ಆ್ಯಪ್ನಗರ

ಭಾರತಿಯ ಸೈನಿಕರಿಗೆ ಸಲಾಂ...

ಪಾಕಿಸ್ತಾನ ಗಡಿರೇಖೆ ದಾಟಿ ವಾಯು ದಾಳಿ ನಡೆಸುವ ಮೂಲಕ ಕಾಶ್ಮೀರ ಕಣಿವೆಯಲ್ಲಿದ್ದ ಉಗ್ರರ ಅಡಗುತಾಣ ಧ್ವಂಸ, ಉಗ್ರರ ಹತ್ಯೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮಂಗಳವಾರ ವಿಜಯೋತ್ಸವ ಮೊಳಗಿತು. ನಗರದಲ್ಲಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಸೇರಿದಂತೆ ನಾನಾ ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಭಾರತೀಯ ಸೈನಿಕರಿಗೆ ಸಲಾಂ ಸಲ್ಲಿಸಿದರು.

Vijaya Karnataka 27 Feb 2019, 5:00 am
ದಾವಣಗೆರೆ : ಪಾಕಿಸ್ತಾನ ಗಡಿರೇಖೆ ದಾಟಿ ವಾಯು ದಾಳಿ ನಡೆಸುವ ಮೂಲಕ ಕಾಶ್ಮೀರ ಕಣಿವೆಯಲ್ಲಿದ್ದ ಉಗ್ರರ ಅಡಗುತಾಣ ಧ್ವಂಸ, ಉಗ್ರರ ಹತ್ಯೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮಂಗಳವಾರ ವಿಜಯೋತ್ಸವ ಮೊಳಗಿತು. ನಗರದಲ್ಲಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಸೇರಿದಂತೆ ನಾನಾ ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಭಾರತೀಯ ಸೈನಿಕರಿಗೆ ಸಲಾಂ ಸಲ್ಲಿಸಿದರು.
Vijaya Karnataka Web salaam to inidan soldgers
ಭಾರತಿಯ ಸೈನಿಕರಿಗೆ ಸಲಾಂ...


ವಾಯು ದಾಳಿ ನಡೆಸಿ ಉಗ್ರರ ಹುಟ್ಟಡಗಿಸಿದ ಸುದ್ದಿ ಹೊರ ಬೀಳುತ್ತಿದ್ದಂತೆ ನಗರದಲ್ಲೂ ವಿಜಯೋತ್ಸವಗಳು ಮೊಳಗಿದವು. ಇಲ್ಲಿನ ಜಯದೇವ ವೃತ್ತ, ಮಹಾನಗರ ಪಾಲಿಕೆ ಬಳಿ ನೆರೆದ ಕಾರ್ಯಕರ್ತರು ಪಟಾಕಿ ಸಿಡಿಸಿ ಸೈನಿಕರ ಪರ ಘೋಷಣೆ ಮೊಳಗಿಸಿದರು.

ಕಾಂಗ್ರೆಸ್‌:
ಮಹಾನಗರ ಪಾಲಿಕೆ ಬಳಿ ಜಮಾಯಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಭಾರತೀಯ ಸೈನ್ಯವನ್ನು ಬೆಂಬಲಿಸಿ ಘೋಷಣೆ ಮೊಳಗಿಸಿದರು. ಕಾರ್ಯಕರ್ತರು ಒಟ್ಟಾಗಿ ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಗಡಿ ನಿಯಂತ್ರಣ ರೇಖೆ ದಾಟಿದ ನಮ್ಮ ಸೈನಿಕರು ಉಗ್ರರ ಅಡಗು ತಾಣವನ್ನು ಧ್ವಂಸಗೊಳಿಸುವ ಮೂಲಕ ಪುಲ್ವಾಮಾ ಘಟನೆಗೆ ಪ್ರತಿಕಾರ ತೆಗೆದುಕೊಂಡಿದ್ದಾರೆ. ಭಾರತೀಯ ಸೈನಿಕರ ಜತೆ ನಾವು ಸದಾ ಇರುತ್ತೇವೆ ಎಂದು ನಿರಂತರ ಅವರ ಪರವಾಗಿ ಘೋಷಣೆ ಕೂಗಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಕೆ.ಚಮನ್‌ ಸಾಬ್‌, ಸದಸ್ಯ ಆರ್‌.ಶ್ರೀನಿವಾಸ್‌, ಪೂಜಾರ್‌ ಬಸವರಾಜ್‌, ಷೇಕ್‌ ಅಹ್ಮದ್‌, ಮಾಜಿ ಮೇಯರ್‌ ನಾಗರತ್ನಮ್ಮ, ನಗರಸಭೆ ಮಾಜಿ ಸದಸ್ಯ ಎ.ನಾಗರಾಜ್‌, ಬೆಲ್ಲದ್‌ ಶಂಕರ್‌, ತರಕಾರಿ ಚಂದ್ರಪ್ಪ, ಬಸವಾಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾಗರಾಜ್‌, ಮುಖಂಡರಾದ ಎಚ್‌.ಜಯಣ್ಣ, ಕೆ.ಸಿ.ಲಿಂಗರಾಜ್‌, ಎ.ಎಂ.ರಾಮಣ್ಣ, ಅಲಿ ರಹಮತ್‌, ಮೈನುದ್ದೀನ್‌, ಸದ್ದಾಂ, ಮುಜಾದ್‌, ಆಯಿಲ್‌ ರಾಜ್‌ ಇತರರು ಪಾಲ್ಗೊಂಡಿದ್ದರು.

ಬಿಜೆಪಿ: ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ರಕ್ಷಣಾ ಸಚಿವರು, ಸೇನಾ ಮುಖ್ಯಸ್ಥರ ಭಾವಚಿತ್ರ ಮತ್ತು ಪಕ್ಷದ ಬ್ಯಾನರ್‌ ಹಿಡಿದು ವಿಜಯೋತ್ಸವ ಆಚರಿಸಿದರು. ಭಾರತ ಸೈನಿಕರ ಪರ ಘೋಷಣೆ ಮೊಳಗಿಸಿದರು. ಸೈನಕರಿಗೆ ಸಲಾಂ ಸಲ್ಲಿಸಿ ನಿಮ್ಮ ಜತೆ ನಾವಿದ್ದೇವೆ ಎಂದು ಬೆಂಬಲ ಸೂಚಿಸಿದರು.

ಪಾಕಿಸ್ತಾನ ಗಡಿ ರೇಖೆ ದಾಟಿ ಒಳ ನುಗ್ಗಿದ ಭಾರತೀಯ ಸೇನೆ ಪುಲ್ವಾಮಾ ಘಟನೆಯ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಅಲ್ಲಿ ಉಗ್ರರು ನೆಲೆಗಳನ್ನು ಧ್ವಂಸಗೊಳಿಸಿದ್ದಾರೆ, ಪ್ರಮುಖ ಉಗ್ರರನ್ನು ಹತ್ಯೆ ಮಾಡುವ ಮೂಲಕ ಭಾರತದ ಶಕ್ತಿಯನ್ನು ತೋರಿಸಲಾಗಿದೆ. ಉಗ್ರರನ್ನು ಮತ್ತು ಉಗ್ರವಾದವನ್ನು ಪೂರ್ಣ ಮಟ್ಟ ಹಾಕಬೇಕು ಎಂದು ಘೋಷಣೆ ಮೊಳಗಿಸಿದರು.

ಶಾಸಕ ಎಸ್‌.ವಿ. ರಾಮಚಂದ್ರ, ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಮುಖಂಡರಾದ ಮುಕುಂದಪ್ಪ, ರಾಜಶೇಖರ್‌, ಶ್ರೀನಿವಾಸ್‌, ರಾಜನಹಳ್ಳಿ ಶಿವಕುಮಾರ್‌, ಗೋಣಪ್ಪ, ಕೆ.ಎಂ. ವೀರೇಶ್‌ ಪೈಲ್ವಾನ್‌, ಟಿಂಕರ್‌ ಮಂಜಣ್ಣ, ಧನಂಜಯ ಕಡ್ಲೇಬಾಳು, ಸರೋಜಮ್ಮ ದೀಕ್ಷಿತ್‌, ಸವಿತಾ ರವಿಕುಮಾರ್‌, ಮಂಜುಳಮ್ಮ, ಗೌತಮ್‌ ಜೈನ್‌, ಎಚ್‌.ಎಂ.ಶಿವಕುಮಾರ್‌, ರಮೇಶ್‌ ನಾಯ್ಕ, ಹೇಮಂತ್‌ ಕುಮಾರ್‌, ತರಕಾರಿ ಶಿವು, ಟಿಪ್ಪುಸುಲ್ತಾನ್‌ ಇತರರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಎಲ್ಲೆಲ್ಲೂ ಚರ್ಚೆ, ಸೈನಿಕರಿಗೆ ಸಲಾಂ
ಭಾರತೀಯ ಸೈನಿಕರು ಗಡಿ ದಾಟಿ ಮಾಡಿದ ದಾಳಿಯ ಚರ್ಚೆ ನಗರದ ಎಲ್ಲ ಕಡೆಯೂ ಕೇಳಿ ಬಂತು. ಇಲ್ಲಿನ ಹೋಟೆಲ್‌, ಬಸ್‌ನಿಲ್ದಾಣ, ವೃತ್ತ ಹೀಗೆ ನಾಲ್ಕು ಜನ ಸೇರುವ ಎಲ್ಲ ತಾಣಗಳಲ್ಲೂ ದಾಳಿಯದ್ದೇ ಚರ್ಚೆ ನಡೆಯುವುದು ಕಂಡು ಬಂತು. ಜತೆಗೆ ನಮ್ಮ ಸೈನಿಕರಿಗೆ ಎಲ್ಲರೂ ವೈಯಕ್ತಿವಾಗಿ ಅಭಿನಂದನೆ ಸಲ್ಲಿಸುವುದರ ಜತೆ ಗಡಿ ದಾಟಿ ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರನ್ನು ಉಡಾಯಿಸಿದ್ದಾರೆ, ಭಾರತೀಯರಾದ ನಾವು ಶಾಂತಿಗೂ ಬದ್ಧ, ಸಮರಕ್ಕೂ ಸಿದ್ಧ ಎಂಬ ಮಾತುಗಳು ಜನರ ನಡುವಿನ ಚರ್ಚೆಯಲ್ಲಿ ಹರಿದಾಡುವುದು ಕೇಳಿ ಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ