ಆ್ಯಪ್ನಗರ

ಘನ ತ್ಯಾಜ್ಯ ವಿಂಗಡಣೆಗೆ ಸೆಪ್ಟೆಂಬರ್‌ 1ರ ಗಡವು

ಕೇಂದ್ರ ಸರಕಾರದ ನಿಯಮಾವಳಿಯಂತೆ ಘನ ತ್ಯಾಜ್ಯ ವಿಲೇವಾರಿ ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೆಪ್ಟೆಂಬರ್‌ 1ರೊಳಗೆ ಪ್ರತಿ ಮನೆಯಲ್ಲಿ ಹಸಿ, ಒಣ ಕಸ ಹಾಗೂ ಹಾನಿಕಾರಕ ತ್ಯಾಜ್ಯವನ್ನು ವಿಂಗಡಣೆ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ-ಎಸ್‌ಎಲ್‌ಸಿ ಯ ಅಧ್ಯಕ್ಷ ಜಸ್ಟೀಸ್‌ ಸುಭಾಷ್‌ ಬಿ ಅಡಿ ತಿಳಿಸಿದರು.

Vijaya Karnataka 9 Aug 2019, 5:00 am
ದಾವಣಗೆರೆ : ಕೇಂದ್ರ ಸರಕಾರದ ನಿಯಮಾವಳಿಯಂತೆ ಘನ ತ್ಯಾಜ್ಯ ವಿಲೇವಾರಿ ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸೆಪ್ಟೆಂಬರ್‌ 1ರೊಳಗೆ ಪ್ರತಿ ಮನೆಯಲ್ಲಿ ಹಸಿ, ಒಣ ಕಸ ಹಾಗೂ ಹಾನಿಕಾರಕ ತ್ಯಾಜ್ಯವನ್ನು ವಿಂಗಡಣೆ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ-ಎಸ್‌ಎಲ್‌ಸಿ ಯ ಅಧ್ಯಕ್ಷ ಜಸ್ಟೀಸ್‌ ಸುಭಾಷ್‌ ಬಿ ಅಡಿ ತಿಳಿಸಿದರು.
Vijaya Karnataka Web september 1 deadline for solid waste sorting
ಘನ ತ್ಯಾಜ್ಯ ವಿಂಗಡಣೆಗೆ ಸೆಪ್ಟೆಂಬರ್‌ 1ರ ಗಡವು


ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಹಸಿ ಕಸದಿಂದ ಮನೆಯಲ್ಲಿಯೇ ಕಾಂಪೋಸ್ಟ್‌ ಗೊಬ್ಬರ ತಯಾರಿಸಬೇಕು. ನಗರದಲ್ಲಿ ಒಂದು ದಿನಕ್ಕೆ 178 ಮೆಟ್ರಿಕ್‌ ಟನ್‌ ಕಸ ಸಂಗ್ರಹವಾಗುತ್ತಿದ್ದು, 41 ವಾರ್ಡ್‌ಗಳ ಪೈಕಿ 32 ವಾರ್ಡ್‌ಗಳಲ್ಲಿ ಕಸವನ್ನು ಸಂಪೂರ್ಣವಾಗಿ ಬೇರ್ಪಡಿಸಲಾಗುತ್ತಿದೆ. ಉಳಿದ 9 ವಾರ್ಡ್‌ಗಳಲ್ಲಿ ಕಸ ಬೇರ್ಪಡಿಸಲಾಗುತ್ತಿಲ್ಲ. ನಗರದಲ್ಲಿ ಪ್ರತಿ ದಿನ ಒಟ್ಟು 178 ಟನ್‌ಗಳಷ್ಟು ಕಸ ಸಂಗ್ರಹಿಸಲಾಗುತ್ತಿದೆ ಎಂದರು.

ಹರಿಹರದಲ್ಲಿ 31 ವಾರ್ಡ್‌ಗಳ ಪೈಕಿ 7 ವಾರ್ಡ್‌, ಚನ್ನಗಿರಿಯಲ್ಲಿ 23 ವಾರ್ಡ್‌ಗಳ ಪೈಕಿ 12, ಮಲೆಬೆನ್ನೂರಿನಲ್ಲಿ 23 ವಾರ್ಡ್‌ಗಳ ಪೈಕಿ 5, ಹೊನ್ನಾಳಿಯಲ್ಲಿ 18 ವಾರ್ಡ್‌ಗಳ ಪೈಕಿ 7, ಜಗಳೂರಿನಲ್ಲಿ 18 ವಾರ್ಡ್‌ಗಳ ಪೈಕಿ 5 ವಾರ್ಡ್‌ಗಳಲ್ಲಿ ಸಂಪೂರ್ಣವಾಗಿ ಕಸ ಬೇರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ನಗರದ ಹೋಟೆಲ್‌ಗಳಲ್ಲಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್‌ನ ಬಳಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಧ್ಯಕ್ಷ ರು ಪ್ರತಿಕ್ರಿಯಿಸಿ, ಆಹಾರ ತಯಾರಿಕೆ ಪ್ಲಾಸ್ಟಿಕ್‌ ಬಳಕೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅಂತಹ ಹೋಟೆಲ್‌ಗಳನ್ನು ಗುರತಿಸಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ, ಜಿಪಂ ಸಿಇಒ ಎಚ್‌.ಬಸವರಾಜೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಮನೋಜ್‌ಕುಮಾರ್‌, ಪಾಲಿಕೆ ಆಯುಕ್ತ ಮಂಜುನಾಥ್‌ ಬಳ್ಳಾರಿ, ಜಿಲ್ಲಾ ಪರಿಸರ ಅಧಿಕಾರಿ ಕೊಟ್ರೇಶ್‌ ಸೇರಿ ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.

ದುಬಾರಿ ದಂಡ
ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು 2016ರ ಅನುಷ್ಠಾನ ಪರಿಶೀಲನೆ ಸಂಬಂಧ ಸಮರ್ಪಕವಾಗಿ ನಿಯಮಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಕಸ ವಿಲೇವಾರಿಯಲ್ಲಿ ಪ್ರಥಮ ಬಾರಿ ತಪ್ಪೆಸಗಿದರೆ 25 ಸಾವಿರ ರೂ., ಎರಡನೇ ಬಾರಿಯೂ ಪುನರಾವರ್ತನೆಯಾದಲ್ಲಿ 50 ಸಾವಿರ ರೂ. ಮುಂದುವರಿದಲ್ಲಿ ಅವರ ಪರವಾನಗಿಯನ್ನೇ ರದ್ದು ಪಡಿಸುವಂತಹ ಶಿಕ್ಷೆ ವಿಧಿಸುವಂತಹ ಕಾನೂನು ರೂಪಿಸಲಾಗುತ್ತಿದೆ ಎಂದು ಸುಭಾಷ್‌ ಬಿ.ಅಡಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ