಬರೋಬ್ಬರಿ 15 ಲಕ್ಷ ರೂ. ಮೌಲ್ಯದ ಅಕ್ಕಿ ಖರಿದೀಸಿ ಹಣ ನೀಡದೆ ತಲೆ ಮರೆಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web rs 15 lakh for rice trader fraud
ಅಕ್ಕಿ ವ್ಯಾಪಾರಿಗೆ 15 ಲಕ್ಷ ರೂ. ವಂಚನೆ


ನಗರದ ಚೌಕಿಪೇಟೆಯಲ್ಲಿ ಸಂತೋಷ್‌ ಕಾರ್ಪೋರೇಷನ್‌ ಮರ್ಚೆಂಟ್‌ ಅಂಡ್‌ ಕಮೀಷನ್‌ ಏಜೆಂಟ್‌ ಅಂಗಡಿ ಮಾಲೀಕ ಎಂಸಿಸಿ ಬಿ ಬ್ಲಾಕ್‌ ನಿವಾಸಿ ಸಿ.ಸಿ.ಮುನಗೊಳ ಎಂಬವರಿಗೆ ನವೆಂಬರ್‌ ತಿಂಗಳಲ್ಲಿ ಜಗಬೀಶ್‌ ಜೋತಿರಾಮ್‌ ಎಂಬ ವ್ಯಕ್ತಿ ಫೋನ್‌ ಮಾಡಿ ಹಿಂದಿಯಲ್ಲಿ ಪರಿಚಯಿಸಿಕೊಂಡು ಅಕ್ಕಿ ದರ ಕೇಳಿದ್ದಾನೆ. ಆಗ ಮುನಗೊಳ ಅಕ್ಕಿ ದರ ಹೇಳಿದ್ದಾರೆ. ನಂತರ ಸ್ಯಾಂಪಲ್‌ ಅಕ್ಕಿ ಕಳುಹಿಸಲು ಹೇಳಿದ್ದಾನೆ. ಇದಕ್ಕೆ ಒಪ್ಪಿ ಕಳುಹಿಸಿದ್ದಾರೆ. ಇದಾದ ನಂತರ ಜ್ಯೋತಿರಾಮ್‌ ಒಂದು ಲೋಡ್‌ ಅಕ್ಕಿಗೆ ಬೇಡಿಕೆ ಇಟ್ಟಿದ್ದಾನೆ. ನಿಮ್ಮ ಸ್ಯಾಂಪಲ್‌ ಅಕ್ಕಿ ಒಪ್ಪಿಗೆಯಾಗಿದೆ. ನಾನು ನಿಮ್ಮ ವ್ಯಾಟ್ಸಾಪ್‌ಗೆ ಅಂಗಡಿ ವಿಳಾಸ ಕಳುಹಿಸಿದ್ದೇನೆ. ಆ ಅಂಗಡಿಗಳಿಗೆ 2 ಲೋಡ್‌ ಅಕ್ಕಿ ಕಳುಹಿಸಿ, ಹಣವನ್ನು ಆರ್‌.ಟಿ.ಜಿ.ಎಸ್‌ ಮೂಲಕ ಬ್ಯಾಂಕ್‌ ಖಾತೆಗೆ ಜಮಾ ಮಾಡುತ್ತೇನೆ ಎಂದು ತಿಳಿಸಿದ್ದಾನೆ.

ಈ ಮಾತು ನಂಬಿದ ಮುನಗೋಳ ಸೆ.24ಕ್ಕೆ ಸಾಯಿಬಾಬಾ ಲಾರಿ ಟ್ರಾನ್ಸ್‌ ಪೋರ್ಟ್‌ ಲಾರಿಗೆ 25 ಕೆ.ಜಿ ತೂಕದ 840 ಪ್ಯಾಕೇಟ್‌ ಅಕ್ಕಿಯನ್ನು ಮಿಲ್‌ನಿಂದ ಲೋಡ್‌ ಮಾಡಿಸಿದ್ದಾರೆ. ಡೀಸೆಲ್‌ಗೆ ಎಂದು ಚಾಲಕಗೆ 20 ಸಾವಿರ ನಗದು ಹಣ ನೀಡಿ ಒಟ್ಟು 7,77,000 ರೂ.ಗಳ ಅಕ್ಕಿ ಕಳುಹಿಸಿದ್ದಾರೆ. ಇದಾದ ಮೇಲೆ ಮತ್ತೊಂದು ಲೋಡ್‌ ಅಕ್ಕಿಗೆ ಬೇಡಿಕೆ ಬಂದಾಗ ಅದನ್ನೂ ಕೂಡ ಕಳುಹಿಸಿಕೊಟ್ಟಿದ್ದಾರೆ. ಹೀಗೆ ಎರಡು ಲಾರಿ ಅಕ್ಕಿ ಕಳುಹಿಸಿದ ಒಟ್ಟು ಮೊತ್ತ 15,23,084 ರೂ. ಆಗಿದೆ. ಅಕ್ಕಿ ತರಿಸಿಕೊಂಡ ಜಗಬೀಶ್‌ ನಂತರ ತಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ನಾಪತ್ತೆಯಾಗಿದ್ದಾರೆ. ಬಸವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ