ಆ್ಯಪ್ನಗರ

ಸರ್ವಿಸ್‌ ಮಾಡಿಸಿ ವಾಹನ ಸುಸ್ಥಿತಿಯಲ್ಲಿಡಿ

ನಾವು ಬಳಸುವ ಪ್ರತಿ ವಾಹನದ ಆಯಿಲ್‌ ಬದಲಾವಣೆ ಮತ್ತು ಸರ್ವಿಸ್‌ನ್ನು ನಿಯಮಿತವಾಗಿ ಮಾಡಿಸಿ ವಾಹನವನ್ನು ಸುಸ್ಥಿತಿಯಲ್ಲಿಡುವ ಮೂಲಕ ವಾಯು ಮಾಲಿನ್ಯ ನಿಯಂತ್ರಿಸಲು ಎಲ್ಲರೂ ಸಹಕರಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀಕಾಂತ ಭೀ ನಲ್ವಾರ್‌ ಕರೆ ನೀಡಿದರು.

Vijaya Karnataka 1 Dec 2018, 5:00 am
ದಾವಣಗೆರೆ: ನಾವು ಬಳಸುವ ಪ್ರತಿ ವಾಹನದ ಆಯಿಲ್‌ ಬದಲಾವಣೆ ಮತ್ತು ಸರ್ವಿಸ್‌ನ್ನು ನಿಯಮಿತವಾಗಿ ಮಾಡಿಸಿ ವಾಹನವನ್ನು ಸುಸ್ಥಿತಿಯಲ್ಲಿಡುವ ಮೂಲಕ ವಾಯು ಮಾಲಿನ್ಯ ನಿಯಂತ್ರಿಸಲು ಎಲ್ಲರೂ ಸಹಕರಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀಕಾಂತ ಭೀ ನಲ್ವಾರ್‌ ಕರೆ ನೀಡಿದರು.
Vijaya Karnataka Web serve and keep the vehicle safe
ಸರ್ವಿಸ್‌ ಮಾಡಿಸಿ ವಾಹನ ಸುಸ್ಥಿತಿಯಲ್ಲಿಡಿ


ಜಿಲ್ಲಾಡಳಿತ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ಸಹಯೋಗದಲ್ಲಿ ಶುಕ್ರವಾರ ಸಾರಿಗೆ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಸಮಾರೋಪ ಸಮಾರಂಭದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ನಿಯಮಿತವಾಗಿ ಆಯಿಲ್‌ ಬದಲಾವಣೆ ಹಾಗೂ ಏರ್‌, ಆಯಿಲ್‌ ಫಿಲ್ಟರ್‌, ಇಂಜೆಕ್ಟರ್‌ ಪರೀಕ್ಷೆ ಮಾಡಿಸಬೇಕು. ಹೀಗೆ ವಾಹನ 5 ಸಾವಿರ ಕಿಮೀ, 10 ಮತ್ತು 15 ಸಾವಿರ ಕಿಮೀ ಓಡಿದಾಗ ಮಾಡಿಸಬೇಕಾದ ಸರ್ವಿಸ್‌ಗಳನ್ನು ನಿಯಮಿತವಾಗಿ ಮಾಡಿಸಿದಲ್ಲಿ ವಾಯು ಮಾಲಿನ್ಯ ನಿಯಂತ್ರಿಸಬಹುದು. ಇಂಧನ ಸಂಪೂರ್ಣವಾಗಿ ಉರಿಯದಿದ್ದರೆ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಇಂಜಿನ್‌ನ್ನು ಸುಸ್ಥಿತಿಯಲ್ಲಿಡಬೇಕು ಎಂದರು.

ಎಮಿಷನ್‌ ಟೆಸ್ಟ್‌ ಸರ್ಟಿಫಿಕೇಟ್‌(ವಾಯು ಮಾಲಿನ್ಯ ಪತ್ರ) ಇಲ್ಲದೇ ವಾಹನ ವಿಮೆ ನೀಡುವುದಿಲ್ಲ. ಲೈಸನ್ಸ್‌ ಇಲ್ಲದೇ ವಾಹನ ಓಡಿಸಿದರೆ ಮೊದಲ ಬಾರಿಗೆ 1500 ರೂ. ಹಾಗೂ ಅದನ್ನೇ ಮುಂದುವರೆಸಿದರೆ ಪರವಾನಗಿ ರದ್ದು ಪಡಿಸಲಾಗುವುದು. ಎಮಿಷನ್‌ ಟೆಸ್ಟ್‌ ಇಲ್ಲದಿದ್ದರೆ ಮೊದಲ ಬಾರಿಗೆ 1000 ರೂ. ದಂಡ, ಎರಡನೇ ಬಾರಿಗೆ 2000 ರೂ. ದಂಡ ವಿಧಿಸಲಾಗುತ್ತದೆ ಎಂದರು.

ನಿವೃತ್ತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಪಿ. ನಾಗೇಂದ್ರ ಮಾತನಾಡಿ, ಅಮೃತಬಳ್ಳಿ, ಬಳಿ ಎಕ್ಕೆ, ತುಳಸಿ, ಬಿಲ್ವಪತ್ರೆ, ಅರಳೀಮರ, ಬೇವಿನ ಮರ, ನೇರಳೆ ಮರ, ಬೆಟ್ಟದ ನೆಲ್ಲಿ ಇಂತಹ ಮರಗಳಲ್ಲಿ ಔಷಧೀಯ ಗುಣ ಯಥೇಚ್ಛವಾಗಿದೆ. ಇಂತಹ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸಬೇಕು ಎಂದು ಹೇಳಿದರು.

ಸೈಕಲ್‌ ಹೆಚ್ಚು ಬಳಸಿ:

ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಎಸ್‌.ಮಂಜುನಾಥ್‌ ಮಾತನಾಡಿ, ಖಾಸಗಿ ಬಸ್‌ಗಳ ಮಾಲೀಕರು ಕೂಡ ಪ್ರತಿ ಆರು ತಿಂಗಳಿಗೊಮ್ಮೆ ವಾಯು ಮಾಲಿನ್ಯ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸುತ್ತಿದ್ದಾರೆ. ಸೈಕಲ್‌ ಬಳಕೆ ಹೆಚ್ಚು ಮಾಡಬೇಕು. ವಿದ್ಯಾರ್ಥಿಗಳೂ ಕೂಡ ಮೋಟಾರು ವಾಹನ ಬಳಸದೇ ಸೈಕಲ್‌ನ್ನು ಬಳಸಬೇಕೆಂದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್‌.ಪಿ.ಎಸ್‌ ನಗರದ ವಿಜ್ಞಾನ ಶಿಕ್ಷ ಕ ಸಿ.ನಾಗರಾಜ, ಅನಿಲ್‌ ಮಾಸೂರು, ಎಂ.ಸುರೇಶ್‌, ತಿಪ್ಪೇಶಪ್ಪ, ನಾಗರಾಜ ಇದ್ದರು.

-------

ಕೋಟ್‌...

ಗ್ಯಾರೇಜ್‌ಗಳಲ್ಲಿ ಬದಲಾವಣೆ ಮಾಡಿದ ವೇಸ್ಟ್‌ ಆಯಿಲ್‌ನ್ನು ಚರಂಡಿಗಳಲ್ಲಿ ಚೆಲ್ಲುತ್ತಿರುವುದು ಕಂಡು ಬಂದಿದೆ. ಹೀಗೆ ಮಾಡಿದರೆ ಮತ್ತೆ ಪರಿಸರ ಮಲೀನವಾಗುತ್ತದೆ. ಈ ವೇಸ್ಟ್‌ ಆಯಿಲ್‌ ನಿರ್ವಹಣೆ ಕುರಿತು ಸಣ್ಣ ಪುಟ್ಟ ಗ್ಯಾರೇಜ್‌ನವರಿಗೆ ಕಾರ್ಯಾಗಾರ ಏರ್ಪಡಿಸುವ ಉದ್ದೇಶ ಹೊಂದಲಾಗಿದೆ.

- ಲಕ್ಷ್ಮೀಕಾಂತ ಭೀ ನಲ್ವಾರ್‌, ಆರ್‌ಟಿಓ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ