ಆ್ಯಪ್ನಗರ

ಸಂತ ಸೇವಾಲಾಲರ ಜಯಂತ್ಯುತ್ಸವಕ್ಕೆ ಕ್ಷಣಗಣನೆ: ಶ್ರೀಕ್ಷೇತ್ರದಲ್ಲಿ ಲಂಬಾಣಿ ಮಾಲಾಧಾರಿಗಳ ಸಮಾಗಮ

ಸೂರಗೊಂಡನ ಕೊಪ್ಪದಲ್ಲಿ ಫೆಬ್ರವರಿ 14 ಮತ್ತು 15ರಂದು ಶ್ರೀ ಸೇವಾಲಾಲ್‌ ಹಾಗೂ ಶ್ರೀ ಮರಿಯಮ್ಮ ದೇವಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಲಕ್ಷಾಂತರ ಸಂಖ್ಯೆಯಲ್ಲಿಆಗಮಿಸುವ ಭಕ್ತರು ತಮ್ಮ ಹರಕೆಗಳನ್ನು ದೇವರಿಗೆ ಅರ್ಪಿಸಲಿದ್ದಾರೆ.

Vijaya Karnataka 13 Feb 2020, 5:14 pm
ದಾವಣಗೆರೆ: ಬಂಜಾರ ಸಮಾಜದ ಕುಲ ಗುರು ಸಂತ ಶ್ರೀ ಸೇವಾಲಾಲ್‌ ಮಹಾರಾಜರ ಜಯಂತ್ಯುತ್ಸವಕ್ಕೆ ನ್ಯಾಮತಿ ತಾಲೂಕಿನ ಶ್ರೀಕ್ಷೇತ್ರ ಸೂರಗೊಂಡನಕೊಪ್ಪ ಸಿದ್ಧಗೊಂಡಿದೆ. ಈಗಾಗಲೇ ನಾಡಿನ ನಾನಾ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಮಾಲಾಧಾರಿಗಳು ಪಾದಯಾತ್ರೆ ಮೂಲಕ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
Vijaya Karnataka Web sevalal
ಸಂತ ಸೇವಾಲಾಲರ ಜಯಂತ್ಯುತ್ಸವಕ್ಕೆ ಕ್ಷಣಗಣನೆ: ಶ್ರೀಕ್ಷೇತ್ರದಲ್ಲಿ ಲಂಬಾಣಿ ಮಾಲಾಧಾರಿಗಳ ಸಮಾಗಮ


ಫೆಬ್ರವರಿ 14ರಂದು ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಜಯಂತ್ಯುತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಡಿ.ಜಿ. ಶಾಂತನಗೌಡ, ಡಿ.ಬಿ. ಗಂಗಪ್ಪ, ಶಾರದಾಪೂರ‍್ಯ ನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್‌ ಸೇರಿದಂತೆ ನಾನಾ ಮುಖಂಡರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷ ರುದ್ರಪ್ಪ ಎಂ. ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾಲಾಧಾರಿಗಳು: ರಾಜ್ಯದ ನಾನಾ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಸೇರಿ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ವಿಶೇಷವಾಗಿ ಮಾಲಾಧಾರಿಗಳು ಪಾದಯಾತ್ರೆ ಮೂಲಕ ಆಗಮಿಸಿ ಪೂಜೆ ಸಲ್ಲಿಸಿ ಮಾಲಾ ವಿಸರ್ಜನೆ ಮಾಡಲಿದ್ದಾರೆ. ಫೆಬ್ರವರಿ 15 ರಂದು ಮಹಾ ಭೋಗ್‌ (ಹೋಮ) ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 14ರ ರಾತ್ರಿ ಮಾಲಾಧಾರಿಗಳು ಹಾಗೂ ಗಾಯಕರಿಂದ ಭಜನಾ ಕಾರ್ಯಕ್ರಮ ಕೂಡ ನಡೆಯಲಿದೆ.

ಸಾರ್ವಜನಿಕ ಕ್ಷಮೆಗೆ ಬಂಜಾರ ಸೇವಾಲಾಲ್‌ ಸೇನೆ ಆಗ್ರಹ

2 ಲಕ್ಷ ಭಕ್ತರ ಆಗಮನ: ಶ್ರೀ ಸೇವಾಲಾಲ್‌ ಜಯಂತ್ಯುತ್ಸವದಲ್ಲಿ ಭಾಗವಹಿಸಲು ರಾಜ್ಯದ ನಾನಾ ಮೂಲೆಗಳಿಂದ 2 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ದಾವಣಗೆರೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಾರಿಗೆ ವ್ಯವಸ್ಥೆ ಕೂಡ ಕಲ್ಪಿಸಿದೆ. ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಪೂರ್ವ ಸಿದ್ಧತೆ ಪರಿಶೀಲನೆ ಮಾಡಿದ್ದಾರೆ.

ಲಂಬಾಣಿಗರ ವಿಶಿಷ್ಟ ಹೋಳಿ

ನದಿ ತಟದಲ್ಲಿ ಪೂಜೆ: ಕಳೆದ ಮೂರು ದಿನಗಳಿಂದಲೂ ಮಾಲಾಧಾರಿಗಳು ತುಂಗಭದ್ರಾ ತಟದಲ್ಲಿ ಸ್ನಾನ, ಪೂಜೆ ಮಾಡುವ ದೃಶ್ಯಗಳು ಕಂಡು ಬರುತ್ತಿದ್ದು, ಲಾಲ್‌.. ಲಾಲ್‌.. ಸೇವಾಲಾಲ್‌ ಎಂಬ ಹಾಡುಗಳು ಎಲ್ಲೆಡೆ ಮೊಳಗುತ್ತಿದೆ. ಸೇವಾಲಾಲ್‌ರ ಕಥನಗಳನ್ನು ಹಾಡುವ ಮಾಲಾಧಾರಿಗಳ ಜತೆಗೆ ಸ್ಥಳೀಯ ಲಂಬಾಣಿಗರು ಜತೆಗೂಡಿ ಸಂತ ಸೇವಾಲಾಲ್‌ರ ಗುರುವಾಣಿಯನ್ನು ಜಪಿಸುತ್ತಿದ್ದಾರೆ.

ಸಾಧಕರಿಗೆ ಸಂತ ಸೇವಾಲಾಲ್‌ ಪ್ರಶಸ್ತಿ ಪ್ರದಾನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ